ಆ್ಯಪ್ನಗರ

ಅದ್ಧೂರಿಯಾಗಿ ನಡೆದ ಇತಿಹಾಸ ಪ್ರಸಿದ್ದ ದೇವನಹಳ್ಳಿ ಕರಗ

ಶ್ರೀಮೌಕ್ತಿಕಾಂಭ ಅಮ್ಮನವರ ದೇವಾಲಯದಲ್ಲಿ ಕರಗ ಮಹೋತ್ಸವವು ಬುದ್ಧ ಪೂರ್ಣಿಮೆಯಂದು ಆಚರಿಸಿಕೊಂಡು ಬಂದಿದ್ದು ಈ ವರ್ಷವು ಸಹ ಅದೇ ರೀತಿ ನೆರವೇರಿತು. ಭಾನುವಾರ ಬೆಳಗಿನ ಜಾವ 2.45 ಸಮಯದಲ್ಲಿ ಪೂಜಾರಿ ರವಿಕುಮಾರ್‌ ಅವರು ಕರಗವನ್ನು ಹೊತ್ತು ದೇವಾಲಯದಿಂದ ಹೊರಟು ಕರಗ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ 8ಕ್ಕೆ ದೇವಾಲಯ ತಲುಪಿತು.

Vijaya Karnataka 20 May 2019, 5:00 am
ದೇವನಹಳ್ಳಿ : ಶ್ರೀಮೌಕ್ತಿಕಾಂಭ ಅಮ್ಮನವರ ದೇವಾಲಯದಲ್ಲಿ ಕರಗ ಮಹೋತ್ಸವವು ಬುದ್ಧ ಪೂರ್ಣಿಮೆಯಂದು ಆಚರಿಸಿಕೊಂಡು ಬಂದಿದ್ದು ಈ ವರ್ಷವು ಸಹ ಅದೇ ರೀತಿ ನೆರವೇರಿತು. ಭಾನುವಾರ ಬೆಳಗಿನ ಜಾವ 2.45 ಸಮಯದಲ್ಲಿ ಪೂಜಾರಿ ರವಿಕುಮಾರ್‌ ಅವರು ಕರಗವನ್ನು ಹೊತ್ತು ದೇವಾಲಯದಿಂದ ಹೊರಟು ಕರಗ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ 8ಕ್ಕೆ ದೇವಾಲಯ ತಲುಪಿತು.
Vijaya Karnataka Web devanahalli well known karaga festival
ಅದ್ಧೂರಿಯಾಗಿ ನಡೆದ ಇತಿಹಾಸ ಪ್ರಸಿದ್ದ ದೇವನಹಳ್ಳಿ ಕರಗ


ದೇವಾಲಯದಲ್ಲಿ ವಿಶೇಷ ಅಲಂಕಾರ: ಕರಗ ಪ್ರಯುಕ್ತ ಶ್ರೀಮೌಕ್ತಿಕಾಂಬ ಅಮ್ಮನವರಿಗೆ ವಿಶೇಷ ಹೂವಿನ ಅಲಂಕಾರ, ರಾಜಬೀದಿಗಳಲ್ಲಿ , ರಾಜಗೋಪುರಕ್ಕೆ ಹೂವಿನ, ಹಣ್ಣುಗಳ ಹಾಗೂ ದೀಪಾಲಂಕಾರ ಮಾಡಲಾಗಿತ್ತು. ಅಲಂಕಾರ, ನೊಡುಗರ ಮನಸೆಳೆಯುವಂತಿತ್ತು.

ರಾತ್ರಿ ಇಡಿ ಜನಜಂಗುಳಿ: ಇಡೀ ಊರಿನ ತುಂಬ ದೀಪಾಲಂಕಾರ ರಸ್ತೆಯ ಪ್ರಮುಖ ದ್ವಾರಗಳಲ್ಲಿ ಹೂವಿನ ಬೋರ್ಡುಗಳು, ಕರಗವನ್ನು ವೀಕ್ಷಿಸಲು ಸುತ್ತಮುತ್ತಲ ತಾಲೂಕಿನ ಗ್ರಾಮಗಳಿಂದ ಸಾವಿರಾರು ಭಕ್ತರು ತುಂಬಿ ತುಳುಕುತ್ತಿದ್ದರು. ಇಡೀ ರಾತ್ರಿ ಜನ ಕರಗಬರುವುದನ್ನು ವೀಕ್ಷಿಸಲು ತಮ್ಮ ತಮ್ಮ ಮನೆಗಳ ಮುಂದೆ ನೀರು ಹಾಕಿ ರಂಗೋಲಿ ಬಿಡಿಸಿ ಕಾದು ಕುಳಿತಿರುವ ದೃಶ್ಯ ಸಾಮಾನ್ಯವಾಗಿತ್ತು.

ಕಾರ್ಯಕ್ರಮಗಳು: ಮೇ 17 ರಂದು ರಾತ್ರಿ ನಡೆದ ಆರತಿ ದೀಪೊತ್ಸವ ಮತ್ತು ಅಗ್ನಿಕುಂಡ, ನಡೆಯಿತು. ಸಾವಿರಾರು ಮಹಿಳೆಯರು ವಿವಿಧ ಹೂಗಳಿಂದ ಅಲಂಕರಿಸಿದ ದೀಪಗಳನ್ನು ತಲೆಮೇಲಿರಿಸಿಕೊಂಡು ಪಟ್ಟಣದಲ್ಲಿ ಮೆರವಣಿಗೆ ಹೊರಟು ದೇವಾಲಯದ ಮುಂಬಾಗ ಏರ್ಪಡಿಸಲಾಗಿದ್ದ ಅಗ್ನಿ ಕುಂಡ ದಾಟಿ ತೆರಳಿದರು. ಕರಗದ ಪ್ರಯುಕ್ತ ಹಳೆ ಬಸ್‌ ನಿಲ್ದಾಣದಲ್ಲಿ ಕೃಷ್ಣರಾಯಬಾರ ಎಂಬ ಪೌರಾಣಿಕ ನಾಟಕ ಏರ್ಪಡಿಸಲಾಗಿದೆ. ಪಟ್ಟಣದ ಗ್ರಾಮದೇವತೆಗಳಿಗೆ ಪಲ್ಲಕ್ಕಿ ಉತ್ಸವಗಳು ಸಹ ನಡೆಯಿತು.

ಕರಗದ ಪ್ರಯುಕ್ತ ಪಟ್ಟಣದ 9ನೇ ವಾರ್ಡ್‌ನ ನಿವಾಸಿಗಳಾದ ನಾರಾಣಸ್ವಾಮಿ ಮತ್ತು ವಿ.ಗೋಪಾಲ್‌, ಹಾಗೂ ಅವರ ತಂಡ ಮರಳುಬಾಗಿಲಿನಲ್ಲಿ ಕಳೆದ 6 ವರ್ಷಗಳಿಂದ ಸಾವಿರಾರು ಕೆಜಿ ವಿವಿಧ ಬಿಡಿ ಹೂಗಳಿಂದ ಚಿತ್ರಗಳನ್ನು ಬಿಡಿಸಲಾಗುತ್ತದೆ. ಭಾನುವಾರ ರಾತ್ರಿ ಪ್ರಾರಂಭಿಸಿ ಕರಗಬರುವ ಹೊತ್ತಿಗೆ ಚಿತ್ರಗಳನ್ನು ಬಿಡಿಸಿ ಚಿತ್ರಕ್ಕೆ ಅನುಗುಣವಾಗಿ ಹೂಗಳನ್ನು ಹಾಕಿದರು. ಆ ದೃಶ್ಯವನ್ನು ನೋಡಲು ನೂರಾರು ಭಕ್ತರು ಕಾದು ಕುಳಿತು, ಕರಗ ಆ ಹೂಗಳ ಮೇಲೆ ಪ್ರದಕ್ಷಿಣಿ ಹಾಕಿ ಒಂದು ಮೂರು ನೃತ್ಯ ಮಾಡಿ ಹೋಗುತ್ತದೆ.

ಸಾವಿರಾರು ಭಕ್ತರಿಗೆ ಪ್ರಸಾದ ವಿನಿಯೋಗವನ್ನು ಶ್ರೀಮೌಕ್ತಿಕಾಂಭ ವಹ್ನಿಕುಲ ಕ್ಷ ತ್ರಿಯ ತಿಗಳರ ಸಂಘವು ನೆರವೇರಿಸಿತು. ಇದೇ ವೇಳೆ ಅಧ್ಯಕ್ಷ ರಾದ ವಿಜಯಕುಮಾರ್‌, ಉಪಾಧ್ಯಕ್ಷ ಜಿ. ರಾಮಚಂದ್ರ, ಖಚಾಂಚಿ ಗೋಪಾಲಪ್ಪ, ಪೈ. ವಿಜಯಕುಮಾರ್‌, ರಾಮಕೃಷ್ಣಪ್ಪ, ಗಜೇಂದ್ರ, ಶಶಿಕುಮಾರ್‌ , ಗಣಾಚಾರಿಗಳು, ಗೌಡರು, ಕುಲಸ್ತರು, ಪಣಸ್ತರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ