ಆ್ಯಪ್ನಗರ

ಅನಧಿಕೃತ ಕ್ಲಿನಿಕ್‌ಗಳ ಮೇಲೆ ಡಿಎಚ್‌ಒ ದಾಳಿ

ಪಟ್ಟಣದ ತಾಲೂಕು ಕಚೇರಿ ಮುಂಭಾಗ ಅನಧಿಕೃತವಾಗಿ ತೆರೆಯಲಾಗಿದ್ದ ಸ್ಮೈಲ್‌ಲೈನ್‌ ದಂತ ಚಿಕಿತ್ಸಾಲಯ ಸೇರಿದಂತೆ ತಾಲೂಕಿನ ವಿವಿದೆಡೆಯ ನಕಲಿ ಚಿಕಿತ್ಸಾಲಯಗಳ ಮೇಲೆ ಜಿಲ್ಲಾ ಆರೋಗ್ಯಾಧಿಕಾರಿ ಯೋಗೀಶ್‌ಗೌಡ ನೇತೃತ್ವದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ದಿಢೀರ್‌ ದಾಳಿ ನೆಡೆಸಿ ಬಾಗಿಲು ಮುಚ್ಚಿಸಿದರು.

Vijaya Karnataka 19 May 2019, 5:00 am
ವರದಿಗೆ ತೆರಳಿದವರ ಮೇಲೆ ಹಲ್ಲೆ ಮಾಡಲು ಮುಂದಾದ ದಂತ ವೈದ್ಯ
Vijaya Karnataka Web dho rides onunofficial clinics in nelamangala
ಅನಧಿಕೃತ ಕ್ಲಿನಿಕ್‌ಗಳ ಮೇಲೆ ಡಿಎಚ್‌ಒ ದಾಳಿ


ನೆಲಮಂಗಲ:
ಪಟ್ಟಣದ ತಾಲೂಕು ಕಚೇರಿ ಮುಂಭಾಗ ಅನಧಿಕೃತವಾಗಿ ತೆರೆಯಲಾಗಿದ್ದ ಸ್ಮೈಲ್‌ಲೈನ್‌ ದಂತ ಚಿಕಿತ್ಸಾಲಯ ಸೇರಿದಂತೆ ತಾಲೂಕಿನ ವಿವಿದೆಡೆಯ ನಕಲಿ ಚಿಕಿತ್ಸಾಲಯಗಳ ಮೇಲೆ ಜಿಲ್ಲಾ ಆರೋಗ್ಯಾಧಿಕಾರಿ ಯೋಗೀಶ್‌ಗೌಡ ನೇತೃತ್ವದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ದಿಢೀರ್‌ ದಾಳಿ ನೆಡೆಸಿ ಬಾಗಿಲು ಮುಚ್ಚಿಸಿದರು.

ದಾಳಿಯ ವೇಳೆ ತಾಲೂಕು ಕಚೇರಿ ಮುಂಭಾಗದ ಕಟ್ಟಡದಲ್ಲಿ ಸ್ಮೈಲ್‌ಲೈನ್‌ ದಂತ ಚಿಕಿತ್ಸಾಲಯ ನಡೆಸುತಿದ್ದ ಡಾ. ನಿಸಾರ್‌ಅಹಮದ್‌ಶರೀಪ್‌ ಎಂಬ ವ್ಯಕ್ತಿ 2017 ರಿಂದ ಇಲಾಖೆ ನೀತಿನಿಯಮಗಳನ್ವಯ ಪರವಾನಗಿಯಿಲ್ಲದೆ ಚಿಕಿತ್ಸಾಲಯ ನಡೆಸುತ್ತಿದ್ದುದು ಬೆಳಕಿಗೆ ಬಂತು. ಈ ವೇಳೆ ದಾಳಿ ವರದಿ ಮಾಡಲು ಬಂದಿದ್ದ ಪತ್ರಕರ್ತರ ಮೇಲೆ ಆಸ್ಪತ್ರೆಯಲ್ಲಿದ್ದ ಬೇರೆ ವೈದ್ಯರು ಮತ್ತು ಸಿಬ್ಬಂದಿ ಸುದ್ದಿ ಮಾಡದಂತೆ ಬೆದರಿಕೆ ಹಾಕಿದ್ದಲ್ಲದೆ ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದ್ದು, ವ್ಯಾಪಕ ಖಂಡನೆ ವ್ಯಕ್ತವಾಯಿತು.

ವೈದ್ಯರಿಲ್ಲ: ದಂತ ಚಿಕಿತ್ಸಾಲಯದ ಮೇಲೆ ನಾಮ ಫಲಕದಲ್ಲಿ ದಾಖಲಿಸಿರುವ ವೈದ್ಯರಿಲ್ಲದೇ ಬೇರೆ ವೈದ್ಯರು ಕಾರ್ಯನಿರ್ವಹಿಸುತಿದ್ದರೆಂದು ಸ್ಪಷ್ಟ ಪಡಿಸಿರುವ ಟಿಎಚ್‌ಒ ಹರೀಶ್‌, ಕ್ಲಿನಿಕ್‌ ವೈದ್ಯರಿಗೆ ನೋಟಿಸ್‌ ನೀಡಲಾಗಿದೆ ಎಂದು ತಿಳಿಸಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ