ಆ್ಯಪ್ನಗರ

ಹೊತ್ತುರಿಯಿತು ಕೆಎಸ್ಸಾರ್ಟಿಸಿ ಬಸ್‌, ಮಹಿಳೆ ಜೀವಂತ ದಹನ

ಅರಿಶಿನಕುಂಟೆ ಬಳಿ ಸೋಮವಾರ ರಾತ್ರಿ ಸುಮಾರು 12 ಗಂಟೆಗೆ ಕೆಎಸ್‌ಆರ್‌ಟಿಸಿ ಬಸ್‌ ಹೊತ್ತಿರಿದು ಒಬ್ಬ ಮಹಿಳೆ ಜೀವಂತ ದಹನಗೊಂಡಿದ್ದಾರೆ.

ವಿಕ ಸುದ್ದಿಲೋಕ 21 Feb 2017, 2:05 pm
ನೆಲಮಂಗಲ: ಬೆಂಗಳೂರು ಹೊರವಲಯದ ಮಾಕಳಿ -ನೆಲಮಂಗಲ ರಸ್ತೆಯ ಅರಿಶಿನಕುಂಟೆ ಬಳಿ ಸೋಮವಾರ ರಾತ್ರಿ ಸುಮಾರು 12 ಗಂಟೆಗೆ ಕೆಎಸ್‌ಆರ್‌ಟಿಸಿ ಬಸ್‌ ಹೊತ್ತುರಿದು ಒಬ್ಬ ಮಹಿಳೆ ಜೀವಂತ ದಹನಗೊಂಡಿದ್ದಾರೆ.
Vijaya Karnataka Web fire in ksrtc buswoman died
ಹೊತ್ತುರಿಯಿತು ಕೆಎಸ್ಸಾರ್ಟಿಸಿ ಬಸ್‌, ಮಹಿಳೆ ಜೀವಂತ ದಹನ


ದಾಬಸ್‌ಪೇಟೆಯಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ಬಸ್‌ ಸ್ಫೋಟಗೊಂಡು ಹೊತ್ತುರಿದಿದೆ. ಕ್ಷಣಾರ್ಧದಲ್ಲಿ 27 ಮಂದಿ ಅಪಾಯದಿಂದ ಪಾರಾಗಿದ್ದಾರೆ. ಕೂಡಲೇ ಪ್ರಯಾಣಿಕರನ್ನು ಹೊರಗೆ ಕರೆತರಲಾಯಿತಾದರೂ, ಒಳಗೆ ಸಿಲುಕಿಕೊಂಡ ಮಹಿಳೆಗೆ ಸುಟ್ಟ ಗಾಯಗಳಾಗಿದ್ದವು. ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಅವರು ಬದಕುಳಿಯಲಿಲ್ಲ ಎಂದು ಸಹ ಪ್ರಯಾಣಿಕರು ಹೇಳಿದ್ದಾರೆ.

ಮೃತರನ್ನು ಬೆಂಗಳೂರಿನ 8ನೇ ಮೈಲಿಯ ನಿವಾಸಿ ಭಾಗ್ಯಮ್ಮ(50) ಎಂದು ಗುರುತಿಸಲಾಗಿದೆ.

ಚಾಲಕನ ನಿರ್ಲಕ್ಷ್ಯವೇ ಅವಘಡಕ್ಕೆ ಕಾರಣ ಎನ್ನಲಾಗಿದೆ. ಆದರೂ, ನಿಖರ ಕಾರಣ ತಿಳಿದುಬಂದಿಲ್ಲ. ಘಟನೆಯಲ್ಲಿ 10 ಪ್ರಯಾಣಿಕರಿಗೆ ಸುಟ್ಟಗಾಯಗಳಾಗಿದ್ದು, ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಗಾಯಾಳುಗಳ ಪೈಕಿ ಮಮತಾ ( 35) ಸ್ಥಿತಿ ಗಂಭೀರವಾಗಿದೆ. ನೆಲಮಂಗಲ ಸಂಚಾರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ