ಆ್ಯಪ್ನಗರ

ದೂರು ಪುನರ್‌ ಪರಿಶೀಲನೆ: ತಹಸೀಲ್ದಾರ್‌ಗೆ ಮನವಿ

ದತ್ತ ಜಯಂತಿಗೆ ಅಡ್ಡಿಪಡಿಸುವ ಹಾಗೂ ಕೋಮು ಗಲಭೆಗೆ ಪ್ರಚೋದನೆ ನೀಡುವ ದುರುದ್ದೇಶದಿಂದ ರಾಜ್ಯ ಬಜರಂಗದಳ ಸಂಯೋಜಕರ ಮೇಲೆ ಚಿಕ್ಕಮಗಳೂರು ಪೊಲೀಸ್‌ ಠಾಣೆಯಲ್ಲಿ ಕೋಮು ಸೌಹಾರ್ದ ವೇದಿಕೆ ದೂರು ದಾಖಲು ಮಾಡಿರುವುದನ್ನು ಪುನರ್‌ ಪರಿಶೀಲನೆ ಮಾಡುವಂತೆ ಒತ್ತಾಯಿಸಿ ತಾಲೂಕು ಬಜರಂಗದಳ ವೇದಿಕೆ ತಹಸೀಲ್ದಾರ್‌ ಬಿ.ಎ.ಮೋಹನ್‌ ಅವರಿಗೆ ಮನವಿ ನೀಡಲಾಯಿತು.

Vijaya Karnataka 16 Dec 2018, 3:19 pm
ದೊಡ್ಡಬಳ್ಳಾಪುರ: ದತ್ತ ಜಯಂತಿಗೆ ಅಡ್ಡಿಪಡಿಸುವ ಹಾಗೂ ಕೋಮು ಗಲಭೆಗೆ ಪ್ರಚೋದನೆ ನೀಡುವ ದುರುದ್ದೇಶದಿಂದ ರಾಜ್ಯ ಬಜರಂಗದಳ ಸಂಯೋಜಕರ ಮೇಲೆ ಚಿಕ್ಕಮಗಳೂರು ಪೊಲೀಸ್‌ ಠಾಣೆಯಲ್ಲಿ ಕೋಮು ಸೌಹಾರ್ದ ವೇದಿಕೆ ದೂರು ದಾಖಲು ಮಾಡಿರುವುದನ್ನು ಪುನರ್‌ ಪರಿಶೀಲನೆ ಮಾಡುವಂತೆ ಒತ್ತಾಯಿಸಿ ತಾಲೂಕು ಬಜರಂಗದಳ ವೇದಿಕೆ ತಹಸೀಲ್ದಾರ್‌ ಬಿ.ಎ.ಮೋಹನ್‌ ಅವರಿಗೆ ಮನವಿ ನೀಡಲಾಯಿತು.
Vijaya Karnataka Web datta jayanthi memorandum to tahasildar
ದೂರು ಪುನರ್‌ ಪರಿಶೀಲನೆ: ತಹಸೀಲ್ದಾರ್‌ಗೆ ಮನವಿ


ಈ ಸಂದರ್ಭದಲ್ಲಿ ಮನವಿ ಕುರಿತು ಮಾತನಾಡಿದ ಬಜರಂಗದಳ ಬೆಂಗ್ರಾ ಜಿಲ್ಲಾ ಸಂಚಾಲಕ ನರೇಶ್‌ರೆಡ್ಡಿ, ಅಲ್ಲಿನ ಬಜರಂಗ ದಳ ಪ್ರಾಂತ ಸಂಯೋಜಕರಾದ ಕೆ.ಆರ್‌.ಸುನಿಲ್‌, ರಘು ಸಕಲೇಶಪುರ ವಿರುದ್ಧ ದಂತಮಾಲಾ ಅಭಿಯಾನ, ಅನುಸೂಯ ಜಂತಿ, ದತ್ತ ಜಯಂತಿ, ಬೃಹತ್‌ ಶೋಭಾ ಯಾತ್ರೆ ಆಯೋಜನೆ ಆಗಿರುವ ಸಂದರ್ಭದಲ್ಲೆ ದೂರು ದಾಖಲು ಮಾಡಿರುವುದು ಸಾಕಷ್ಟು ಅನುಮಾನಗಳನ್ನು ಹುಟ್ಟಿಹಾಕಿದೆ. ಈ ಮೂಲಕ ಕೋಮುಗಲಭೆಗೆ ಪ್ರಚೋಧನೆ ನೀಡುವ ದುರುದ್ದೇಶದಿಂದ ದೂರು ದಾಖಲು ಮಾಡಿರುವ ಅವರು ಈ ನೆಲದ ಧಾರ್ಮಿಕ ಆಚರಣೆಗಳನ್ನು ಹತ್ತಿಕ್ಕುವಲ್ಲಿ ವ್ಯವಸ್ಥಿತವಾಗಿ ಪಿತೂರಿ ಮಾಡುತ್ತಿದ್ದಾರೆ. ಹೀಗಾಗಿ ದೂರನ್ನು ಪುನರ್‌ ಪರಿಶೀಲನೆ ನಡೆಸಬೇಕೆಂದು ರಾಜ್ಯದ ಡೈರೆಕ್ಟರ್‌ ಜನರಲ್‌ ಆಫ್‌ ಪೊಲೀಸ್‌ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಬಜರಂಗದಳದ ತಾಲೂಕು ಸಮಿತಿಯ ಪದಾಧಿಕಾರಿಗಳಾದ ಮಧು ಬೇಗ್ಲಿ, ಭಾಸ್ಕರ್‌, ಅರ್ಜುನ್‌ ವಿರಾಟ್‌, ಶಿವು ದೋಂತಿ, ಬಿಜೆಪಿ ಮಹಿಳಾ ಮೋರ್ಚ ನಗರಾಧ್ಯಕ್ಷೆ ಗಿರಿಜಾ ಮತ್ತು ತಾಲೂಕು ಸಮಿತಿ ಮುಖಂಡರು ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ