ಆ್ಯಪ್ನಗರ

ಗೋಡೆ ಬರಹಗಳಿಂದ ಪರಿಸರ ಜಾಗೃತಿ ಅಭಿಯಾನ

ವಿಕ ಸುದ್ದಿಲೋಕ ದೊಡ್ಡಬಳ್ಳಾಪುರ ತಾಲೂಕಿನ ಮಾಕಳಿ ದುರ್ಗ ಸೇರಿದಂತೆ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದ ಸಮೀಪದ ಅರಣ್ಯ ಪ್ರದೇಶಗಳಿಗೆ ಸುಡು ಬಿಸಿಲಿನೊಂದಿಗೆ ಬೆಂಕಿಗೆ ...

Vijaya Karnataka 15 Mar 2019, 5:00 am
ದೊಡ್ಡಬಳ್ಳಾಪುರ: ತಾಲೂಕಿನ ಮಾಕಳಿ ದುರ್ಗ ಸೇರಿದಂತೆ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದ ಸಮೀಪದ ಅರಣ್ಯ ಪ್ರದೇಶಗಳಿಗೆ ಸುಡು ಬಿಸಿಲಿನೊಂದಿಗೆ ಬೆಂಕಿಗೆ ಆಹುತಿಯಾಗುತ್ತಿವೆ. ಈ ಕುರಿತು ಜಾಗೃತಿ ಮೂಡಿಸುವ ಹಂತದಲ್ಲಿ ಕರ್ನಾಟಕ ರಾಜ್ಯ ನಾಮಫಲಕ ಕಲಾವಿದರ ದೊಡ್ಡಬಳ್ಳಾಪುರ ತಾಲೂಕು ಸಮಿತಿ ಎಸ್‌.ಎಸ್‌.ಘಾಟಿ ರಸ್ತೆಯುದ್ದಕ್ಕೂ ಗೋಡೆ ಬರಹದೊಂದಿಗೆ ಜಾಗೃತಿ ಮೂಡಿಸುವ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.
Vijaya Karnataka Web environmental awareness campaign from wall writings
ಗೋಡೆ ಬರಹಗಳಿಂದ ಪರಿಸರ ಜಾಗೃತಿ ಅಭಿಯಾನ


ಸಾಮಾಜಿಕ ಕಳಕಳಿ: ಬಿರು ಬಿಸಿಲಿನ ಬೇಗೆಯಲ್ಲಿ ನೀರು ಸಿಗದೆ ಸಣ್ಣ ಪಕ್ಷಿ ಪ್ರಬೇಧಗಳು, ಪ್ರಾಣಿಗಳು ನಲುಗುತ್ತಿರುವುದು ಒಂದೆಡೆಯಾದರೆ, ಅರಣ್ಯ ಪ್ರದೇಶಗಳಿಗೆ ಬೆಂಕಿ ಆವರಿಸುತ್ತಿರುವ ಪರಿಣಾಮ ಪ್ರಾಣಿ, ಪಕ್ಷಿ ಸಂಕುಲ ನಾಶವಾಗುತ್ತಿವೆ. ಇದರಿಂದ ಕೃಷಿ ಮೇಲೂ ಪರಿಣಾಮ ಬೀರುತ್ತಿದೆ. ಇಂತಹ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ನಾಮಫಲಕ ಸಂಘದ ತಾಲೂಕು ಸಮಿತಿಯೂ ಕಾಡು ಉಳಿಸುವ ಅನಿವಾರ್ಯತೆಯ .ಕುರಿತು ಗೋಡೆ ಬರಹದ ಮೂಲಕ ಜನ ಜಾಗೃತಿ ಮೂಡಿಸುವ ಕಾರ್ಯಕ್ಕೆ ಮುಂದಾಗುವ ಮೂಲಕ ಪರಿಸರ ಉಳಿಸುವ ಕರ್ತವ್ಯದ ಕುರಿತು ಜನಕ್ಕೆ ಸಂದೇಶ ಮುಟ್ಟಿಸುವ ಸಾಮಾಜಿಕ ಕಳಕಳಿಯನ್ನು ಮೆರೆಯುತ್ತಿದ್ದಾರೆ.

ಶ್ರೀಸುಬ್ರಮಣ್ಯ ಘಾಟಿ ಕ್ಷೇತ್ರಕ್ಕೆ ನಿತ್ಯ ಸಾವಿರಾರು ಮಂದಿ ಭಕ್ತಾಧಿಗಳು ಆಗಮಿಸುತ್ತಾರೆ. ಹೀಗಾಗಿ ಜಾಗೃತಿ ಬರಹಗಳಿಗೆ ಎಸ್‌.ಎಸ್‌.ಘಾಟಿ ರಸ್ತೆಯನ್ನೆ ಆಯ್ಕೆ ಮಾಡಿಕೊಂಡಿದ್ದೇವೆ. ಇದರೊಂದಿಗೆ ಆರಂಭವಾಗಿರುವ ನಮ್ಮ ಅಭಿಯಾನ ಪ್ರತಿ ರಸ್ತೆಗಳಿಗೂ ವಿಸ್ತರಿಸಲಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.

ಪರಿಸರ ಜಾಗೃತಿ: ಬೇಸಿಗೆಯ ರಣ ಬಿಸಿಲಿಗೆ ಪದೇ ಪದೇ ಅರಣ್ಯ ಬೆಂಕಿಗೆ ಆಹುತಿಯಾಗುತ್ತಿದೆ. ಬಿಡಿ, ಸಿಗರೇಟ್‌ ಸೇದುವ ವ್ಯಸನಿಗಳ ಅಜಾಗೃತೆಯಿಂದಲೂ ಅರಣ್ಯ ಪ್ರದೇಶಗಳು ಬೆಂಕಿಗೆ ಆಹುತಿಯಾಗುತ್ತಿವೆ. ಇದರೊಂದಿಗೆ ಕೆಲ ಕಿಡಿಗೇಡಿಗಳು ಇದ್ದಿಲಿಗಾಗಿಯೂ ಬೆಂಕಿ ಹಚ್ಚುತ್ತಾರೆ ಎಂಬ ಶಂಕೆಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿವೆ. ಇಂತಹ ಸಂದರ್ಭದಲ್ಲಿ ನಮ್ಮ ಸಂಘ ಗೋಡೆ ಬರಹಘಲ ಮೂಲಕ ಪರಿಸರ ಜಾಗೃತಿ ಮೂಡಿಸುವ ಕೈಂಕರ್ಯಕ್ಕೆ ಮುಂದಾಗಿದ್ದೇವೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.

ಸಂಘದ ಅಧ್ಯಕ್ಷ ಸೂರ್ಯಕುಮಾರ್‌ (ಎಸ್‌.ಕೆ.ಆರ್ಟ್ಸ್), ಕಾರ್ಯಾಧ್ಯಕ್ಷ ಚಂದ್ರಶೇಖರ್‌.ಡಿ.ಉಪ್ಪಾರ್‌, ಉಪಾಧ್ಯಕ್ಷ ಷರೀಫ್‌(ಆರ್ಟ್‌ ಲಿಂಕ್ಸ್‌), ಸಂಘಟನಾ ಕಾರ್ಯದರ್ಶಿ ವಿ.ಅಶೋಕ್‌(ಅಶೋಕ್‌ ಆರ್ಟ್‌್ಸ), ಸದಸ್ಯರಾದ ಉಮಾಶಂಕರ್‌, ಸುಬ್ರಹ್ಮಣಿ, ರವಿ, ಸುರೇಶ್‌, ಮಂಜುನಾಥ್‌ ಮತ್ತು ಅರಣ್ಯ ಸಿಬ್ಬಂದಿ ಕಿರಣ್‌ ಕುಮಾರ್‌, ಅಪ್ಪಯ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ