ಆ್ಯಪ್ನಗರ

ಚುನಾವಣೆ ಸಂದರ್ಭದಲ್ಲಿ ಬಾಲ ಬಿಚ್ಚಿದ್ರೆ ಕ್ರಮ; ರೌಡಿ ಶೀಟರ್‌ಗಳಿಗೆ ಪೊಲೀಸರ ವಾರ್ನಿಂಗ್‌

ನೀವು ನಿಮಗೆ ಬೇಕಾದವರ ಮನವೊಲಿಸಲು ಅಥವಾ ಅವರಿಗೆ ಸಹಾಯ ಮಾಡಲು ಬೇರೆ ಅಭ್ಯರ್ಥಿಗಳ ಮೇಲೆ ದಬ್ಬಾಳಿಕೆ ಮಾಡುವುದು, ಅವರಿಗೆ ಬೆದರಿಕೆ ಹಾಕುವುದು ಮಾಡುವಂತಿಲ್ಲ. ಅಲ್ಲದೇ ಸ್ನೇಹಿತರ ಜತೆ ಸೇರಿ ಡಾಬಾ ಬಾರ್‌ಗಳಲ್ಲಿ ಗಲಾಟೆ ಮಾಡುವುದು ಮಾಡುವಂತಿಲ್ಲ ಎಂದು ಡಿವೈಎಸ್ಪಿ ರೌಡಿಶೀಟರ್‌ಗಳಿಗೆ ಎಚ್ಚರಿಕೆ ನೀಡಿದರು.

Vijaya Karnataka Web 11 Dec 2020, 6:59 am
ದೊಡ್ಡಬಳ್ಳಾಪುರ: ಉತ್ತಮ ಜೀವನ ರೂಢಿಸಿ ಕೊಳ್ಳಲು ಪೊಲೀಸರು ಪದೇ ಪದೆ ಕರೆಸಿ ಕಿವಿಮಾತು ಹೇಳುತ್ತಾರೆ. ಇಲ್ಲಿ ಯಾರನ್ನು ಅವಮಾನ ಮಾಡುವ ಪ್ರಶ್ನೆ ಇಲ್ಲ. ಸಮಾಜದಲ್ಲಿ ಬದಲಾವಣೆ ಮಾಡಿಕೊಂಡು ಉತ್ತಮ ಜೀವನ ರೂಪಿಸಿಕೊಂಡರೆ ರೌಡಿ ಶೀಟರ್‌ ಪಟ್ಟಿಯಿಂದ ತೆಗೆದು ಹಾಕಲಾಗುವುದು ಎಂದು ಡಿವೈಎಸ್ಪಿ ಟಿ ರಂಗಪ್ಪ ರೌಡಿ ಪರೇಡ್‌ನಲ್ಲಿ ತಿಳಿಸಿದರು.
Vijaya Karnataka Web police representative image
Representative Image


ನಗರ ಪೋಲೀಸ್‌ ಠಾಣಾ ಮುಂದೆ ರೌಡಿ ಶೀಟರ್‌ಗಳ ಪರೇಡ್‌ನಲ್ಲಿ ಮಾತನಾಡಿ, ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಇಲ್ಲಿರುವ ರೌಡಿ ಶೀಟರ್‌ಗಳು ಯಾವುದೇ ಅಕ್ರಮ ಚಟುವಟಿಕೆಗಳಲ್ಲಿ ಭಾಗವಹಿಸಬಾರದು. ರೌಡಿ ಶೀಟರ್‌ ಪಟ್ಟಿಯಲ್ಲಿಇರುವವರು ಚುನಾವಣೆ ಸ್ಪರ್ಧಿಸುವುದಾದದರೆ ನಮ್ಮ ಗಮನಕ್ಕೆ ತರಬೇಕು ಎಂದು ಸೂಚಿಸಿದರು.

ಚಳಿಗಾಲದ ಆರಂಭದಲ್ಲೇ ಬರಿದಾದ ಕೆರೆಗಳು..! ಬೇಸಿಗೆಕಾಲದಲ್ಲಿ ಉಂಟಾಗಲಿದೆ ನೀರಿನ ಅಭಾವ..!

ಅಲ್ಲದೇ ನೀವು ನಿಮಗೆ ಬೇಕಾದವರ ಮನವೊಲಿಸಲು ಅಥವಾ ಅವರಿಗೆ ಸಹಾಯ ಮಾಡಲು ಬೇರೆ ಅಭ್ಯರ್ಥಿಗಳ ಮೇಲೆ ದಬ್ಬಾಳಿಕೆ ಮಾಡುವುದು, ಅವರಿಗೆ ಬೆದರಿಕೆ ಹಾಕುವುದು ಮಾಡುವಂತಿಲ್ಲ. ಅಲ್ಲದೇ ಸ್ನೇಹಿತರ ಜತೆ ಸೇರಿ ಡಾಬಾ ಬಾರ್‌ಗಳಲ್ಲಿ ಗಲಾಟೆ ಮಾಡುವುದು ಮಾಡುವಂತಿಲ್ಲ ಎಂದು ರೌಡಿಶೀಟರ್‌ಗಳಿಗೆ ಎಚ್ಚರಿಕೆ ನೀಡಿದರು.

ಈ ಬಾರಿ ಹೊಸ ವರ್ಷ ಸಂಭ್ರಮಾಚರಣೆಗೆ ನಂದಿಬೆಟ್ಟಕ್ಕಿಲ್ಲ ಎಂಟ್ರಿ‌..!

ನಂತರ ಮಾತನಾಡಿದ ಸರ್ಕಲ್‌ ಇನ್ಸ್‌ಪೆಕ್ಟರ್‌ ಎಂ.ಬಿ. ನವೀನ್‌ ಕುಮಾರ್‌, ಇಲ್ಲಿರುವ ಯಾರೂ ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗವಹಿಸಬಾರದು. ಅಲ್ಲದೆ ಅಭ್ಯರ್ಥಿಗಳಿಗೆ ಬೆದರಿಕೆ ಹಾಕುವಂತಿಲ್ಲ ಎಂದು ಎಚ್ಚರಿಕೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ