ಆ್ಯಪ್ನಗರ

23 ಕ್ಯಾಟ್‌ಫಿಶ್‌ ಸಾಕಾಣಿಕೆದಾರರ ವಿರುದ್ಧ ಎಫ್‌ಐಆರ್‌

ಕ್ಯಾಟ್‌ಫಿಶ್‌ ಸಾಕಾಣಿಕೆದಾರರ ವಿರುದ್ಧ ಎಫ್‌ಐಆರ್‌ ಅಸ್ತ್ರ ಹೂಡುವ ಮೂಲಕ ಈ ದಂಧೆಗೆ ಕಡಿವಾಣ ಹಾಕಲು ಮೀನುಗಾರಿಕೆ ಇಲಾಖೆ ಮುಂದಾಗಿದೆ.

Vijaya Karnataka 19 Jul 2019, 5:00 am
ಹೊಂಡ ತೆರವಿಗೆ ವಾರದ ಗಡುವು, ಬಂಧನದ ಎಚ್ಚರಿಕೆ
Vijaya Karnataka Web fir lodged to 23 cat fisherers
23 ಕ್ಯಾಟ್‌ಫಿಶ್‌ ಸಾಕಾಣಿಕೆದಾರರ ವಿರುದ್ಧ ಎಫ್‌ಐಆರ್‌

ಬೆಂಗಳೂರು ಗ್ರಾಮಾಂತರ : ಕ್ಯಾಟ್‌ಫಿಶ್‌ ಸಾಕಾಣಿಕೆದಾರರ ವಿರುದ್ಧ ಎಫ್‌ಐಆರ್‌ ಅಸ್ತ್ರ ಹೂಡುವ ಮೂಲಕ ಈ ದಂಧೆಗೆ ಕಡಿವಾಣ ಹಾಕಲು ಮೀನುಗಾರಿಕೆ ಇಲಾಖೆ ಮುಂದಾಗಿದೆ.

ಕಳೆದ ಮೂರ್ನಾಲ್ಕು ವರ್ಷದಿಂದ ಕ್ಯಾಟ್‌ಫಿಶ್‌ ಹೊಂಡ ತೆರವು ವಿಚಾರ ಜಿಪಂ ಸಭೆಯಲ್ಲಿ ಚರ್ಚೆಯಾಗುತ್ತಿದ್ದರೂ ಈ ಬಗ್ಗೆ ಕ್ರಮಕೈಗೊಂಡಿರಲಿಲ್ಲ. ಆದರೆ ಈ ಬಾರಿ ಎಫ್‌ಐಆರ್‌ ದಾಖಲಿಸುವಂತೆ ಸ್ಪಷ್ಟ ಸೂಚನೆ ನೀಡಿದ ಹಿನ್ನೆಲೆಯಲ್ಲಿ 23 ಕ್ಯಾಟ್‌ಫಿಶ್‌ ಸಾಕಾಣಿಕೆದಾರರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.

ಹೊಸಕೋಟೆ ತಾಲೂಕಿನ ಬೈಲನರಾಸಪುರದಲ್ಲಿ 15 ಹಾಗೂ ಎನ್‌.ಹೊಸಹಳ್ಳಿಯಲ್ಲಿ ಕ್ಯಾಟ್‌ಫಿಶ್‌ ಸಾಕಾಣಿಕೆ ಮಾಡುತ್ತಿದ್ದ ಎಂಟು ಮಂದಿ ವಿರುದ್ಧ ಮೀನುಗಾರಿಕೆ ಇಲಾಖೆ ಅಧಿಕಾರಿಗಳು ನಂದಗುಡಿ ಠಾಣೆಯಲ್ಲಿ ಗುರುವಾರ ದೂರು ನೀಡಿದ್ದು 23 ಮಂದಿ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ಎಫ್‌ಐಆರ್‌ ದಾಖಲಾದವರಿಗೆ ಹೊಂಡ ತೆರವುಗೊಳಿಸಲು ಒಂದು ವಾರದ ಗಡುವು ನೀಡಲಾಗುವುದು. ಒಂದು ವೇಳೆ ಹೊಂಡ ತೆರವುಗೊಳಿಸದಿದ್ದರೆ ನ್ಯಾಯಾಂಗ ಬಂಧನದ ಎಚ್ಚರಿಕೆ ಕೂಡ ನೀಡಲಾಗಿದೆ.

ಇತ್ತೀಚಿನ ದಿನಗಳಲ್ಲಿ ಕ್ಯಾಟ್‌ ಫಿಶ್‌ ಸಾಕಾಣಿಕೆ ಮಾಡುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಜಿಪಂ ಸಿಇಒ ಆರ್‌.ಲತಾ ಸೂಚನೆ ನೀಡಿದ್ದರು. ಕ್ಯಾಟ್‌ಫಿಶ್‌ ಸಾಕಾಣಿಕೆಯಿಂದ ಹದ್ದುಗಳ ಹಾರಾಟ ಹೆಚ್ಚಾಗುತ್ತದೆ. ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹೊಂದಿರುವುದರಿಂದ ವಿಮಾನ ಹಾರಾಟ ವೇಳೆ ಭಾರಿ ಅನಾಹುತ ಸಂಭವಿಸುವ ಮುನ್ನ ಎಚ್ಚೆತ್ತುಕೊಳ್ಳಬೇಕು ಎಂದು ಸೂಚಿಸಿದ ಹಿನ್ನೆಲೆಯಲ್ಲಿ ಕ್ಯಾಟ್‌ಫಿಶ್‌ ಸಾಕಾಣಿಕೆದಾರರ ವಿರುದ್ಧ ಕ್ರಮಕೈಗೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ.

ರಾಜಧಾನಿಯಿಂದ ಗ್ರಾಮಾಂತರಕ್ಕೆ ಶಿಫ್ಟ್‌

2013ಕ್ಕೂ ಮುಂಚೆ ಬಾಗಲೂರು ಸಮೀಪ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕ್ಯಾಟ್‌ಫಿಶ್‌ ಸಾಕಾಣಿಕೆ ನಡೆಯುತ್ತಿತ್ತು. ಆದರೆ ಬೆಂಗಳೂರು ನಗರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಿರಂತರ ದಾಳಿ ನಡೆಸಿ ಹೊಂಡಗಳನ್ನು ತೆರವುಗೊಳಿಸಿದ್ದರಿಂದ ಈ ದಂಧೆ ಇದೀಗ ಹೊಸಕೋಟೆ ಭಾಗಕ್ಕೆ ಶಿಫ್ಟ್‌ ಆಗಿದೆ. ನಂದಗುಡಿ, ಬೈಲನರಸಾಪುರ, ಗಿಡ್ಡಪ್ಪನಹಳ್ಳಿಯಲ್ಲಿ ಅತಿ ಹೆಚ್ಚಿಗೆ ಕ್ಯಾಟ್‌ಫಿಶ್‌ ಸಾಕಾಣಿಕೆ ಮಾಡುತ್ತಿದ್ದಾರೆ. ಮಾಹಿತಿ ಆಧಾರಿಸಿ ಹೊಂಡ ತೆರವುಗೊಳಿಸಿದರೂ ವಾರದಲ್ಲಿ ಮತ್ತೆ ಹೊಂಡ ನಿರ್ಮಾಣಗೊಳ್ಳುತ್ತಿತ್ತು. ಹೀಗಾಗಿ ಈ ಬಾರಿ ಎಫ್‌ಐಆರ್‌ ಅಸ್ತ್ರ ಬಳಸಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.

........

ಜಿಲ್ಲಾಧಿಕಾರಿ ಆದೇಶದ ಮೇಲೆ ಕ್ಯಾಟ್‌ಫಿಶ್‌ ಸಾಕಾಣಿಕೆ ಮಾಡುತ್ತಿದ್ದ 23 ಮಂದಿ ವಿರುದ್ಧ ಮೀನುಗಾರಿಕೆ ಇಲಾಖೆ ದೂರು ನೀಡಿದ್ದು ಪೊಲೀಸರು ಎಫ್‌ಐಆರ್‌ ದಾಖಲಿಸಲಿದ್ದಾರೆ.

-ಸುಬ್ರಮಣಿ,
ಸಹಾಯಕ ನಿರ್ದೇಶಕರು, ಮೀನುಗಾರಿಕೆ ಇಲಾಖೆ, ಹೊಸಕೋಟೆ

ಕ್ಯಾಟ್‌ ಫಿಶ್‌ ಸಾಕಾಣಿಕೆ ಮಾಡುತ್ತಿದ್ದ 23 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಹೊಂಡ ತೆರವುಗೊಳಿಸದಿದ್ದರೆ ಕಂದಾಯ, ಮೀನುಗಾರಿಕೆ ಹಾಗೂ ಪೊಲೀಸ್‌ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ಅಡ್ಡೆಗಳನ್ನು ನಾಶಪಡಿಸಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗುವದು.

-ಎಸ್‌.ಆರ್‌. ಮಂಜುನಾಥ್‌, ವೃತ್ತ ನಿರೀಕ್ಷ ಕ, ನಂದಗುಡಿ ಠಾಣೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ