ಅಗ್ನಿ ಅವಘಡ; ಸಾವಿರಾರು ಟೈರ್ಗಳು ಬೆಂಕಿಗಾಹುತಿ
ಇಲ್ಲಿನ ಬೆಂಗಳೂರು-ದೊಡ್ಡಬಳ್ಳಾಪುರ ಮುಖ್ಯ ರಸ್ತೆಯಲ್ಲಿರುವ ಟಾಫೆ ಟ್ರ್ಯಾಕ್ಟರ್ ಉತ್ಪಾದನಾ ಕಂಪನಿಯ ಟೈರ್ ಗೋದಾಮಿನಲ್ಲಿ ನಲ್ಲಿ ಗುರುವಾರ ನಸುಕಿನಜಾವ ಅಗ್ನಿಅವಘಡ ಸಂಭವಿಸಿದ್ದು, ಲಕ್ಷಾಂತರ ಮೌಲ್ಯದ ಟ್ರ್ಯಾಕ್ಟರ್ ಟೈರ್ಗಳು ಬೆಂಕಿಗೆ ಆಹುತಿಯಾಗಿವೆ.
Vijaya Karnataka 10 May 2019, 4:39 pm
ಅಗ್ನಿಶಾಮಕದಳದ ಸಕಾಲಿಕ ಪ್ರಯತ್ನದಿಂದ ತಪ್ಪಿದ ಭಾರಿ ಅವಘಡ | ನೋ ಕಂಪ್ಲೇಂಟ್!
ದೊಡ್ಡಬಳ್ಳಾಪುರ: ಇಲ್ಲಿನ ಬೆಂಗಳೂರು-ದೊಡ್ಡಬಳ್ಳಾಪುರ ಮುಖ್ಯ ರಸ್ತೆಯಲ್ಲಿರುವ ಟಾಫೆ ಟ್ರ್ಯಾಕ್ಟರ್ ಉತ್ಪಾದನಾ ಕಂಪನಿಯ ಟೈರ್ ಗೋದಾಮಿನಲ್ಲಿ ನಲ್ಲಿ ಗುರುವಾರ ನಸುಕಿನಜಾವ ಅಗ್ನಿಅವಘಡ ಸಂಭವಿಸಿದ್ದು, ಲಕ್ಷಾಂತರ ಮೌಲ್ಯದ ಟ್ರ್ಯಾಕ್ಟರ್ ಟೈರ್ಗಳು ಬೆಂಕಿಗೆ ಆಹುತಿಯಾಗಿವೆ.
ಟೈರ್ ಗೊದಾಮಿನಲ್ಲಿ ಉಂಟಾದ ಅಗ್ನಿ ಅವಘಡದಲ್ಲಿ ಲಕ್ಷಾಂತರ ಮೌಲ್ಯದ ಟ್ರಾಕ್ಟರ್ ಟೈರ್ಗಳು ಸುಟ್ಟು ಭಸ್ಮವಾಗಿವೆ. ಘಟನೆಗೆ ನಿರ್ದಿಷ್ಟ ಕಾರಣ ತಿಳಿದುಬಂದಿಲ್ಲ. ಘಟನೆ ಸಂಭವಿಸಿದ ತಕ್ಷ ಣ ಎಚ್ಚೆತ್ತ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು,ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ನಡೆಸಿದರು. ಸುಮಾರು 2 ಗಂಟೆಗಳ ಕಾಲ ಮೂರು ಅಗ್ನಿನಂದಕ ವಾಹನಗಳೊಂದಿಗೆ ನಿರಂತರ ಕಾರ್ಯಾಚರಣೆ ನಡೆಸಿದ ಬಳಿಕ ಬೆಂಕಿ ಕೆನ್ನಾಲಗೆಯನ್ನು ನಿಯಂತ್ರಿಸಲು ಸಫಲರಾದರು.
ಬಂಕ್ ಸಮೀಪವೇ ಅವಘಡ: ಗೋದಾಮಿನ ಸಮೀಪವೇ ಪೆಟ್ರೋಲ್ ಬಂಕ್, ಜನ ವಸತಿ ಹಾಗೂ ಕೈಗಾರಿಕಾ ಪ್ರದೇಶವಿದ್ದು,ಕæಲಕಾಲ ಆತಂಕ ಸೃಷ್ಠಿಯಾಗಿತ್ತು. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ನೂರಾರು ಟೈರ್ಗಳು ಅಗ್ನಿಗೆ ಆಹುತಿಯಾದ ಹಿನ್ನಲೆ ಹೊತ್ತಿ ಉರಿಯುತ್ತಿದ್ದ ಬೆಂಕಿಜ್ವಾಲೆ ಆಕಾಶದೆತ್ತರಕ್ಕೆ ಆವರಿಸಿತ್ತು.
1 ಕಿಮೀ ಸುತ್ತವರಿದ ದಟ್ಟ ಹೊಗೆ: ದಟ್ಟ ಹೊಗೆ ಹಾಗೂ ಟೈರ್ ಸುಟ್ಟ ವಾಸನೆ ಸುತ್ತ 1 ಕಿ.ಮೀ ಪ್ರದೇಶದಲ್ಲಿ ಹರಡಿದ್ದ ಪರಿಣಾಮ ಕೆಲಕಾಲ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿತ್ತು. ಬೆಂಕಿ ಹೊತ್ತಿಕೊಂಡ ಪ್ರದೇಶದ ಸಮೀಪದಲ್ಲೆ ಪೆಟ್ರೋಲ್ ಬಂಕ್ ಹಾಗೂ ಟಫೆ ಕಂಪನಿಯ ಮಾರಟಕ್ಕೆ ಸಿದ್ದವಾಗಿರುವ ಸಾವಿರಾರು ಟ್ರ್ಯಾಕ್ಟರ್ ಗಳು ಪಕ್ಕದಲ್ಲಿವೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮ ದಳದ ಸಿಬ್ಬಂದಿ ತುರ್ತು ಕ್ರಮ ಕೈಗೊಂಡು ಬೆಂಕಿಯ ಜ್ವಾಲೆಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆ ನಡೆದ ಸುತ್ತಮುತ್ತಲ ಪ್ರದೇಶದಲ್ಲಿ ಪ್ರಾಣಾಪಾಯದ ಭೀತಿ ಸೃಷ್ಟಿಯಾದರೂ ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲವೆಂದು ಪೊಲೀಸರು ತಿಳಿಸಿದ್ದು ಅಚ್ಚರಿಮೂಡಿಸಿದೆ.
ದೊಡ್ಡಬಳ್ಳಾಪುರ: ಇಲ್ಲಿನ ಬೆಂಗಳೂರು-ದೊಡ್ಡಬಳ್ಳಾಪುರ ಮುಖ್ಯ ರಸ್ತೆಯಲ್ಲಿರುವ ಟಾಫೆ ಟ್ರ್ಯಾಕ್ಟರ್ ಉತ್ಪಾದನಾ ಕಂಪನಿಯ ಟೈರ್ ಗೋದಾಮಿನಲ್ಲಿ ನಲ್ಲಿ ಗುರುವಾರ ನಸುಕಿನಜಾವ ಅಗ್ನಿಅವಘಡ ಸಂಭವಿಸಿದ್ದು, ಲಕ್ಷಾಂತರ ಮೌಲ್ಯದ ಟ್ರ್ಯಾಕ್ಟರ್ ಟೈರ್ಗಳು ಬೆಂಕಿಗೆ ಆಹುತಿಯಾಗಿವೆ.
ಟೈರ್ ಗೊದಾಮಿನಲ್ಲಿ ಉಂಟಾದ ಅಗ್ನಿ ಅವಘಡದಲ್ಲಿ ಲಕ್ಷಾಂತರ ಮೌಲ್ಯದ ಟ್ರಾಕ್ಟರ್ ಟೈರ್ಗಳು ಸುಟ್ಟು ಭಸ್ಮವಾಗಿವೆ. ಘಟನೆಗೆ ನಿರ್ದಿಷ್ಟ ಕಾರಣ ತಿಳಿದುಬಂದಿಲ್ಲ. ಘಟನೆ ಸಂಭವಿಸಿದ ತಕ್ಷ ಣ ಎಚ್ಚೆತ್ತ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು,ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ನಡೆಸಿದರು. ಸುಮಾರು 2 ಗಂಟೆಗಳ ಕಾಲ ಮೂರು ಅಗ್ನಿನಂದಕ ವಾಹನಗಳೊಂದಿಗೆ ನಿರಂತರ ಕಾರ್ಯಾಚರಣೆ ನಡೆಸಿದ ಬಳಿಕ ಬೆಂಕಿ ಕೆನ್ನಾಲಗೆಯನ್ನು ನಿಯಂತ್ರಿಸಲು ಸಫಲರಾದರು.
ಬಂಕ್ ಸಮೀಪವೇ ಅವಘಡ: ಗೋದಾಮಿನ ಸಮೀಪವೇ ಪೆಟ್ರೋಲ್ ಬಂಕ್, ಜನ ವಸತಿ ಹಾಗೂ ಕೈಗಾರಿಕಾ ಪ್ರದೇಶವಿದ್ದು,ಕæಲಕಾಲ ಆತಂಕ ಸೃಷ್ಠಿಯಾಗಿತ್ತು. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ನೂರಾರು ಟೈರ್ಗಳು ಅಗ್ನಿಗೆ ಆಹುತಿಯಾದ ಹಿನ್ನಲೆ ಹೊತ್ತಿ ಉರಿಯುತ್ತಿದ್ದ ಬೆಂಕಿಜ್ವಾಲೆ ಆಕಾಶದೆತ್ತರಕ್ಕೆ ಆವರಿಸಿತ್ತು.
1 ಕಿಮೀ ಸುತ್ತವರಿದ ದಟ್ಟ ಹೊಗೆ: ದಟ್ಟ ಹೊಗೆ ಹಾಗೂ ಟೈರ್ ಸುಟ್ಟ ವಾಸನೆ ಸುತ್ತ 1 ಕಿ.ಮೀ ಪ್ರದೇಶದಲ್ಲಿ ಹರಡಿದ್ದ ಪರಿಣಾಮ ಕೆಲಕಾಲ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿತ್ತು. ಬೆಂಕಿ ಹೊತ್ತಿಕೊಂಡ ಪ್ರದೇಶದ ಸಮೀಪದಲ್ಲೆ ಪೆಟ್ರೋಲ್ ಬಂಕ್ ಹಾಗೂ ಟಫೆ ಕಂಪನಿಯ ಮಾರಟಕ್ಕೆ ಸಿದ್ದವಾಗಿರುವ ಸಾವಿರಾರು ಟ್ರ್ಯಾಕ್ಟರ್ ಗಳು ಪಕ್ಕದಲ್ಲಿವೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮ ದಳದ ಸಿಬ್ಬಂದಿ ತುರ್ತು ಕ್ರಮ ಕೈಗೊಂಡು ಬೆಂಕಿಯ ಜ್ವಾಲೆಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆ ನಡೆದ ಸುತ್ತಮುತ್ತಲ ಪ್ರದೇಶದಲ್ಲಿ ಪ್ರಾಣಾಪಾಯದ ಭೀತಿ ಸೃಷ್ಟಿಯಾದರೂ ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲವೆಂದು ಪೊಲೀಸರು ತಿಳಿಸಿದ್ದು ಅಚ್ಚರಿಮೂಡಿಸಿದೆ.