ಆ್ಯಪ್ನಗರ

ಎತ್ತಿನಹೊಳೆ ಕಾಸು ಹೊಡೆಯುವ ಯೋಜನೆ

ಎತ್ತಿನಹೊಳೆ ಕಾಸು ಹೊಡೆಯುವ ಯೋಜನೆಯೆ ಹೊರತು ಬಯಲುಸೀಮೆಗೆ ನೀರು ನೀಡುವ ಯೋಜನೆಯಾಗಿಲ್ಲ. ಚುನಾಚವಣಾ ಅಸ್ತ್ರವಾಗಿ ಮೋಯ್ಲಿ ಅವರು ಯೋಜನೆಯನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ಯುವ ಮೋರ್ಚಾ ರಾಜ್ಯ ಕಾರ‍್ಯದರ್ಶಿ ಶರತ್‌ಬಚ್ಚೇಗೌಡ ಟೀಕಿಸಿದರು.

Vijaya Karnataka 29 Mar 2019, 5:00 am
ಬಿಜೆಪಿ ಯುವ ಮೋರ್ಚಾ ರಾಜ್ಯ ಕಾರ‍್ಯದರ್ಶಿ ಶರತ್‌ ಬಚ್ಚೇಗೌಡ ಆರೋಪ
Vijaya Karnataka Web ettinahole money grabing project sharat bache gowda
ಎತ್ತಿನಹೊಳೆ ಕಾಸು ಹೊಡೆಯುವ ಯೋಜನೆ


ವಿಕ ಸುದ್ದಿಲೋಕ ದೊಡ್ಡಬಳ್ಳಾಪುರ

ಎತ್ತಿನಹೊಳೆ ಕಾಸು ಹೊಡೆಯುವ ಯೋಜನೆಯೆ ಹೊರತು ಬಯಲುಸೀಮೆಗೆ ನೀರು ನೀಡುವ ಯೋಜನೆಯಾಗಿಲ್ಲ. ಚುನಾಚವಣಾ ಅಸ್ತ್ರವಾಗಿ ಮೋಯ್ಲಿ ಅವರು ಯೋಜನೆಯನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ಯುವ ಮೋರ್ಚಾ ರಾಜ್ಯ ಕಾರ‍್ಯದರ್ಶಿ ಶರತ್‌ಬಚ್ಚೇಗೌಡ ಟೀಕಿಸಿದರು.

ಅವರು ತಾಲೂಕಿನ ರಾಜಘಟ್ಟ ಶ್ರೀ ಆಂಜನೇಯಸ್ವಾಮಿ ದೇವಾಲಯದ ಸಮೀಪದ ವಿಶ್ವಕುಂಡಲಿ ಆಶ್ರಮದಲ್ಲಿ ನಡೆದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವಾಲ್ಮೀಕಿ ಸಮುದಾಯದ ಬಿಜೆಪಿ ಮುಖಂಡರ ಸಭೆಯಲ್ಲಿ ಮಾತನಾಡಿ ಬಿಜೆಪಿ ಸರ್ಕಾರದಲ್ಲಿ 9 ಸಾವಿರ ಕೋಟಿ ಹಣವನ್ನು ಎತ್ತಿನಹೊಳೆ ಯೋಜನೆಗೆ ಮೀಸಲಿಟ್ಟಿದ್ದರು. ಆ ಹಣವನ್ನು ಕಾಂಗ್ರೆಸ್‌ ಸರಕಾರ, ಪ್ರಸಕ್ತ ಸಮ್ಮಿಶ್ರ ಸರಕಾರಗಳು ಕೊಳ್ಳೆ ಹೊಡೆಯುತಿವೆ. ಮಾರ್ಚ್‌ ತಿಂಗಳಲ್ಲೆ ನೀರಿನ ಅಭಾವ ಆರಂಭವಾಗಿದೆ ಇನ್ನು ಜುಲೈನಲ್ಲಿ ಮಳೆಯಾಗುವ ವರೆಗೂ ಕ್ಷೇತ್ರದಲ್ಲಿ ಜಲ ಕ್ಷಾಮ ಎದುರಾಗಲಿದೆ. ಇಂತಹ ಪರಿಸ್ಥಿತಿ ಇದ್ದರೂ ಶಾಶ್ವತ ನೀರಾವರಿ ಕಲ್ಪಿಸುವಲ್ಲಿ ಸಣಸದ ವೀರಪ್ಪಮೋಯ್ಲಿ ಸಂಪೂರ್ಣ ವಿಫಲವಾಗಿದ್ದಾರೆæ ಎಂದರು.

ಕೃಷ್ಣೆ ಬಂದರೂ ಎತ್ತಿನಹೊಳೆ ಬರೋಲ್ಲ.: ಗೌರಿಬಿದನೂರಿಗೆ ದೂರದ ಕೃಷ್ಣಾ ನದಿಯಿಂದ ನೀರು ತರುವ ಪ್ರಸ್ತಾಪವಿದೆ. ಕೃಷ್ಣೆ ಬಂದರೂ ಎತ್ತಿನಹೊಳೆ ಬರುವ ಸಾಧ್ಯತೆ ಇಲ್ಲ ಎಂದು ಲೇವಡಿಮಾಡಿದರು.

ನೀವೆ ಚೌಕಿದಾರರಾಗಿ ಮೋದಿ ಪ್ರಧಾನಿ ಮಾಡಿ; ದೇಶದಲ್ಲಿ 18 ಕೋಟಿ ನಾಯಕ ಸಮುದಾಯದ ಮತಗಳಿದ್ದು, ಈ ಬಾರಿ ಸಮುದಾಯ ಮೋದಿಯ ಗೆಲುವಿಗೆ ಮುಂದಾಗಬೇಕು ಎಂದರು

ವಾಲ್ಮೀಕಿ ರೆಜಿಮೆಂಟ್‌ ಸ್ಥಾಪನೆಯಾಗಲಿ


ಈ ಸಂದರ್ಭದಲ್ಲಿ ಮಾತನಾಡಿದ ಆಶ್ರಮದ ಬ್ರಹ್ಮಾನಂದಸ್ವಾಮೀಜಿ, ವಾಲ್ಮೀಕಿ ಸಮುದಾಯ ಶೈಕ್ಷ ಣಿಕ, ರಾಜಕೀಯ, ಆರ್ಥಿಕ ಪ್ರಗತಿಯಲ್ಲಿ ಹಿಂದೆ ಇದೆ. ಈ ನಿಟ್ಟಿನಲ್ಲಿ ವಾಲ್ಮೀಕಿ ರೆಜಿಮೆಂಟ್‌ ಸ್ಥಾಪನೆ ಮಾಡುವಲ್ಲಿ ಕೇಂದ್ರ ಸರ್ಕಾರ ಮುಂದಾಗಬೇಕು. ಇದರೊಂದಿಗೆ ಕೇಂದ್ರ ಸರ್ಕಾರ ಒಂದು ದಿನವನ್ನು ಮೀಸಲಿಡುವ ಮೂಲಕ ಕೇಂದ್ರ ಸರ್ಕಾದಿಂದ ವಾಲ್ಮೀಕಿ ಜಯಂತಿ ಆಚರಣೆಗೆ ಮುಂದಾಗುವ ಮೂಲಕ ನಮ್ಮ ಸಮುದಾಯಕ್ಕೆ ಸ್ವಾಭಿಮಾನದ ಬದುಕು ಕಟ್ಟಿಕೊಡಬೇಕು ಎಂದು ಆಗ್ರಹಿಸಿದರು.

ಸಭೆಯಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವಾಲ್ಮೀಕಿ ಸಮುದಾಯದ ಬಿಜೆಪಿ ಮುಖಂಡರು, ಕಾರ್ಯಕರ್ತರು, ಸೇರಿದಂತೆ ಜಿಲ್ಲಾ ಮಟ್ಟದ ಬಿಜೆಪಿ ಮುಖಂಡರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ