ಆ್ಯಪ್ನಗರ

ಸಮುದಾಯ ರೇಡಿಯೋದಿಂದ ಚುನಾವಣೆ ಜಾಗೃತಿ

ಸಮುದಾಯ ರೇಡಿಯೋ ಕೇವಲ ರೇಡಿಯೋ ಕಾರ್ಯಕ್ರಮಗಳಿಗೆ ಸೀಮಿತಗೊಳಿಸದೆ ಜನ ಮತ್ತು ಸರಕಾರದೊಂದಿಗೂ ನಿಕಟ ಸಂಪರ್ಕದಲ್ಲಿದ್ದೇವೆ ಎಂದು ಸಾರಥಿ ಎಫ್‌ಎಂ 90...

Vijaya Karnataka 24 Mar 2019, 5:00 am
ಹೊಸಕೋಟೆ ಗ್ರಾಮಾಂತರ: ಸಮುದಾಯ ರೇಡಿಯೋ ಕೇವಲ ರೇಡಿಯೋ ಕಾರ್ಯಕ್ರಮಗಳಿಗೆ ಸೀಮಿತಗೊಳಿಸದೆ ಜನ ಮತ್ತು ಸರಕಾರದೊಂದಿಗೂ ನಿಕಟ ಸಂಪರ್ಕದಲ್ಲಿದ್ದೇವೆ ಎಂದು ಸಾರಥಿ ಎಫ್‌.ಎಂ 90.4 ಸಮುದಾಯ ರೇಡಿಯೋ ನಿರ್ವಾಹಕ ಜಿ.ಸುನಿಲ್‌ ಹೇಳಿದರು.
Vijaya Karnataka Web election awareness from community radio
ಸಮುದಾಯ ರೇಡಿಯೋದಿಂದ ಚುನಾವಣೆ ಜಾಗೃತಿ


ಸಾರಥಿ ಝರಲಕ್‌ ಸಮುದಾಯ ವತಿಯಿಂದ ಚುನಾವಣೆ ಜಾಗೃತಿ ಕಾರ್ಯಕ್ರಮವನ್ನು ಅನುಗೊಂಡನಹಳ್ಳಿ ಹೋಬಳಿಯ ಕುವೆಂಪು ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಇದೇ ವೇಳೆ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ರೇಡಿಯೋ ಮೂಲಕ ಮತದಾನ ಮಹತ್ವದ ಬಗ್ಗೆ ಪ್ರಸಾರ ಮಾಡಲಾಗಿತ್ತು. ಹೊಸಕೋಟೆ ತಾಲೂಕಿನಲ್ಲಿ ಶೇ.54 ರಷ್ಟು ಮತದಾನವಾಗಿತ್ತು. ಈ ಬಾರಿ ಲೋಕಸಭೆ ಚುನಾವಣೆಯಲ್ಲೂ ಮತದಾನದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು.

ಹೋಬಳಿಯ ಕೆಲವು ಶಾಲೆಗಳಲ್ಲಿ ಶಾಲಾ ಮಕ್ಕಳಿಗೆ ಮತ್ತು ಕಾಲೇಜುಗಳಲ್ಲಿ ಮಹಿಳಾ ಸಂಘಳಿಗೆ ಮತದಾನ ಬಗ್ಗೆ ಜಾಗೃತಿಯನ್ನು ಮೂಡಿಸಲಾಗುತ್ತಿದೆ. ಎಲ್ಲಾ ಚಟುವಟಿಕೆಗಳನ್ನು ಕೇಂದ್ರ ಚುನಾವಣೆ ಆಯೋಗ ಮತ್ತು ಸ್ಮಾಟ್‌ ಸಂಸ್ಥೆ ಜೊತೆಗೂಡಿ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ