ಆ್ಯಪ್ನಗರ

ದೊಡ್ಡಬಳ್ಳಾಪುರದ ರೈತನ ಮಗನಿಗೆ ತಹಸೀಲ್ದಾರ್‌ ವಿಭಾಗದಲ್ಲಿ 8ನೇ ರ‍್ಯಾಂಕ್

ಸರಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುಲ ತಾಯಿ ಪ್ರಮೀಳ ಅವರಿಂದ ಪ್ರೇರಣೆಗೊಂಡು ಸರಕಾರದ ಸೇವೆಯಲ್ಲಿ ತೊಡಗಿಳಿಸಕೊಳ್ಳಲು ನಿರ್ಧರಿಸಿದ ಅಮೃತ್‌ ಅತ್ರೇಶ್‌ ಕೆಎಎಸ್‌ ಅಧಿಕಾರಿಯಾಗುವ ಪಣ ತೊಟ್ಟರು.

Vijaya Karnataka Web 27 Dec 2019, 9:59 am
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ ತಹಸೀಲ್ದಾರ್‌ ವಿಭಾಗದಲ್ಲಿ 8ನೇ ರ‍್ಯಾಂಕ್ ಗಳಿಸುವ ಮೂಲಕ ಸತತ ಪರಿಶ್ರಮದಿಂದ ರೈತನ ಮಗನೂ ಕೆಎಎಸ್‌ ಅಧಿಕಾರಿಯಾಗಬಹುದು ಎಂಬುದನ್ನು ದೊಡ್ಡಬಳ್ಳಾಪುರದ ಚಿಕ್ಕ ಹೆಜ್ಜಾಜೆ ಗ್ರಾಮದ ಅಮೃತ್‌ ಅತ್ರೇಶ್‌ ಸಾಧಿಸಿ ತೋರಿಸಿದ್ದಾರೆ.
Vijaya Karnataka Web Amruth Athresh


ಡಿವಿಜಿಯವರ ಮಂಕುತಿಮ್ಮನ ಖಗ್ಗದಲ್ಲಿ ಬರುವ ಸಮಾಜಮುಖಿ ಸೇವೆ ಮತ್ತು ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಅಮ್ಮನ ಹಿತ ನುಡಿಗಳಿಂದ ಪ್ರೇರಣೆಗೊಂಡ ಅಮೃತ್‌ 2012ರಲ್ಲಿ ಇಂಜಿನಿಯರಿಂಗ್‌ ಮುಗಿಸಿದ ನಂತರ ಕೆಎಎಸ್‌ ಅಧಿಕಾರಿಯಾಗುವ ಕನಸು ಕಂಡಿದ್ದರು. ಈ ಕನಸಿಗೆ ತಂದೆ ರಮೇಶ್‌ ಎಚ್‌. ಎ. ರೆಕ್ಕೆ ಕಟ್ಟಿಕೊಟ್ಟರು.

ಬೆಂಗಳೂರಿನ ದಯಾನಂದ ಸಾಗರ ಕಾಲೇಜಿನ ವಿದ್ಯಾರ್ಥಿಯಾದ ಅಮೃತ್‌ 2012ರಿಂದ ಕೆಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡೆಸಲು ಆರಂಭಿಸಿದರು. ''3-4 ವರ್ಷಗಳ ಕಾಲ ಬೇರೆ ಬೇರೆ ಹಂತದ ಪರೀಕ್ಷೆಗಳನ್ನು ಎದುರಿಸಿ ವಿಫಲಗೊಂಡ ನಂತರ ವಿಶ್ವಾಸ ಕುಗ್ಗಿತ್ತು. ನನ್ನಿಂದ ಸಾಧ್ಯವೇ ಇಲ್ಲ ಎಂದೆನಿಸಿತ್ತು. ಇಂಜಿನಿಯರಿಂಗ್‌ ಮುಗಿದ ಬಳಿಕ ಅತ್ಯಮೂಲ್ಯ ಸಮಯವನ್ನು ಮುಡಿಪಿಟ್ಟು, ಮುಂದೇನು ಗತಿ ಎಂದೆನಿಸಿತ್ತು. ಇಷ್ಟು ಪ್ರಯತ್ನ ಪಟ್ಟು ಹಿಂದಡಿಯಿಡುವುದರಲ್ಲಿ ಅರ್ಥವಿಲ್ಲ ಎಂದು ದೃಢ ಸಂಕಲ್ಪ ಮಾಡಿ ಮತ್ತೆ ಶ್ರದ್ಧೆಯಿಂದ ಓದಲು ಕುಳಿತೆ. ಗೆಲುವು ಸಿಕ್ಕಿದೆ. ಸೋಲಿನ ಸಮಯದಲ್ಲಿ ಸಹನೆ ಉಳಿಸಿಕೊಂಡರೆ, ಕಷ್ಟವೆನಿಸಿದ ದಿನಗಳನ್ನು ಸ್ವಲ್ಪ ಸಹಿಸಿಕೊಂಡರೆ ಮುಂದೊಂದು ದಿನ ಯಶಸ್ಸು ಸಿಕ್ಕೇ ಸಿಗುತ್ತದೆ ಎಂದು ನಂಬಿದ್ದೆ'' ಎಂದು ಕೆಪಿಎಸ್‌ಸಿ ಸಾಧಕ ಅಮೃತ್‌ ಅತ್ರೇಶ್‌ ತಮ್ಮ ಕಷ್ಟದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ