ವಿಜಯಕುಮಾರ ಎಚ್.ಎಸ್.
ನೆಲಮಂಗಲ (ಬೆಂಗಳೂರು ಗ್ರಾಮಾಂತರ): ಕೊರೊನಾ ಆತಂಕದಲ್ಲಿ ಜೀವನ ಸಾಗಿಸುತ್ತಿರುವ ಸೋಂಕಿತರಿಗೆ ಸಾಮಾಜಿಕ ಜಾಲತಾಣಗಳ ಸುಳ್ಳು ಸಂದೇಶಗಳು ಮಾನಸಿಕವಾಗಿ ಹಿಂಸೆ ನೀಡುತ್ತಿದ್ದು ಕೆಲವು ವ್ಯಕ್ತಿಗಳು ಹಾಗೂ ಆಸ್ಪತ್ರೆಗಳ ಮೇಲೆ ಅಪಪ್ರಚಾರ ಮಾಡುತ್ತಿರುವುದು ಕಂಡುಬಂದಿದೆ. ರಾಜ್ಯದ ಕೋವಿಡ್ ವ್ಯವಸ್ಥೆಯಲ್ಲಿನ ಕೆಲವು ಸಮಸ್ಯೆಗಳಿಂದ ಪಾಸಿಟಿವ್ ಎಂಬ ಸಂದೇಶ ಬಂದ ತಕ್ಷಣ ಸೋಂಕಿತರು ಮಾನಸಿಕವಾಗಿ ಕುಗ್ಗುತ್ತಿದ್ದಾರೆ. ಇದರ ಜೊತೆ ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಗೇಡಿಗಳು ವ್ಯಕ್ತಿಯ ಸುಳ್ಳು ಸಂಪರ್ಕದ ವಿವರಗಳು, ಮನೆಯ ಸದಸ್ಯರಿಗೆ ಸೋಂಕು ಬಂದಿದೆ ಎಂದು ಸುಳ್ಳು ಸಂದೇಶಗಳನ್ನು ಪ್ರಚಾರ ಮಾಡುತ್ತಿರುವುದು ಆತಂಕದ ಜತೆ ಸೋಂಕಿತ ವ್ಯಕ್ತಿಯನ್ನು ಶತ್ರುವಾಗಿ ನೋಡುವ ಪರಿಸ್ಥಿತಿ ಎದುರಾಗಿದೆ.
ದೂರು ದಾಖಲು: ಕೊರೊನಾ ಆರ್ಥಿಕ ಹೊಡೆತದ ಸಂದರ್ಭದಲ್ಲಿ ರಾಜ್ಯದ ಕೆಲವು ಸಂಸ್ಥೆಗಳು ಹಾಗೂ ಆಸ್ಪತ್ರೆಗಳ ಮೇಲೆ ಸುಳ್ಳು ಸಂದೇಶಗಳನ್ನು ಕಳುಹಿಸಿ ಜನರಲ್ಲಿಆತಂಕ ಸೃಷ್ಟಿಸುತ್ತಿದ್ದು ಇದಕ್ಕೆ ಉದಾಹರಣೆ ಎಂಬಂತೆ ತಹಸೀಲ್ದಾರ್ಗೆ ಕೊರೊನಾ ಬಂದಿದೆ ಹಾಗೂ ನೆಲಮಂಗಲದ ವಿಪಿ ಮ್ಯಾಗ್ನೇಸ್ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳಿಗೆ ಕೊರೊನಾ ಬಂದಿದೆ ಎಂಬ ಸುಳ್ಳು ಸಂದೇಶ ನೀಡಿ ಜನರು ಆಸ್ಪತ್ರೆಯ ಕಡೆ ಮುಖಮಾಡದಂತಾಗಿತ್ತು. ಇದರ ಬಗ್ಗೆ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿಜಿ ಎಸ್ಸಿ ನಂ 248/2020ರಲ್ಲಿ ದೂರು ಸಹ ದಾಖಲಾಗಿದೆ.
Fake ಅಲರ್ಟ್: ದೇಶದ ಪ್ರತಿಯೊಬ್ಬ ಪ್ರಜೆಗೂ 2 ಸಾವಿರ ರೂ. ಪರಿಹಾರ ಕೊಡುತ್ತಾ ಸರ್ಕಾರ..?
ಸಂದೇಶ ರವಾನಿಸುವ ಮೊದಲು ಎಚ್ಚರವಹಿಸಿ
ಭಾರತೀಯ ಸೇನೆ ಕಾಶ್ಮೀರಿ ಬಾಲಕನನ್ನು ಹತ್ಯೆ ಮಾಡಿತಾ? ಈ ಸುದ್ದಿಯ ಸತ್ಯಾಂಶವೇನು?
ಕೊರೊನಾ ಪಾಸಿಟಿವ್ ಬಂದ ನಂತರ ಕಾಯಿಲೆಗೆ ಭಯ ಪಡುವುದಕ್ಕಿಂತ ಸಾಮಾಜಿಕ ಜಾಲತಾಣದಲ್ಲಿ ಬರುವ ಸುಳ್ಳು ಸುದ್ದಿಗಳಿಂದ ಆತಂಕ ಎದುರಾಗಿದ್ದು, ಮಾನಸಿಕ ಹಿಂಸೆ ನೀಡಿದಂತಾಗುತ್ತದೆ. ಅಂತಹವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಬೇಕು ಎಂದು ಕೊರೊನಾ ಸೋಂಕಿತ ವ್ಯಕ್ತಿ ಆಗ್ರಹಿಸಿದ್ದಾರೆ.
ಚೀನಾ ಜೊತೆಗಿನ ಸಂಘರ್ಷದಲ್ಲಿ ಹುತಾತ್ಮರಾದವರಿಗೆ ಶ್ರದ್ಧಾಂಜಲಿ ಸಲ್ಲಿಸುವಾಗ ಸೆಹ್ವಾಗ್ ಎಡವಟ್ಟು..!
ನೆಲಮಂಗಲ (ಬೆಂಗಳೂರು ಗ್ರಾಮಾಂತರ): ಕೊರೊನಾ ಆತಂಕದಲ್ಲಿ ಜೀವನ ಸಾಗಿಸುತ್ತಿರುವ ಸೋಂಕಿತರಿಗೆ ಸಾಮಾಜಿಕ ಜಾಲತಾಣಗಳ ಸುಳ್ಳು ಸಂದೇಶಗಳು ಮಾನಸಿಕವಾಗಿ ಹಿಂಸೆ ನೀಡುತ್ತಿದ್ದು ಕೆಲವು ವ್ಯಕ್ತಿಗಳು ಹಾಗೂ ಆಸ್ಪತ್ರೆಗಳ ಮೇಲೆ ಅಪಪ್ರಚಾರ ಮಾಡುತ್ತಿರುವುದು ಕಂಡುಬಂದಿದೆ.
ದೂರು ದಾಖಲು: ಕೊರೊನಾ ಆರ್ಥಿಕ ಹೊಡೆತದ ಸಂದರ್ಭದಲ್ಲಿ ರಾಜ್ಯದ ಕೆಲವು ಸಂಸ್ಥೆಗಳು ಹಾಗೂ ಆಸ್ಪತ್ರೆಗಳ ಮೇಲೆ ಸುಳ್ಳು ಸಂದೇಶಗಳನ್ನು ಕಳುಹಿಸಿ ಜನರಲ್ಲಿಆತಂಕ ಸೃಷ್ಟಿಸುತ್ತಿದ್ದು ಇದಕ್ಕೆ ಉದಾಹರಣೆ ಎಂಬಂತೆ ತಹಸೀಲ್ದಾರ್ಗೆ ಕೊರೊನಾ ಬಂದಿದೆ ಹಾಗೂ ನೆಲಮಂಗಲದ ವಿಪಿ ಮ್ಯಾಗ್ನೇಸ್ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳಿಗೆ ಕೊರೊನಾ ಬಂದಿದೆ ಎಂಬ ಸುಳ್ಳು ಸಂದೇಶ ನೀಡಿ ಜನರು ಆಸ್ಪತ್ರೆಯ ಕಡೆ ಮುಖಮಾಡದಂತಾಗಿತ್ತು. ಇದರ ಬಗ್ಗೆ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿಜಿ ಎಸ್ಸಿ ನಂ 248/2020ರಲ್ಲಿ ದೂರು ಸಹ ದಾಖಲಾಗಿದೆ.
Fake ಅಲರ್ಟ್: ದೇಶದ ಪ್ರತಿಯೊಬ್ಬ ಪ್ರಜೆಗೂ 2 ಸಾವಿರ ರೂ. ಪರಿಹಾರ ಕೊಡುತ್ತಾ ಸರ್ಕಾರ..?
ಸಂದೇಶ ರವಾನಿಸುವ ಮೊದಲು ಎಚ್ಚರವಹಿಸಿ
- ಸಂದೇಶಗಳನ್ನು ಸಂಪೂರ್ಣವಾಗಿ ಓದಿ ಕಳುಹಿಸಿದ ವ್ಯಕ್ತಿಗೆ ಪ್ರಶ್ನೆ ಮಾಡಿ
- ಸರಕಾರಿ ಅಧಿಕಾರಿ ತಿಳಿಸಿರುವ ಬಗ್ಗೆ ಖಾತರಿಮಾಡಿಕೊಳ್ಳಿ
- ಸುಳ್ಳು ಸಂದೇಶ ಎಂದು ತಿಳಿದರೆ ಅಧಿಕಾರಿಗಳು ಅಥವಾ ಪೊಲೀಸರ ಗಮನಕ್ಕೆ ತನ್ನಿ
- ಸಂದೇಶ ಶೇರ್ ಮಾಡುವ ಮೊದಲು ಸತ್ಯತೆಯ ಬಗ್ಗೆ ಅರಿತುಕೊಳ್ಳಿ
- ಸೋಂಕಿತ ವ್ಯಕ್ತಿಯ ಹೆಸರು ಹಾಗೂ ವೈಯಕ್ತಿಕ ವಿಚಾರವನ್ನು ಹಚ್ಚಿಕೊಳ್ಳುವಂತಿಲ್ಲ
- ಅಧಿಕೃತ ಪ್ರಕಟಣೆ ಹಾಗೂ ಡಿಸಿ,ತಹಸೀಲ್ದಾರ್, ಡಿಎಚ್ಓ, ಟಿಎಚ್ಓ ಪ್ರತಿಕ್ರಿಯೆ ಕಡ್ಡಾಯ
- ಸುಳ್ಳು ಸಂದೇಶ ಕಳುಹಿಸಿ ತಪ್ಪುಮಾಡಬೇಡಿ
- ಸೋಂಕಿತರಲ್ಲಿ ಮಾನಸಿಕ ಹಿಂಸೆ
- ಕೊರೊನಾ ವಾರಿಯರ್ಸ್ಗಳನ್ನು ಅನುಮಾನವಾಗಿ ನೋಡುವುದು
- ಜನರಲ್ಲಿಆತಂಕ ಹೆಚ್ಚಾಗುವುದು
- ಆರ್ಥಿಕ ಹೊಡೆತದಲ್ಲಿನ ಸಂಸ್ಥೆಗಳಿಗೆ ಮತ್ತಷ್ಟು ಸಮಸ್ಯೆ
- ಜನರು ವ್ಯಕ್ತಿ ಹಾಗೂ ಸಂಸ್ಥೆಯ ಜತೆ ವ್ಯವಹಾರ ನಿಲ್ಲಿಸುವುದು ಸಮಸ್ಯೆ ಸೃಷ್ಟಿ
ಭಾರತೀಯ ಸೇನೆ ಕಾಶ್ಮೀರಿ ಬಾಲಕನನ್ನು ಹತ್ಯೆ ಮಾಡಿತಾ? ಈ ಸುದ್ದಿಯ ಸತ್ಯಾಂಶವೇನು?
ಕೊರೊನಾ ಪಾಸಿಟಿವ್ ಬಂದ ನಂತರ ಕಾಯಿಲೆಗೆ ಭಯ ಪಡುವುದಕ್ಕಿಂತ ಸಾಮಾಜಿಕ ಜಾಲತಾಣದಲ್ಲಿ ಬರುವ ಸುಳ್ಳು ಸುದ್ದಿಗಳಿಂದ ಆತಂಕ ಎದುರಾಗಿದ್ದು, ಮಾನಸಿಕ ಹಿಂಸೆ ನೀಡಿದಂತಾಗುತ್ತದೆ. ಅಂತಹವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಬೇಕು ಎಂದು ಕೊರೊನಾ ಸೋಂಕಿತ ವ್ಯಕ್ತಿ ಆಗ್ರಹಿಸಿದ್ದಾರೆ.
ಚೀನಾ ಜೊತೆಗಿನ ಸಂಘರ್ಷದಲ್ಲಿ ಹುತಾತ್ಮರಾದವರಿಗೆ ಶ್ರದ್ಧಾಂಜಲಿ ಸಲ್ಲಿಸುವಾಗ ಸೆಹ್ವಾಗ್ ಎಡವಟ್ಟು..!