ಆ್ಯಪ್ನಗರ

ರಸ್ತೆ ಅಭಿವೃದ್ಧಿಯಾದರೆ ಗ್ರಾಮಗಳ ಅಭಿವೃದ್ಧಿ

ದೇವನಹಳ್ಳಿ ಗ್ರಾಮೀಣ ಭಾಗದ ರಸ್ತೆಗಳಳು ಅಭಿವೃದ್ಧಿಯಾದರೆ ಗ್ರಾಮಗಳು ಅಭಿವೃದ್ಧಿಯಾಗುವುದು ಎಂದು ಶಾಸಕ ನಿಸರ್ಗ ಎಲ್‌. ಎನ್‌. ನಾರಾಯಣಸ್ವಾಮಿ ತಿಳಿಸಿದರು.

Vijaya Karnataka 26 Jun 2019, 5:00 am
ಶಾಸಕ ನಿಸರ್ಗ ಎಲ್‌. ಎನ್‌. ನಾರಾಯಣಸ್ವಾಮಿ ಹೇಳಿಕೆ
Vijaya Karnataka Web development of villages if road is developed
ರಸ್ತೆ ಅಭಿವೃದ್ಧಿಯಾದರೆ ಗ್ರಾಮಗಳ ಅಭಿವೃದ್ಧಿ


ನಲ್ಲೂರು : ದೇವನಹಳ್ಳಿ ಗ್ರಾಮೀಣ ಭಾಗದ ರಸ್ತೆಗಳಳು ಅಭಿವೃದ್ಧಿಯಾದರೆ ಗ್ರಾಮಗಳು ಅಭಿವೃದ್ಧಿಯಾಗುವುದು ಎಂದು ಶಾಸಕ ನಿಸರ್ಗ ಎಲ್‌. ಎನ್‌. ನಾರಾಯಣಸ್ವಾಮಿ ತಿಳಿಸಿದರು.

ಕಾಮಗಾರಿಗೆ ಚಾಲನೆ: ಚನ್ನರಾಯ ಪಟ್ಟಣ ಹೋಬಳಿ ಹ್ಯಾಡಾಳ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಹೆಚ್ಚಿನ ಅನುದಾನವನ್ನು ತರುವುದರ ಮೂಲಕ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಹ್ಯಾಡಾಳ, ವರದೇನ ಹಳ್ಳಿ , ಬಾಳೇ ಪುರ, ಬಿದಲ ಪುರ, ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ. ಚನ್ನರಾಯ ಪಟ್ಟಣದಲ್ಲಿ ಶಾಸಕರ ಅನುದಾನದಲ್ಲಿ ಬಸ್‌ ತಂಗುದಾಣ, ನಿರ್ಮಾಣ ಹಾಗೂ ಜೊನ್ನಹಳ್ಳಿಯ ಹತ್ತಿರ ಬಸ್‌ ತಂಗುದಾಣ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ. ದೊಡ್ಡ ಕುರುಬರ ಹಳ್ಳಿ, ಕಗ್ಗಲ ಹಳ್ಳಿ ಗ್ರಾಮಗಳಲ್ಲಿ ಕಾಂಕ್ರೀಟ್‌ ರಸ್ತೆ ಕಾಮಗಾರಿಯನ್ನು ಶಾಸಕರ ಅನುದಾನದಲ್ಲಿ ನಲ್ಲೂರು ಮಾರುತಿ ಪ್ರೌಡಶಾಲೆಗೆ ಹೆಚ್ಚುವರಿ ಕೊಠಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.

ಹೆಚ್ಚಿನ ಅನುದಾನ ತರಲು ಶ್ರಮ: ಗ್ರಾಮೀಣ ಭಾಗದಲ್ಲಿರುವ ರಸ್ತೆಗಳ ಗ್ರಾಮಸ್ಥರ ಸಂಚಾರಕ್ಕೆ ಉತ್ತಮ ವಾಗಲಿ ಎಂದು ಅಭಿವೃದ್ಧಿ ಪಡಿಸುವ ಕಾರ್ಯ ಮಾಡಲಾಗುತ್ತಿದೆ. ಗುಣ ಮಟ್ಟದಲ್ಲಿ ರಾಜೀ ಇಲ್ಲ ಕಾಮಗಾರಿ ಮಾಡುವಾಗ ಗ್ರಾಮಸ್ಥರು ನಿಂತು ಗುಣ ಮಟ್ಟದ ಕಾಮಗಾರಿ ಮಾಡಿಸಬೇಕು. ಸರ್ಕಾರದ ಮಂಜೂರಾತಿ ಕಾಮಗಾರಿಗಳು ಗುತ್ತಿಗೆ ದಾರರು ಸರಿಯಾದ ರೀತಿಯಲ್ಲಿ ಗುಣ ಮಟ್ಟದ ಸಿಮೆಂಟೆ ಹಾಗೂ ಇನ್ನಿತರೆ ಸಾಮಾಗ್ರಿಗಳನ್ನು ಬಳಸಿದರೆ ದೀರ್ಘ ಕಾಲ ಉಳಿಯುವುದು. ಇದರಿಂದ ಸರ್ಕಾರದ ಅನುದಾನವೂ ಸಹ ಪ್ರಯೋಜನೆ ವಾಗುವುದು. ಗ್ರಾಮೀಣ ಭಾಗದಲ್ಲಿ ಕಾಂಕ್ರೀಟ್‌ ರಸ್ತೆ ನಿರ್ಮಾಣ ಮಾಡಿದಾಗ ಗ್ರಾಮಸ್ಥರು ಕಾಮಗಾರಿಯ ಬಗ್ಗೆ ಗುತ್ತಿಗೆದಾರರನ್ನು ಕೇಳಬೇಕು. ರಸ್ತೆಯಲ್ಲಿ ನೀರು ನಿಲ್ಲದಂತೆ ಇಳಿಜಾರು ಇರುವಂತೆ ನೋಡಿಕೊಳ್ಳಬೇಕು. ಮೈತ್ರಿ ಸರಕಾರದಲ್ಲಿ ಹೆಚ್ಚಿನ ಅನುದಾನ ತರಲು ಶ್ರಮಿಸಲಾಗುತ್ತಿದೆ. ಬರಗಾಲ ಇದ್ದರೂ ಸಹ ಟ್ಯಾಂಕರ್‌ ಮತ್ತು ಖಾಸಗಿ ಬೋರ್‌ವೆಲ್‌ಗಳ ಮೂಲಕ ಕುಡಿಯುವ ನೀರನ್ನು ಜನರಿಗೆ ನೀಡಲಾಗುತ್ತಿದೆ. ಮೇವಿನ ಕೊರತೆ ಆಗದಂತೆ ಪಶುಪಾಲನಾ ಇಲಾಖೆಯಿಂದ 120 ಟನ್‌ ಮೇವು ಬಂದಿದ್ದು ಇನ್ನೂ 100 ಟನ್‌ ಬರಲಿದೆ. ಎಲ್ಲಿ ಸಮಸ್ಯೆ ಇದೆ, ಅಲ್ಲಿಗೆ ಮೇವು ಬರುವಂತೆ ಆಗುತ್ತದೆ. ಎಲ್ಲಾ ಗ್ರಾಮಗಳಲ್ಲಿ ಕುಡಿಯುವ ನೀರು ಸೇರಿದಂತೆ ಮೂಲಸೌಲಭ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.

ಈ ವೇಳೆಯಲ್ಲಿ ಜಿಪಂ ಸದಸ್ಯ ಲಕ್ಷ್ಮೀ ನಾರಾಯಣ್‌ , ಗ್ರಾಪಂ ಅಧ್ಯಕ್ಷೆ ಮಂಜುಳಾ, ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ಮುನಿರಾಜು, ಮಾಜಿ ಅಧ್ಯಕ್ಷ ಆರ್‌ ಮುನೇಗೌಡ, ಚನ್ನರಾಯ ಪಟ್ಟಣÜ ಹೋಬಳಿ ಜೆಡಿಎಸ್‌ ಅಧ್ಯಕ್ಷ ಮುನಿರಾಜು, ತಾಪಂ ಸದಸ್ಯ ವೆಂಕಟೇಶ್‌, ಚನ್ನರಾಯ ಪಟ್ಟಣÜ ಹೋಬಳಿ ಕಾಂಗ್ರೆಸ್‌ ಅಧ್ಯಕ್ಷ ಮಂಜುನಾಥ್‌, ಗ್ರಾಪಂ ಮಾಜಿ ಅಧ್ಯಕ್ಷ ಶಿವಕುಮಾರ್‌, ಎಪಿಎಮ್‌ಸಿ ನಾಮಿನಿ ನಿರ್ದೇಶಕ ಜಯರಾಮೇಗೌಡ, ಗ್ರಾಪಂ ಸದಸ್ಯರು, ಮುಖಂಡರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ