ನಾಗರಾಜ ಎನ್.ಎಂ. ನಂದಗುಡಿ
ಬೆಂಗಳೂರು ಗ್ರಾಮಾಂತರ: ಬಿಸಿಲ ತಾಪ ಏರಿಕೆಯಾಗುತ್ತಿದ್ದಂತೆ ಜನರು ತಮ್ಮ ದಣಿದ ದೇಹ ದಣಿವಾರಿಸಿಕೊಳ್ಳಲು ಎಳನೀರಿಗೆ ಮೊರೆ ಹೋಗುತ್ತಿರುವುದರಿಂದ ಸಹಜವಾಗಿ ಬೇಡಿಕೆ ಹೆಚ್ಚಾಗಿದೆ. ಕಲ್ಪವೃಕ್ಷ ಎಂದೊಡನೆ ಥಟ್ಟನೆ ನೆನಪಿಗೆ ಬರುವುದು ತೆಂಗಿನ ಮರ ಎಳೆಯದಾದ ಎಳನೀರಿಗೆ ವಿಪರೀತ ಬೇಡಿಕೆ ಬಂದಿದೆ. ನೈಸರ್ಗಿಕವಾಗಿ ಸಿಗುವ ಎಳನೀರು ದಿನನಿತ್ಯದ ಅಗತ್ಯ ವಿಟಮಿನ್, ಖನಿಜಾಂಶ, ಕಾರ್ಬೋಹೈಡ್ರೇಟ್, ಎಂಜೈಮ್ಸ್, ಸೈಟೋನ್ಯೂಟ್ರಿಯಂಟ್ಸ್ ಪೋಷಕಾಂಶಗಳನ್ನು ಈಡೇರಿಸುವ, ಯಾವುದೇ ರಾಸಾಯನಿಕ, ಕೃತಕ ಬಣ್ಣ, ವಾಸನೆಗಳಿಂದ ಮುಕ್ತವಾದ, ಅಬಾಲವೃದ್ಧರಿಗೂ ನೀಡಬಹುದಾಗಿದೆ. ಎಳನೀರು, ಆರೋಗ್ಯ ಪಾಲನೆಗೆ ಮತ್ತು ಚೈತನ್ಯ ವೃದ್ಧಿಗೆ ಶಕ್ತಿವರ್ಧಕ ಪಾನೀಯವಾಗಿದೆ.
ಬಡವರ ಪಾಲಿನ ಥಂಡಾ ಎಂದು ಕರೆಯಲ್ಪಡುವ ಎಳನೀರು ಕುಡಿದು ದೇಹ ತಣಿಸಿಕೊಳ್ಳಲು ಹೋದರೆ ದೇಹ ತಂಪಾಗುತ್ತದೆ. ಆದರೆ ದರ ಕೇಳಿದರೆ ಕಿಸೆಗೆ ಬಿಸಿಯೇರುತ್ತದೆ. 15ರಿಂದ 20 ರೂ. ಇದದ್ದು, ಈಗ ಒಂದಕ್ಕೆ 30ರಿಂದ 40 ರೂ.ವರೆಗೂ ಏರಿಕೆಯಾಗಿದೆ. ಈಗ ಎಳನೀರಿಗೆ ಬೇಡಿಕೆ ಎಷ್ಟಿದೆಯಂದರೆ ಮಾರುಕಟ್ಟೆಗೆ ಕಾಯಿ ತರುವಷ್ಟರಲ್ಲೆ ಖಾಲಿಯಾಗುತ್ತಿವೆ. ದುಬಾರಿ ಬೆಲೆ ಕೊಟ್ಟರೂ ಕಾಯಿಗಳು ಸಿಗುತ್ತಿಲ್ಲ.
ಮಾರುಕಟ್ಟೆಯಲ್ಲಿ ಎಳನೀರು ಒಂದಕ್ಕೆ 30ರಿಂದ 40ರೂ.ಗೆ ಮಾರಾಟವಾಗುತ್ತದೆ ಎಂದಾಕ್ಷಣ ಬೆಳೆಗಾರ ಕುಣಿದು ಕುಪ್ಪಳಿಸಿ ನಿಟ್ಟುಸಿರು ಬಿಡುವಂತಿಲ್ಲ. ಎಳನೀರು ಗಾತ್ರಕ್ಕೆ ತಕ್ಕಂತೆ ದರ ನಿಗದಿಪಡಿಸಿ ಮಧ್ಯವರ್ತಿಗಳು ತೋಟಗಳಲ್ಲೇ 10 ರಿಂದ 12ರೂ. ನಿಗದಿಪಡಿಸಿಕೊಳ್ಳುತ್ತಾರೆ. ಶ್ರಮವಹಿಸಿ ಬೆಳೆದ ರೈತರಿಗೆ ಸಿಗುವುದು ಪುಡಿಗಾಸು. ಇಲ್ಲಿಯೂ ಮಧ್ಯವರ್ತಿಗಳದೇ ಕಾರುಬಾರು.
ಬೆಲೆ ಏರಿಕೆಯ ಬಿಸಿ ಗ್ರಾಹಕನಿಗೆ ಮಾತ್ರ. ರೈತರು ಬೆಳೆದ ತೆಂಗಿಗೆ ರೋಗ ಬಾಧೆಗಳಿಗೆ ತುತ್ತಾಗಿ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಪ್ರಮುಖ ರಾಜ್ಯಗಳಲ್ಲಿ ಉತ್ಪಾದನೆ ಪ್ರಮಾಣ ಸಾಕಷ್ಟು ಕುಸಿದಿದೆ. ಬರಗಾಲದಿಂದ ನೀರಿನ ಸಮಸ್ಯೆಗಳಿಂದ ಮರಗಳಿದ್ದರೂ ಸಮಯಕ್ಕೆ ಫಸಲು ಬಾರದೆ ರೈತರು ಆತಂಕದಲ್ಲಿದ್ದಾರೆ.
ತೆಂಗಿನಕಾಯಿ, ತೆಂಗಿನ ಎಣ್ಣೆ, ಕೊಬ್ಬರಿ, ಸಾಬೂನು, ಹೇರ್ಕ್ರೀಮ್ ಮುಂತಾದ ಉತ್ಪನ್ನಗಳನ್ನು ತಯಾರಿಸಿ ವಿವಿಧ ದೇಶಗಳಿಗೆ ರಫ್ತಾಗುವುದಲ್ಲದೆ, ಎಳನೀರು ಆರೋಗ್ಯಕಾರಿ ಔಷಧಿಯ ಗುಣಗಳಿಂದಾಗಿ ದೇಶಿ ಮತ್ತು ವಿದೇಶಿ ಮಾರುಕಟ್ಟೆಗಳಲ್ಲಿ ಬೇಡಿಕೆ ಹೆಚ್ಚಾದ್ದರಿಂದ ಮಧ್ಯವರ್ತಿಗಳು ಎಳನೀರು ಕಾಯಿಗಳನ್ನು ಹೆಚ್ಚಿನ ಲಾಭದ ಆಸೆಯಿಂದ ಬೇರೆಡೆ ರವಾನಿಸುತ್ತಿದ್ದು, ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.
ಕಿಲೋಮೀಟರ್ಗಟ್ಟಲೆ ದೂರದ ತೋಟಗಳಲ್ಲಿ ಎಳನೀರು ಕಾಯಿ ಹುಡುಕಬೇಕು. ಮಧ್ಯವರ್ತಿಗಳು ಲೋಡುಗಟ್ಟಲೆ ಕಾಯಿ ಕೊಯ್ಯುತ್ತಾರೆ. ಸೈಕಲ್ನಲ್ಲಿ ಸಾಗಿಸುವಷ್ಟು ಕಾಯಿ ನೀಡಲು ರೈತರು ಹಿಂದೇಟು ಹಾಕುತ್ತಾರೆ. ಕಾಡಿ ಬೇಡಿ ಕಾಯಿ ಕೀಳಿಸಿ ರಸ್ತೆ ಬದಿಯಲ್ಲಿ ಮಾರಾಟ ಮಾಡಿದರೆ ದಿನವೊಂದಕ್ಕೆ 300ರೂ. ಸಿಗುತ್ತದೆ.
ಆಂಜಿನಪ್ಪ, ಎಳನೀರು ವ್ಯಾಪಾರಿ, ಚೊಕ್ಕಸಂದ್ರ
ಬೆಂಗಳೂರು ಗ್ರಾಮಾಂತರ: ಬಿಸಿಲ ತಾಪ ಏರಿಕೆಯಾಗುತ್ತಿದ್ದಂತೆ ಜನರು ತಮ್ಮ ದಣಿದ ದೇಹ ದಣಿವಾರಿಸಿಕೊಳ್ಳಲು ಎಳನೀರಿಗೆ ಮೊರೆ ಹೋಗುತ್ತಿರುವುದರಿಂದ ಸಹಜವಾಗಿ ಬೇಡಿಕೆ ಹೆಚ್ಚಾಗಿದೆ. ಕಲ್ಪವೃಕ್ಷ ಎಂದೊಡನೆ ಥಟ್ಟನೆ ನೆನಪಿಗೆ ಬರುವುದು ತೆಂಗಿನ ಮರ ಎಳೆಯದಾದ ಎಳನೀರಿಗೆ ವಿಪರೀತ ಬೇಡಿಕೆ ಬಂದಿದೆ.
ಬಡವರ ಪಾಲಿನ ಥಂಡಾ ಎಂದು ಕರೆಯಲ್ಪಡುವ ಎಳನೀರು ಕುಡಿದು ದೇಹ ತಣಿಸಿಕೊಳ್ಳಲು ಹೋದರೆ ದೇಹ ತಂಪಾಗುತ್ತದೆ. ಆದರೆ ದರ ಕೇಳಿದರೆ ಕಿಸೆಗೆ ಬಿಸಿಯೇರುತ್ತದೆ. 15ರಿಂದ 20 ರೂ. ಇದದ್ದು, ಈಗ ಒಂದಕ್ಕೆ 30ರಿಂದ 40 ರೂ.ವರೆಗೂ ಏರಿಕೆಯಾಗಿದೆ. ಈಗ ಎಳನೀರಿಗೆ ಬೇಡಿಕೆ ಎಷ್ಟಿದೆಯಂದರೆ ಮಾರುಕಟ್ಟೆಗೆ ಕಾಯಿ ತರುವಷ್ಟರಲ್ಲೆ ಖಾಲಿಯಾಗುತ್ತಿವೆ. ದುಬಾರಿ ಬೆಲೆ ಕೊಟ್ಟರೂ ಕಾಯಿಗಳು ಸಿಗುತ್ತಿಲ್ಲ.
ಮಾರುಕಟ್ಟೆಯಲ್ಲಿ ಎಳನೀರು ಒಂದಕ್ಕೆ 30ರಿಂದ 40ರೂ.ಗೆ ಮಾರಾಟವಾಗುತ್ತದೆ ಎಂದಾಕ್ಷಣ ಬೆಳೆಗಾರ ಕುಣಿದು ಕುಪ್ಪಳಿಸಿ ನಿಟ್ಟುಸಿರು ಬಿಡುವಂತಿಲ್ಲ. ಎಳನೀರು ಗಾತ್ರಕ್ಕೆ ತಕ್ಕಂತೆ ದರ ನಿಗದಿಪಡಿಸಿ ಮಧ್ಯವರ್ತಿಗಳು ತೋಟಗಳಲ್ಲೇ 10 ರಿಂದ 12ರೂ. ನಿಗದಿಪಡಿಸಿಕೊಳ್ಳುತ್ತಾರೆ. ಶ್ರಮವಹಿಸಿ ಬೆಳೆದ ರೈತರಿಗೆ ಸಿಗುವುದು ಪುಡಿಗಾಸು. ಇಲ್ಲಿಯೂ ಮಧ್ಯವರ್ತಿಗಳದೇ ಕಾರುಬಾರು.
ಬೆಲೆ ಏರಿಕೆಯ ಬಿಸಿ ಗ್ರಾಹಕನಿಗೆ ಮಾತ್ರ. ರೈತರು ಬೆಳೆದ ತೆಂಗಿಗೆ ರೋಗ ಬಾಧೆಗಳಿಗೆ ತುತ್ತಾಗಿ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಪ್ರಮುಖ ರಾಜ್ಯಗಳಲ್ಲಿ ಉತ್ಪಾದನೆ ಪ್ರಮಾಣ ಸಾಕಷ್ಟು ಕುಸಿದಿದೆ. ಬರಗಾಲದಿಂದ ನೀರಿನ ಸಮಸ್ಯೆಗಳಿಂದ ಮರಗಳಿದ್ದರೂ ಸಮಯಕ್ಕೆ ಫಸಲು ಬಾರದೆ ರೈತರು ಆತಂಕದಲ್ಲಿದ್ದಾರೆ.
ತೆಂಗಿನಕಾಯಿ, ತೆಂಗಿನ ಎಣ್ಣೆ, ಕೊಬ್ಬರಿ, ಸಾಬೂನು, ಹೇರ್ಕ್ರೀಮ್ ಮುಂತಾದ ಉತ್ಪನ್ನಗಳನ್ನು ತಯಾರಿಸಿ ವಿವಿಧ ದೇಶಗಳಿಗೆ ರಫ್ತಾಗುವುದಲ್ಲದೆ, ಎಳನೀರು ಆರೋಗ್ಯಕಾರಿ ಔಷಧಿಯ ಗುಣಗಳಿಂದಾಗಿ ದೇಶಿ ಮತ್ತು ವಿದೇಶಿ ಮಾರುಕಟ್ಟೆಗಳಲ್ಲಿ ಬೇಡಿಕೆ ಹೆಚ್ಚಾದ್ದರಿಂದ ಮಧ್ಯವರ್ತಿಗಳು ಎಳನೀರು ಕಾಯಿಗಳನ್ನು ಹೆಚ್ಚಿನ ಲಾಭದ ಆಸೆಯಿಂದ ಬೇರೆಡೆ ರವಾನಿಸುತ್ತಿದ್ದು, ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.
ಕಿಲೋಮೀಟರ್ಗಟ್ಟಲೆ ದೂರದ ತೋಟಗಳಲ್ಲಿ ಎಳನೀರು ಕಾಯಿ ಹುಡುಕಬೇಕು. ಮಧ್ಯವರ್ತಿಗಳು ಲೋಡುಗಟ್ಟಲೆ ಕಾಯಿ ಕೊಯ್ಯುತ್ತಾರೆ. ಸೈಕಲ್ನಲ್ಲಿ ಸಾಗಿಸುವಷ್ಟು ಕಾಯಿ ನೀಡಲು ರೈತರು ಹಿಂದೇಟು ಹಾಕುತ್ತಾರೆ. ಕಾಡಿ ಬೇಡಿ ಕಾಯಿ ಕೀಳಿಸಿ ರಸ್ತೆ ಬದಿಯಲ್ಲಿ ಮಾರಾಟ ಮಾಡಿದರೆ ದಿನವೊಂದಕ್ಕೆ 300ರೂ. ಸಿಗುತ್ತದೆ.
ಆಂಜಿನಪ್ಪ, ಎಳನೀರು ವ್ಯಾಪಾರಿ, ಚೊಕ್ಕಸಂದ್ರ