ಆ್ಯಪ್ನಗರ

ಭೂ ಪರಿಸರ ರಕ್ಷ ಣೆ, ಮಕ್ಕಳಿಗೆ ಪಠ್ಯವಾದರೆ ಅನುಕೂಲ

ಪ್ರತಿಯೊಬ್ಬ ಮನುಷ್ಯನ ಬದುಕೂ ಪಂಚಮಹಾಭೂತಗಳಲ್ಲಿ ಒಂದಾದ ಭೂಮಿಯೊಂದಿಗೆ ಬೆಸೆದುಕೊಂಡಿದೆ. ಭೂಮಿಯಿಲ್ಲದೆ ಬದುಕಿಲ್ಲ ಎಂಬುವುದನ್ನು ಒಪ್ಪ್ಪುವುದಾದರೆ ಕನಿಷ್ಠಪಕ್ಷ ನಮ್ಮ ಉಳಿವಿಗಾದರೂ ನಾವು ಭೂಮಿಯನ್ನು ಉಳಿಸಬೇಕಾಗುತ್ತದೆ ಎಂದು ಸರಸ್ವತಿ ಸಂಗೀತ ವಿದ್ಯಾಲಯದ ಕಾರ್ಯದರ್ಶಿ ಬಿ.ಕೆ. ಗೋಪಾಲ್‌ ಮಾಸ್ಟರ್‌ ಅಭಿಪ್ರಾಯಪಟ್ಟರು.

Vijaya Karnataka 22 Apr 2019, 4:41 pm
ವಿಕ ಸುದ್ದಿ ಲೋಕ ದೇವನಹಳ್ಳಿ
Vijaya Karnataka Web earth ecosystem safeguards facilitates childrens text
ಭೂ ಪರಿಸರ ರಕ್ಷ ಣೆ, ಮಕ್ಕಳಿಗೆ ಪಠ್ಯವಾದರೆ ಅನುಕೂಲ


ಪ್ರತಿಯೊಬ್ಬ ಮನುಷ್ಯನ ಬದುಕೂ ಪಂಚಮಹಾಭೂತಗಳಲ್ಲಿ ಒಂದಾದ ಭೂಮಿಯೊಂದಿಗೆ ಬೆಸೆದುಕೊಂಡಿದೆ. ಭೂಮಿಯಿಲ್ಲದೆ ಬದುಕಿಲ್ಲ ಎಂಬುವುದನ್ನು ಒಪ್ಪ್ಪುವುದಾದರೆ ಕನಿಷ್ಠಪಕ್ಷ ನಮ್ಮ ಉಳಿವಿಗಾದರೂ ನಾವು ಭೂಮಿಯನ್ನು ಉಳಿಸಬೇಕಾಗುತ್ತದೆ ಎಂದು ಸರಸ್ವತಿ ಸಂಗೀತ ವಿದ್ಯಾಲಯದ ಕಾರ್ಯದರ್ಶಿ ಬಿ.ಕೆ. ಗೋಪಾಲ್‌ ಮಾಸ್ಟರ್‌ ಅಭಿಪ್ರಾಯಪಟ್ಟರು.

ದೇವನಹಳ್ಳಿ ಪಟ್ಟಣದ ಕೋಟೆ ಬಡಾವಣೆಯ ಖುಷಿ ಇನ್ಸ್ಟಿಟ್ಯೂಟ್‌ ಆ´‚… ಮ್ಯೂಸಿಕ್‌ ಅಂಡ್‌ ಡಾನ್ಸ್‌ ಬೇಸಿಗೆ ಶಿಬಿರ ತರಬೇತಿ ಕೇಂದ್ರದಲ್ಲಿ ವಿಶ್ವ ಭೂಮಿ ದಿನದ ಅಂಗವಾಗಿ ಸರಸ್ವತಿ ಸಂಗೀತ ವಿದ್ಯಾಲಯ ಆ¿ೂೕಜಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

ಭೂಮಿಯು ಸೌರಮಂಡಲದ 5ನೇ ಅತಿ ದೊಡ್ಡ ಗ್ರಹವಾಗಿದೆ. ಇಡೀ ಬ್ರಹ್ಮಾಂಡದಲ್ಲಿ ಜೀವ ಸಂಕುಲವನ್ನು ಹೊಂದಿರುವ ಏಕೈಕ ಕಾಯವೆಂದರೆ ಅದು ಭೂಮಿ ಮಾತ್ರವೇ. ಆದರೆ ಭೂಮಿಯಲ್ಲಿ ಇಂದು ಆಗುತ್ತಿರುವ ಜಾಗತಿಕ ತಾಪಮಾನದಿಂದ ನಮ್ಮೊಂದಿಗಿರುವ ಜೀವ ವೈವಿಧ್ಯಗಳು ಕಳೆದ 48 ವರ್ಷಗಳಲ್ಲಿ ಶೇಕಡಾ 60ರಷ್ಟು ನಾಶವಾಗಿವೆ. ಭೂಮಿಯ ಮೇಲಿನ ಜೀವಿಗಳ ಕುರಿತು ನಡೆಸಿದ ಅಧ್ಯಯನ ವರದಿಯೊಂದರ ಪ್ರಕಾರ 1970 ರ ಈಚೆಗೆ ಶೇ 60ರಷ್ಟು ಸಸ್ತನಿಗಳು, ಪಕ್ಷಿಗಳು, ಮೀನು ಮತ್ತು ಜಲಚರ ಜೀವಗಳು ನಾಶವಾಗಿವೆ. ಇವೆÇ್ಲವುಗಳಿಗೂ ಮಾನವ ಸ್ವಾರ್ಥಕ್ಕಾಗಿ ಪ್ರಕೃತಿಯ ಮೇಲೆ ನಿರಂತರವಾಗಿ ನಡೆಸುತ್ತಿರುವ ಚಟುವಟಿಕೆಗಳೇ ಕಾರಣ. ಆದ್ದರಿಂದ ಪರಿಸರದ ರಕ್ಷ ಣೆಯೇ ಭೂಮಿಯ ರಕ್ಷ ಣಾ ಕಾರ್ಯವಾಗಿದೆ. ಮಕ್ಕಳಿಗೆ ಚಿಕ್ಕಂದಿನಲ್ಲೇ ಸಸಿ ನೆಡುವುದು, ನೀರು ಹಾಕುವುದು ಆರೈಕೆ ಮಾಡುವುದು, ಹಸಿರಿನೊಂದಿಗೆ ಒಲವು ಮೂಡಿಸುವುದು, ಮನೆಮನೆಗಳಲ್ಲಿ ಪಾಟ್‌ಗಳಲ್ಲಿ ಗಿಡಗಳನ್ನು ಹಾಕಿ ಬೆಳಸುವುದು. ಈ ಬಗ್ಗೆ ಮಕ್ಕಳಿಗೆ ಶೈಕ್ಷ ಣಿಕವಾಗಿ ಹೆಚ್ಚಿನ ರೀತಿಯಲ್ಲಿ ಪಾಠವಾದರೆ ತುಂಬಾ ಅನುಕೂಲ ಎಂದು ತಿಳಿಸಿದರು.

ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ನ ಜಿಲ್ಲಾ ಆಯುಕ್ತ ಬಿ.ಕೆ. ಶಿವಪ್ಪ ಮಾತನಾಡಿ 1970 ರಿಂದ ವಿಶ್ವಭೂಮಿ ದಿನಾಚರಣೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಸುಮಾರು 192 ದೇಶಗಳಲ್ಲಿ ಆಚರಣೆಯಲ್ಲಿದೆ. ಆಹಾರಕ್ಕಾಗಿ ಪ್ರಾಣಿ-ಪಕ್ಷಿಗಳ ಕೊಲೆ ಕೂಡ ಪರಿಸರ ನಾಶದ ಒಂದು ಮುಖ್ಯವಾದ ಭಾಗವಾಗಿದೆ. ಕಾಡು ಕಡಿದು ನಾಡನ್ನು ವಿಸ್ತರಿಸುತ್ತಿದ್ದಂತೆಯೇ ಭೂಮಿ ಮೇಲಿನ ಜೀವ ವೈವಿಧ್ಯಗಳು ನಶಿಸುತ್ತಿವೆ. ಇವೆಲ್ಲ ಸರಿಯಾಗಬೇಕಿದ್ದರೆ ನಮ್ಮ ಮಕ್ಕಳನ್ನು ನೈಸರ್ಗಿಕ ಪರಿಸರದತ್ತ ಕೊಂಡೊಯ್ಯಬೇಕು ಎಂದು ಕಿವಿಮಾತು ಹೇಳಿದರು.

ಖುಷಿ ಇನ್ಸ್ಟಿಟ್ಯೂಟ್‌ ಆ´‚… ಮ್ಯೂಸಿಕ್‌ ಅಂಡ್‌ ಡಾನ್ಸ್‌ನ ವ್ಯವಸ್ಥಾಪಕ ಎಸ್‌. ಅಕ್ಷ ಯ್‌ ಶರ್ಮ ಮಾತನಾಡಿದರು. ಇದೇ ಸಂದರ್ಭದಲ್ಲಿ ಶಾರದಾಂಭ ಕಲಾವಿದರ ಸಂಘದ ನಿರ್ದೇಶಕ ಎಸ್‌.ಎನ್‌. ಸುಬ್ರಹ್ಮಣ್ಯ, ಯುವಮುಖಂಡ ಮಾರೇಗೌಡ, ಖುಷಿ ಇನ್ಸ್ಟಿಟ್ಯೂಟ್‌ ಆ´‚… ಮ್ಯೂಸಿಕ್‌ ಅಂಡ್‌ ಡಾನ್ಸ್‌ ನೃತ್ಯ ನಿರ್ದೇಶಕ ವಿಶ್ವ, ಸರಸ್ವತಿ ಸಂಗೀತ ವಿದ್ಯಾಲಯದ ಪದಾಧಿಕಾರಿಗಳು ಮತ್ತಿತರರು ಹಾಜರಿದ್ದರು.

ಚಿತ್ರ ಸುದ್ದಿ : 21ದೇವನಹಳ್ಳಿ ಪೊ-1

ಪಟ್ಟಣದ ಕೋಟೆ ವಿಳಾಸದ ಖುಷಿ ಇನ್ಸ್ಟಿಟ್ಯೂಟ್‌ ಆ´‚… ಮ್ಯೂಸಿಕ್‌ ಅಂಡ್‌ ಡಾನ್ಸ್‌ ಬೇಸಿಗೆ ಶಿಬಿರ ತರಬೇತಿ ಕೇಂದ್ರದಲ್ಲಿ ವಿಶ್ವಭೂಮಿ ದಿನದ ಅಂಗವಾಗಿ ಸರಸ್ವತಿ ಸಂಗೀತ ವಿದ್ಯಾಲಯ ಆ¿ೂೕಜಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರೊಂದಿಗೆ ಗಣ್ಯರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ