31.48 ಲಕ್ಷ ರೂ, 7.15 ಗ್ರಾಂ ಚಿನ್ನ, 1.460 ಕೆ.ಜಿ ಬೆಳ್ಳಿ ಸಂಗ್ರಹ
ದೊಡ್ಡಬಳ್ಳಾಪುರ : ತಾಲೂಕಿನ ಪ್ರಸಿದ್ಧ ಘಾಟಿ ಕ್ಷೇತ್ರದ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ಶುಕ್ರವಾರ ಹುಂಡಿ ಹಣವನ್ನು ಎಣಿಕೆ ಮಾಡಲಾಗಿದ್ದು, ಈ ಬಾರಿಯೂ ವಿದೇಶಿ ನೋಟ್ಗಳು ಹಾಗೂ ನಿಷೇದಿತ ನೋಟ್ಗಳು ಸಿಕ್ಕಿರುವುದು ವಿಶೇಷವಾಗಿದೆ.
ಈ ಬಾರಿ ಹುಂಡಿಯಲ್ಲಿ ಒಟ್ಟು 31,48,636 ರೂ ಸಂಗ್ರಹಣೆಯಾಗಿದೆ. ಇದರೊಂದಿಗೆ 7.15 ಗ್ರಾಂ ಚಿನ್ನ, 1.460 ಕೆ.ಜಿ ಬೆಳ್ಳಿ ಹುಂಡಿಯಲ್ಲಿ ಸಿಕ್ಕಿದೆ. ಅಮೆರಿಕಾ, ಕೀನ್ಯಾ ದೇಶದ ವಿದೇಶಿ ನೋಟುಗಳು ದೊರೆತಿದೆ.
ಇದರೊಂದಿಗೆ ನಿಷೇಧಿತ 500 ರೂ ಮುಖಬೆಲೆಯ 8 ಹಾಗೂ 1000 ರೂ ಮುಖಬೆಲೆಯ 3 ನೋಟ್ಗಳನ್ನು ಭಕ್ತಾದಿಗಳು ಹುಂಡಿಯಲ್ಲಿ ಹಾಕುವ ಮೂಲಕ ಹರಕೆಯನ್ನು ತೀರಿಸಿದ್ದಾರೆ.
ಮೊದಲ ಶ್ರಾವಣ ಶನಿವಾರದಂದು ಘಾಟಿ ಕ್ಷೇತ್ರದಲ್ಲಿ ವಿಶೇಷ ಪೂಜಾ ಕಾರ್ಯಗಳು ನಡೆದದ್ದು ಬಿಟ್ಟರೆ ಭಣಕ್ತಾಧಿಗಳಲ್ಲಿ ಹೆಚ್ಚಳ ಕಂಡು ಬಂದಿಲ್ಲ. ಶ್ರಾವಣ ಮಾಸದಲ್ಲಿ ಕುಲದೇವರುಗಳು, ವೆಂಕಟೇಶ್ವರಸ್ವಾಮಿ, ಆಂಜನೇಯಸ್ವಾಮಿ ಸೇರಿದಂತೆ ಇತರೆ ದೇವಾಲಯಗಳಿಗೆ ಪ್ರಾಮುಖ್ಯತೆ ಹೆಚ್ಚಿರುವುದರಿಂದ ಘಾಟಿ ಕ್ಷೇತ್ರಕ್ಕೆ ನಿತ್ಯದಂತೆ ಭಕ್ತಾಧಿಗಳ ಕಂಡು ಬಂದರು.
ಪ್ರತಿ ತಿಂಗಳಿನಂತೆ ಹುಂಡಿಯನ್ನು ನಿಯಮಾನುಸಾರ ತೆಗೆದು ಎಣಿಸಲಾಗಿದ್ದು, ಮುಜರಾಯಿ ತಹಶೀಲ್ದಾರ್ ಕೆ.ಪದ್ಮ, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಎನ್.ಕೃಷ್ಣಪ್ಪ, ಪ್ರಧಾನ ಅರ್ಚಕ ಎನ್.ಶ್ರೀನಿವಾಸ್ ಸಮ್ಮುಖದಲ್ಲಿ ಹುಂಡಿ ಹಣ ಎಣಿಸಲಾಯಿತು. ಹುಂಡಿ ಹಣ ಎಣಿಕೆ¿ಲ್ಲಿ ದೇವಾಲಯಕ್ಕೆ ಬಂದಿದ್ದ ಭಕ್ತಾಧಿಗಳು ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ದೊಡ್ಡಬಳ್ಳಾಪುರ : ತಾಲೂಕಿನ ಪ್ರಸಿದ್ಧ ಘಾಟಿ ಕ್ಷೇತ್ರದ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ಶುಕ್ರವಾರ ಹುಂಡಿ ಹಣವನ್ನು ಎಣಿಕೆ ಮಾಡಲಾಗಿದ್ದು, ಈ ಬಾರಿಯೂ ವಿದೇಶಿ ನೋಟ್ಗಳು ಹಾಗೂ ನಿಷೇದಿತ ನೋಟ್ಗಳು ಸಿಕ್ಕಿರುವುದು ವಿಶೇಷವಾಗಿದೆ.
ಈ ಬಾರಿ ಹುಂಡಿಯಲ್ಲಿ ಒಟ್ಟು 31,48,636 ರೂ ಸಂಗ್ರಹಣೆಯಾಗಿದೆ. ಇದರೊಂದಿಗೆ 7.15 ಗ್ರಾಂ ಚಿನ್ನ, 1.460 ಕೆ.ಜಿ ಬೆಳ್ಳಿ ಹುಂಡಿಯಲ್ಲಿ ಸಿಕ್ಕಿದೆ. ಅಮೆರಿಕಾ, ಕೀನ್ಯಾ ದೇಶದ ವಿದೇಶಿ ನೋಟುಗಳು ದೊರೆತಿದೆ.
ಇದರೊಂದಿಗೆ ನಿಷೇಧಿತ 500 ರೂ ಮುಖಬೆಲೆಯ 8 ಹಾಗೂ 1000 ರೂ ಮುಖಬೆಲೆಯ 3 ನೋಟ್ಗಳನ್ನು ಭಕ್ತಾದಿಗಳು ಹುಂಡಿಯಲ್ಲಿ ಹಾಕುವ ಮೂಲಕ ಹರಕೆಯನ್ನು ತೀರಿಸಿದ್ದಾರೆ.
ಮೊದಲ ಶ್ರಾವಣ ಶನಿವಾರದಂದು ಘಾಟಿ ಕ್ಷೇತ್ರದಲ್ಲಿ ವಿಶೇಷ ಪೂಜಾ ಕಾರ್ಯಗಳು ನಡೆದದ್ದು ಬಿಟ್ಟರೆ ಭಣಕ್ತಾಧಿಗಳಲ್ಲಿ ಹೆಚ್ಚಳ ಕಂಡು ಬಂದಿಲ್ಲ. ಶ್ರಾವಣ ಮಾಸದಲ್ಲಿ ಕುಲದೇವರುಗಳು, ವೆಂಕಟೇಶ್ವರಸ್ವಾಮಿ, ಆಂಜನೇಯಸ್ವಾಮಿ ಸೇರಿದಂತೆ ಇತರೆ ದೇವಾಲಯಗಳಿಗೆ ಪ್ರಾಮುಖ್ಯತೆ ಹೆಚ್ಚಿರುವುದರಿಂದ ಘಾಟಿ ಕ್ಷೇತ್ರಕ್ಕೆ ನಿತ್ಯದಂತೆ ಭಕ್ತಾಧಿಗಳ ಕಂಡು ಬಂದರು.
ಪ್ರತಿ ತಿಂಗಳಿನಂತೆ ಹುಂಡಿಯನ್ನು ನಿಯಮಾನುಸಾರ ತೆಗೆದು ಎಣಿಸಲಾಗಿದ್ದು, ಮುಜರಾಯಿ ತಹಶೀಲ್ದಾರ್ ಕೆ.ಪದ್ಮ, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಎನ್.ಕೃಷ್ಣಪ್ಪ, ಪ್ರಧಾನ ಅರ್ಚಕ ಎನ್.ಶ್ರೀನಿವಾಸ್ ಸಮ್ಮುಖದಲ್ಲಿ ಹುಂಡಿ ಹಣ ಎಣಿಸಲಾಯಿತು. ಹುಂಡಿ ಹಣ ಎಣಿಕೆ¿ಲ್ಲಿ ದೇವಾಲಯಕ್ಕೆ ಬಂದಿದ್ದ ಭಕ್ತಾಧಿಗಳು ಪಾಲ್ಗೊಂಡಿದ್ದು ವಿಶೇಷವಾಗಿತ್ತು.