ಆ್ಯಪ್ನಗರ

ಅನೆ ತುಳಿತ: ವ್ಯಕ್ತಿ ಸಾವು

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕರ್ನಾಟಕ, ತಮಿಳುನಾಡು ಗಡಿ ಭಾಗದಲ್ಲಿ ಇತ್ತೀಚೆಗೆ ಆನೆಗಳ ಹಾವಳಿ ಹೆಚ್ಚಾಗಿದೆ. ರೈತರ ಬೆಳೆಗಳು ಹಾನಿಗೀಡಾಗುತ್ತಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

Vijaya Karnataka Web 14 Aug 2019, 6:28 pm
ಹೊಸಕೋಟೆ: ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕು ಅನುಗೊಂಡಹಳ್ಳಿ ಹೋಬಳಿ ತಿರುವರಂಗ ಗ್ರಾಮದಲ್ಲಿ ಅನೆ ತುಳಿದು ರೈತನೊಬ್ಬ ಮೃತಪಟ್ಟಿದ್ದಾರೆ.
Vijaya Karnataka Web ರೈತ ಸಾವು
ರೈತ ಸಾವು


ಅಣ್ಣಪ್ಪ (48) ಮೃತ ರೈತ. ತಿರುವರಂಗ ಗ್ರಾಮದ ರೈತ ಅಣ್ಣಪ್ಪ ತನ್ನ ಗದ್ದೆಗೆ ನೀರು ಹಾಯಿಸಲು ಹೋಗಿದ್ದಾಗ ಈ ಘಟನೆ ಸಂಭವಿಸಿದೆ. ಗದ್ದೆಯ ಬಳಿ ನೀರಿನ ಮೋಟಾರ್ ಅನ್ ಮಾಡುವ ವೇಳೆ ಅನೆಯೊಂದು ದಿಢೀರ್ ದಾಳಿ ಮಾಡಿ ತುಳಿದು ಸಾಯಿಸಿದೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.

ಅನೇಕಲ್, ಹೊಸಕೋಟೆ, ತಮಿಳುನಾಡು ಗಡಿ ಭಾಗದಲ್ಲಿರುವ ತಿರುವಂಗ ಗ್ರಾಮಕ್ಕೆ ಹೊಂದಿಕೊಂಡಂತೆ ತಮಿಳುನಾಡು ಕಡೆ ಹರಿಯುವ ಹೊಳೆಯಲ್ಲಿ ಎರಡು ಅನೆಗಳು ಪ್ರತ್ಯಕ್ಷವಾಗಿದ್ದವು.

ಘಟನೆ ಸ್ಥಳಕ್ಕೆ ಅನುಗೊಂಡಹಳ್ಳಿ ಪೋಲಿಸರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ