ನೆಲಮಂಗಲ: ನೀಲಗಿರಿ ತೋಪು ಸೇರಿದಂತೆ ಹತ್ತಾರು ಎಕರೆ ಅರಣ್ಯ ಪ್ರದೇಶ ಬೆಂಕಿಯ ಕೆನ್ನಾಲಿಗೆಗೆ ಭಸ್ಮವಾಗಿರುವ ಘಟನೆ ಸೋಮವಾರ ಸಂಭವಿಸಿದೆ. ಬೆಂಗಳೂರು ಮಂಗಳೂರು ರಸ್ತೆಯಲ್ಲಿರುವ ತಾಲೂಕಿನ ಗಡಿ ಪ್ರದೇಶವಾದ ಕೊರಟಗೆರೆ ಗ್ರಾಮದ ಸಮೀಪದಲ್ಲಿರುವ ಅರಣ್ಯ ಪ್ರದೇಶ ಸೇರಿದಂತೆ ಖಾಸಗಿ ವ್ಯಕ್ತಿಗಳಿಗೆ ಸೇರಿದ ನೀಲಗಿರಿ ತೋಪು ಬೆಂಕಿಗಾಹುತಿಯಾಗಿದ್ದು ಸಾಕಷ್ಟು ನಷ್ಟ ಸಂಭವಿಸಿದೆ.
ಬೇಸಿಗೆ ಸನಿಹದಲ್ಲಿದ್ದು ಬೇಸಿಗೆಯನ್ನು ಮೀರಿಸುವಂತಹ ಬಿಸಿಲ ಝಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ನೀಲಗಿರಿ ತೋಪು ಸೇರಿದಂತೆ ಅರಣ್ಯ ಪ್ರದೇಶದಲ್ಲಿರುವ ಗಿಡಮರಗಳ ಎಲೆಗಳು ಉದುರಿ ಒಳಗಿದ್ದು ಯಾರೋ ದಾರಿ ಹೋಕರು ಬಿಸಾಡಿದ್ದ ಬೆಂಕಿಕಡ್ಡಿ ಅಥವಾ ಬೀಡಿ ಸಿಗರೇಟಿನ ತುಂಡುಗಳಿಂದ ಅಥವಾ ಅರಣ್ಯದಲ್ಲಿ ಒಣಗಿದ ಮರಗಳ ಕಾಡ್ಗಿಚ್ಚಿನಿಂದಾಗಿ ಬೆಂಕಿ ಕಾಣಿಸಿಕೊಂಡು ಅಗ್ನಿವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.
ನೀಲಗಿರಿ ತೋಪು ಸೇರಿದಂತೆ ಅರಣ್ಯದಲ್ಲಿ ಅಗ್ನಿ ಕಾಣಿಸಿಕೊಂಡ ಹಿನ್ನಲೆಯಲ್ಲಿ ಅರಣ್ಯದಲ್ಲಿದ್ದ ಸಾಕಷ್ಟು ಪಕ್ಷಿಗಳು, ಸಣ್ಣಪುಟ್ಟ ಪ್ರಾಣಿಗಳು ಸೆರಿದಂತೆ ಸಾಕಷ್ಟು ಸರೀಸೃಪಗಳು ಅಗ್ನಿಯ ಕೆನ್ನಾಲಿಗೆಗೆ ಬಲಿಯಾಗಿದ್ದು ಯಾವುದೇ ರೀತಿಯ ಹೆಚ್ಚಿನ ಹಾನಿಯಾಗಿಲ್ಲ.
ಅಗ್ನಿಶಾಮಕ ಸಿಬ್ಬಂದಿ ಅಗ್ನಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದು ಪ್ರಕರಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಬೇಸಿಗೆ ಸನಿಹದಲ್ಲಿದ್ದು ಬೇಸಿಗೆಯನ್ನು ಮೀರಿಸುವಂತಹ ಬಿಸಿಲ ಝಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ನೀಲಗಿರಿ ತೋಪು ಸೇರಿದಂತೆ ಅರಣ್ಯ ಪ್ರದೇಶದಲ್ಲಿರುವ ಗಿಡಮರಗಳ ಎಲೆಗಳು ಉದುರಿ ಒಳಗಿದ್ದು ಯಾರೋ ದಾರಿ ಹೋಕರು ಬಿಸಾಡಿದ್ದ ಬೆಂಕಿಕಡ್ಡಿ ಅಥವಾ ಬೀಡಿ ಸಿಗರೇಟಿನ ತುಂಡುಗಳಿಂದ ಅಥವಾ ಅರಣ್ಯದಲ್ಲಿ ಒಣಗಿದ ಮರಗಳ ಕಾಡ್ಗಿಚ್ಚಿನಿಂದಾಗಿ ಬೆಂಕಿ ಕಾಣಿಸಿಕೊಂಡು ಅಗ್ನಿವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.
ನೀಲಗಿರಿ ತೋಪು ಸೇರಿದಂತೆ ಅರಣ್ಯದಲ್ಲಿ ಅಗ್ನಿ ಕಾಣಿಸಿಕೊಂಡ ಹಿನ್ನಲೆಯಲ್ಲಿ ಅರಣ್ಯದಲ್ಲಿದ್ದ ಸಾಕಷ್ಟು ಪಕ್ಷಿಗಳು, ಸಣ್ಣಪುಟ್ಟ ಪ್ರಾಣಿಗಳು ಸೆರಿದಂತೆ ಸಾಕಷ್ಟು ಸರೀಸೃಪಗಳು ಅಗ್ನಿಯ ಕೆನ್ನಾಲಿಗೆಗೆ ಬಲಿಯಾಗಿದ್ದು ಯಾವುದೇ ರೀತಿಯ ಹೆಚ್ಚಿನ ಹಾನಿಯಾಗಿಲ್ಲ.
ಅಗ್ನಿಶಾಮಕ ಸಿಬ್ಬಂದಿ ಅಗ್ನಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದು ಪ್ರಕರಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.