ಆ್ಯಪ್ನಗರ

ನಾಯಿಗಳ ದಾಳಿಗೆ ಸಿಲುಕಿದ್ದ ಜಿಂಕೆಯ ರಕ್ಷಣೆ

ನಾಯಿಗಳ ದಾಳಿಗೆ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಿದ್ದ ಜಿಂಕೆಯೊಂದನ್ನು ಗ್ರಾಮಸ್ಥರು ರಕ್ಷಿಸಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದ ಘಟನೆ ಭಾನುವಾರ ಗ್ರಾಮದಲ್ಲಿ ನಡೆದಿದೆ.

Vijaya Karnataka 18 Feb 2019, 5:00 am
ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳ ಭೇಟಿ | ಚಿಕಿತ್ಸೆ ನಂತರ ಅರಣ್ಯಕ್ಕೆ ಬಿಟ್ಟ ಅಧಿಕಾರಿಗಳು
Vijaya Karnataka Web BRL-17SULIBELE5


ವಿಕ ಸುದ್ದಿಲೋಕ ಸೂಲಿಬೆಲೆ

ನಾಯಿಗಳ ದಾಳಿಗೆ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಿದ್ದ ಜಿಂಕೆಯೊಂದನ್ನು ಗ್ರಾಮಸ್ಥರು ರಕ್ಷಿಸಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದ ಘಟನೆ ಭಾನುವಾರ ಗ್ರಾಮದಲ್ಲಿ ನಡೆದಿದೆ.

ಸೂಲಿಬೆಲೆ ಹೋಬಳಿ ಮುತ್ಸಂದ್ರ ಅರಣ್ಯದಿಂದ ಶನಿವಾರ ರಾತ್ರಿವೇಳೆ ಆಹಾರ ಹುಡುಕಿ ಗ್ರಾಮಗಳತ್ತ ಜಿಂಕೆ ಬಂದಿರುವ ಸಂಶಯವಿದೆ.ದಾರಿ ತಿಳಿಯದ ಜಿಂಕೆಯನ್ನು ಗಮನಿಸಿದ ಬೀದಿ ನಾಯಿಗಳು ಅಟ್ಟಾಡಿಸಿವೆ.ಜಿಂಕೆ ಗಾಬರಿಗೊಂಡು ಕುರುಬರಪೇಟೆಯ ನಿವಾಸಿಯೊಬ್ಬರ ಮನೆಯ ಹತ್ತಿರ ಜಿಂಕೆ ಯೊಂದು ಓಡಿ ಬಂದು ಮನೆಯೊಳಗೆ ನುಗ್ಗಿದೆ. ಗಾಬರಿಯಾದ ಜನ ಏನೆಂದು ಹೊರ ಬಂದು ನೋಡಷ್ಟರಲ್ಲಿ ನಾಯಿಗಳ ಹಿಂಡು ಕಾಣಿಸಿದ್ದು ತಕ್ಷ ಣ ಅವುಗಳನ್ನು ಅಲ್ಲಿಂದ ಓಡಿಸಿ ಜಿಂಕೆಯನ್ನು ರಕ್ಷ ಣೆ ಮಾಡಿದ್ದಾರೆ.ಜಿಂಕೆ ಸಿಕ್ಕಿರುವ ವಿಷಯವನ್ನು ಸ್ಥಳೀಯರು ಪೊಲೀಸರಿಗೆ ಮುಟ್ಟಿಸಿದ್ದು,ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.ಸ್ಥಳಕ್ಕೆ ಬಂದ ಅರಣ್ಯ ಅಧಿಕಾರಿಗಳು ಜಿಂಕೆಗೆ ಚಿಕಿತ್ಸೆ ಕೊಡಿಸಿ ಜಡಿಗೇನಹಳ್ಳಿ ಅರಣ್ಯಕ್ಕೆ ಬಿಟ್ಟಿದ್ದಾರೆ.
-----

ಜಿಂಕೆಗೆ ಹೆಚ್ಚಿನ ತೊಂದರೆಯಾಗಿಲ್ಲ.ಮುತ್ಸಂದ್ರ,ಗುಳ್ಳಹಳ್ಳಿ ಅರಣ್ಯದಿಂದ ಆಹಾರ ಹುಡುಕಿಕೊಂಡು ಬಂದಿರುವ ಶಂಕೆಯಿದೆ.ಒಂದು ವರ್ಷದ ಚುಕ್ಕೆ ಜಿಂಕೆ ಮರಿಯಾಗಿದ್ದು,ಇದಕ್ಕೆ ಚಿಕಿತ್ಸೆ ಕೊಡಿಸಿ ಜಡಿಗೇನಹಳ್ಳಿ ಅರಣ್ಯಕ್ಕೆ ಬಿಡಲಾಗಿದೆ.

-ಕಿರಣ್‌,ಅರಣ್ಯ ಅಧಿಕಾರಿ,ಹೊಸಕೋಟೆ

ನಾಯಿಗಳ ದಾಳಿಯಿಂದ ರಕ್ಷಿಸಲಾದ ಜಿಂಕೆ




ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ