ಆ್ಯಪ್ನಗರ

ರೈತರ ಸಮಸ್ಯೆಗಳು ಸಭೆಗಳಿಂದ ಬಗೆಹರಿಯೋಲ್ಲ

ಮೂರು ವರ್ಷದ ಹಿಂದಿನ ಬೆಳೆ ವಿಮೆ ಇದುವರೆಗೂ ಪಾವತಿಯಾಗಿಲ್ಲ ಹಾಗೂ ಪಶುಸಂಗೋಪನÜ ಇಲಾಖೆಯ ಅನುದಾನಗಳು ಸರಿಯಾಗಿ ಬಿಡುಗಡೆಯಾಗುತ್ತಿಲ್ಲ .ರೈತರ ಸಮಸ್ಯೆಗಳು ಬಗೆಹರಿಸಲು ಸಭೆಗಳಿಂದ ಸಾಧ್ಯವಾಗುವುದಿಲ್ಲ ಎಂದು ಅಧಿಕಾರಿಗಳ ವಿರುದ್ಧ ರೈತರು ಅಕ್ರೋಶ ವ್ಯಕ್ತಪಡಿಸಿದರು.

Vijaya Karnataka Web 13 Jun 2019, 5:00 am
ಸಮಗ್ರ ಕೃಷಿ ಅಭಿಯಾನದ ಸಮಾರೋಪದಲ್ಲಿ ರೈತರ ಅಸಮಾಧಾನ
Vijaya Karnataka Web formers problem will not solve only meeting
ರೈತರ ಸಮಸ್ಯೆಗಳು ಸಭೆಗಳಿಂದ ಬಗೆಹರಿಯೋಲ್ಲ

ತ್ಯಾಮಗೊಂಡ್ಲು : ಮೂರು ವರ್ಷದ ಹಿಂದಿನ ಬೆಳೆ ವಿಮೆ ಇದುವರೆಗೂ ಪಾವತಿಯಾಗಿಲ್ಲ ಹಾಗೂ ಪಶುಸಂಗೋಪನÜ ಇಲಾಖೆಯ ಅನುದಾನಗಳು ಸರಿಯಾಗಿ ಬಿಡುಗಡೆಯಾಗುತ್ತಿಲ್ಲ .ರೈತರ ಸಮಸ್ಯೆಗಳು ಬಗೆಹರಿಸಲು ಸಭೆಗಳಿಂದ ಸಾಧ್ಯವಾಗುವುದಿಲ್ಲ ಎಂದು ಅಧಿಕಾರಿಗಳ ವಿರುದ್ಧ ರೈತರು ಅಕ್ರೋಶ ವ್ಯಕ್ತಪಡಿಸಿದರು.

ತ್ಯಾಮಗೊಂಡ್ಲು ಪಟ್ಟಣದ ರೈತ ಸಂಪರ್ಕ ಕೇಂದ್ರದ ಆವರಣದಲ್ಲಿ ಕೃಷಿ ಇಲಾಖೆ ಹಮ್ಮಿಕೊಂಡಿದ್ದ ಸಮಗ್ರ ಕೃಷಿ ಅಭಿಯಾನದ ಸಮಾರೋಪ ಕಾರ್ಯಕ್ರಮದಲ್ಲಿ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು.

ನೆಲಕಚ್ಚಿದ್ದ ರಾಗಿ, ಜೋಳ: ಹೋಬಳಿಯ ಹೊಟ್ಟಪ್ಪನಪಾಳ್ಯದ ರೈತ ನಟರಾಜು ಮಾತನಾಡಿ 2016-17 ನೇ ಬರಗಾಲದಲ್ಲಿ ಮಾಡಿಸಿದ್ದ ಬೆಳೆ ವಿಮೆ ಇದುವರೆಗೂ ಪಾವತಿಯಾಗಿಲ್ಲ ಅಧಿಕಾರಿಗಳನ್ನು ಕೇಳಿದರೆ ತಾಂತ್ರಿಕ ಸಮಸ್ಯೆ ಎಂದು ಹೇಳಿ ಜಾರಿಕೊಳ್ಳುತ್ತಿದ್ದಾರೆ ಬೆಂಗಳೂರಿನ ಕಚೇರಿಗೂ ಹೋಗಿ ಬಂದರೂ ಯಾವುದೇ ಪ್ರಯೋಜನವಾಗಿಲ/, 4 ಎಕರೆ ಜಮೀನಿನಲ್ಲಿ ರಾಗಿ ಮತ್ತು ಜೋಳ ಬಿತ್ತನೆ ಮಾಡಿದ ಬೆಳೆ ಸಂಪೂರ್ಣವಾಗಿ ನೆಲಕಚ್ಚಿತ್ತು ಸುಮಾರು 60000 ಸಾವಿರ ವಿಮೆ ಹಣ ಬಂದಿಲ್ಲ, ಅಧಿಕಾರಿಗಳು ಸ್ಪಂಧಿಸುತ್ತಿಲ್ಲ ಎಂದು ಆರೋಪ ಮಾಡಿದರು.

ಕಿಸಾನ್‌ ಸಂಘದ ನಾಗೇಶ್‌ ಮಾತನಾಡಿ ಸರ್ಕಾರ ಪಶುಸಂಗೋಪಾನ ಇಲಾಖೆಯ ಮೂಲಕ ರೈತರು ಸಾಕಿರುವ ಕುರಿ. ಹಸು. ಎಮ್ಮೆ ಅಕಾಲಿಕವಾಗಿ ಮರಣ ಹೊಂದಿದರೆ ಅನುದಾನ ನೀಡಲಾಗುತ್ತದೆ ಎಂದು ಯೋಜನೆಯನ್ನು ಜಾರಿಗೆ ತಂದರು ಅದರೆ ಇದುವರೆಗೂ ತಾಲೂಕಿನಲ್ಲಿ ಸತ್ತ ಒಂದು ಕುರಿಗೂ ಒಂದು ರೂಪಾಯಿ ಹಣ ಬಿಡುಗಡೆ ಮಾಡಿಲ್ಲ ಅಧಿಕಾರಿಗಳನ್ನು ಕೇಳಿದರೆ ಸರ್ಕಾರದಿಂದ ಅನುದಾನ ಬಂದಿಲ್ಲ ಎಂಬ ಉತ್ತರವನ್ನು ಕೊಡುತ್ತಾರೆ, ಸರ್ಕಾರ ತಾಲೂಕಿನ ಕೃಷಿ ಭೂಮಿಯನ್ನು ಕೈಗಾರಿಕ ಪ್ರದೇಶಗಳಿಗೆ ಒತ್ತುವರಿ ಮಾಡುವುದನ್ನು ನಿಲ್ಲಸಬೇಕು ಇಲ್ಲವಾದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದರು.

ಬೆಳೆವಿಮೆ ಶೇ.95ರಷ್ಟು ಪಾವತಿ: ಕೃಷಿ ಸಹಾಯಕ ನಿರ್ದೇಶಕಿ ಸುಶೀಲಮ್ಮ ಮಾತನಾಡಿ ನಮ್ಮ ತಾಲೂಕಿನಲ್ಲಿ 2016-17 ನೇ ಸಾಲಿನಲ್ಲಿ ಬರಗಾಲದಲ್ಲಿ ಮಾಡಿಸಿದ್ದ ಬೆಳೆವಿಮೆ ಶೇಕಡ 95 ರಷ್ಟು ಪಾವತಿಯಾಗಿದೆ, ತ್ಯಾಮಗೊಂಡ್ಲು ಹೋಬಳಿಯಲ್ಲಿ 13 ಲಕ್ಷ ರೂಪಾಯಿ ಬೆಳೆ ವಿಮೆ ಪಾವತಿಯಾಗಿದೆ, ತಾಂತ್ರಿಕ ಸಮಸ್ಯೆಯಿಂದ ನಾಲ್ಕು ಜನ ರೈತರಿಗೆ ಪಾವತಿಯಾಗಿಲ್ಲ ಅದನ್ನು ತಕ್ಷ ಣವೇ ಸರಿಪಡಿಸಲಾಗುತ್ತದೆ, ಅಭಿಯಾನ ಕಾರ್ಯಕ್ರಮಗಳಿಗೆ ರೈತರು ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿ ಇಲಾಖೆಯ ಅಧಿಕಾರಿಗಳು ನೀಡುವ ಮಾಹಿತಿಯನ್ನು ಪಡೆದು ಕೃಷಿಯಲ್ಲಿ ಆಧುನಿಕ ಉಪಕರಣಗಳನ್ನು ಬಳಸಿಕೊಳ್ಳಬೇಕು ಎಂದರು.

ಮನೆ ಬಾಗಿಲಿಗೆ ಬಂದು ಮಾಹಿತಿ ಕೊಡಿ:
ರೈತ ಮುಖಂಡ ಪಣಮದಲಿ ರಾಮಣ್ಣ ಮಾತನಾಡಿ ರೈತರಿಗೆ ಅಗತ್ಯವಿರುವ ಮಾಹಿತಿಯನ್ನು ರೈತರ ಮನೆ ಬಾಗಿಲಿಗೆ ಅಧಿಕಾರಿಗಳು ಭೆಟಿನೀಡಿ ಮಾಹಿತಿ ನೀಡಬೇಕು ಹಾಗೂ ವಿಮಾ ಯೋಜನೆಯ ಅನುಕೂಲವನ್ನು ಎಲ್ಲಾ ರೈತರು ಪಡೆದುಕೊಳ್ಳಬೇಕು, ಒಂದು ಕಡೆ ವೇದಿಕೆ ಹಾಕಿಕೊಂಡು ಕಾರ್ಯಕ್ರಮ ಮಾಡಿದಾಗ ರೈತರ ಸಂಖ್ಯೆ ಇಳಿಮುಖವಾಗುತ್ತದೆ, ಅವರು ದನಕರುಗಳ ಪೋಷಣೆ ಮತ್ತು ಕೃಷಿ ಚಟುವಟಿಕೆಗಳಿಂದ ಕಾರ್ಯಕ್ರಮಕ್ಕೆ ಬರಲು ಸಾದ್ಯವಾಗುವುದಿಲ್ಲ, ನಮ್ಮ ಗ್ರಾಮೀಣ ಭಾಗದ ರೈತರು ಹೆಚ್ಚು ಪುರತನ ಸಂಪ್ರದಾಯವನ್ನು ಅನುಸರಿಸದೇ ಉತ್ತಮ ಬಿತ್ತನೆ ಬೀಜ ಹಾಗೂ ಆಧುನಿಕ ಕೃಷಿ ಉಪರಣಗಳನ್ನು ಬಳಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ರೇಷ್ಮೆ, ಮೀನುಗಾರಿಕೆ, ಅರಣ್ಯ, ಕಂದಾಯ, ಪಶುಸಂಗೋಪನೆ, ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ರೈತರಿಗೆ ತಮ್ಮ ಇಲಾಖೆಯಿಂದ ಲಭ್ಯವಿರುವ ಯೋಜನೆಗಳ ಮಾಹಿತಿಯನ್ನು ನೀಡಿದರು.

ಕಾರ್ಯಕ್ರಮದಲ್ಲಿ ಉಪತಹಶಿಲ್ದಾರ್‌ ರಾಜೇಂದ್ರಕುಮಾರ್‌, ಎ.ಪಿ.ಎಂ.ಸಿ ಸದಸ್ಯ ನಾರಾಯಣಸ್ವಾಮಿ, ಮಾಜಿ ಗ್ರಾ.ಪಂ ಅಧ್ಯಕ್ಷ ಪುರುಷೋತ್ತಮ್‌, ಕೃಷಿ ಇಲಾಕೆಯ ಶಿವಕುಮಾರ್‌, ಪಾಟೀಲ್‌, ಕಿಸಾನ್‌ ಸಂಘದ ಅರುಣ್‌ಕುಮಾರ್‌, ಗ್ರಾ.ಪಂ ಸದಸ್ಯ ಶಾಂತಕುಮಾರ್‌, ಸಾವಯವ ಕೃಷಿಕ ಕೆರೆಕತ್ತಗನೂರು ಗಂಗಣ್ಣ, ಚನ್ನಪ್ಪ,. ಭೀಮರಾಜು ಸೇರಿದಂತೆ ಇಲಾಖೆಯ ಅಧಿಕಾರಿಗಳು ಮತ್ತು ರೈತರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ