ಆ್ಯಪ್ನಗರ

ಹೋಟೆಲ್‌ ಸಂಪ್‌ನಲ್ಲಿ ಶವ: ಅದೇ ನೀರಲ್ಲಿ ಅಡುಗೆ

ದೇವನಹಳ್ಳಿ ಹೊಸ ಬಸ್‌ ನಿಲ್ದಾಣದ ಶಾಂತಿಸಾಗರ್‌ ಹೋಟೆಲ್‌ನ ಸಂಪ್‌ನಲ್ಲಿ ಅದೇ ಹೋಟೆಲ್‌ ಕಾರ್ಮಿಕನ ಶವ ಪತ್ತೆ.

ವಿಕ ಸುದ್ದಿಲೋಕ 30 Jun 2017, 12:01 pm

ದೇವನಹಳ್ಳಿ: ಪಟ್ಟಣದ ಹೊಸ ಬಸ್‌ ನಿಲ್ದಾಣದ ಶಾಂತಿಸಾಗರ್‌ ಹೋಟೆಲ್‌ನ ಸಂಪ್‌ನಲ್ಲಿ ಅದೇ ಹೋಟೆಲ್‌ ಕಾರ್ಮಿಕ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ಅದೇ ಸಂಪ್‌ ನೀರಿನಿಂದ ಹೋಟೆಲ್‌ನಲ್ಲಿ ಅಡುಗೆ ಮಾಡಲಾಗಿತ್ತು.

ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಕೃಷ್ಣ(35) ಮೃತಪಟ್ಟವರು. ಮೂಲತಃ ಮಾಲೂರು ತಾಲೂಕಿನ ಹುರುಳೀಗೆರೆ ಗ್ರಾಮದ ಅವರು ಕಳೆದ 4 ವರ್ಷಗಳ ಹಿಂದೆ ದೇವನಹಳ್ಳಿ ತಾಲೂಕಿನ ಬಿದಲೂರು ಗ್ರಾಮದ ಜಯಲಕ್ಷ್ಮೀ ಎಂಬಾಕೆಯನ್ನು ಮದುವೆಯಾಗಿ ಅದೇ ಗ್ರಾಮದಲ್ಲೇ ವಾಸವಾಗಿದ್ದರು.

Vijaya Karnataka Web dead body found in hotel sump
ಹೋಟೆಲ್‌ ಸಂಪ್‌ನಲ್ಲಿ ಶವ: ಅದೇ ನೀರಲ್ಲಿ ಅಡುಗೆ


15 ದಿನಗಳ ಹಿಂದಷ್ಟೇ ಹೋಟೆಲ್‌ನಲ್ಲಿ ಕ್ಲೀನಿಂಗ್‌ ಕೆಲಸಕ್ಕೆ ಸೇರಿದ್ದು ಬುಧವಾರ ಬೆಳಗ್ಗೆ ಹೋಟೆಲ್‌ನಲ್ಲಿ ಟಿಫನ್‌ ತಿಂದು ಹೋದವರು ಗುರುವಾರ ಮಧ್ಯಾಹ್ನ ಸಂಪ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಗ್ರಾಹಕರ ಆಕ್ರೋಶ

ಸಂಪ್‌ನಲ್ಲಿ ಶವ ಪತ್ತೆಯಾದ ವಿಚಾರ ತಿಳಿದ ಗ್ರಾಹಕರು, ಶವವಿದ್ದ ನೀರನ್ನೇ ಬಳಸಿ ಆಹಾರ ಪದಾರ್ಥ ತಯಾರಿಸಿ ನೀಡಿದ್ದೀರಿ, ಮಾಲೀಕರ ಬೇಜಾಬ್ದಾರಿಯಿಂದ ಇಂಥ ಅವಘಡ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ದೇವನಹಳ್ಳಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಸಾವಿನ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ