ಆ್ಯಪ್ನಗರ

ರೈತ ಸಂಘದಿಂದ ಎಕ್ಸಿಸ್‌ ಬ್ಯಾಂಕ್‌ ಮುಂಭಾಗ ಪ್ರತಿಭಟನೆ

ಬೆಳಗಾವಿಯ ರೈತರನ್ನು ಬಂಧಿಸಲು ನ್ಯಾಯಾಲಯದಿಂದ ವಾರೆಂಟ್‌ ತೆಗೆದುಕೊಂಡಿರುವ ಎಕ್ಸಿಸ್‌ ಬ್ಯಾಂಕ್‌ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆಯ ತಾಲೂಕು ಘಟಕ ಇಲ್ಲಿನ ಡಿ.ಕ್ರಾಸ್‌ ರಸ್ತೆಯ ಎಕ್ಸಿಸ್‌ ಬ್ಯಾಂಕ್‌ಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದವು. ಪ್ರತಿಭಟನೆ ಸಂದರ್ಭದಲ್ಲಿ ಬ್ಯಾಂಕ್‌ ಗ್ರಾಹಕರು ಕೆಲ ಕಾಲ ಬ್ಯಾಂಕ್‌ ಹೊರಗಡೆ ಕಾಯುವ ಪರಿಸ್ಥಿತಿ ಏರ್ಪಟ್ಟಿತ್ತು.

Vijaya Karnataka 7 Nov 2018, 2:54 pm
ದೊಡ್ಡಬಳ್ಳಾಪುರ: ಬೆಳಗಾವಿಯ ರೈತರನ್ನು ಬಂಧಿಸಲು ನ್ಯಾಯಾಲಯದಿಂದ ವಾರೆಂಟ್‌ ತೆಗೆದುಕೊಂಡಿರುವ ಎಕ್ಸಿಸ್‌ ಬ್ಯಾಂಕ್‌ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆಯ ತಾಲೂಕು ಘಟಕ ಇಲ್ಲಿನ ಡಿ.ಕ್ರಾಸ್‌ ರಸ್ತೆಯ ಎಕ್ಸಿಸ್‌ ಬ್ಯಾಂಕ್‌ಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದವು. ಪ್ರತಿಭಟನೆ ಸಂದರ್ಭದಲ್ಲಿ ಬ್ಯಾಂಕ್‌ ಗ್ರಾಹಕರು ಕೆಲ ಕಾಲ ಬ್ಯಾಂಕ್‌ ಹೊರಗಡೆ ಕಾಯುವ ಪರಿಸ್ಥಿತಿ ಏರ್ಪಟ್ಟಿತ್ತು.
Vijaya Karnataka Web framers protest in front of axis bank
ರೈತ ಸಂಘದಿಂದ ಎಕ್ಸಿಸ್‌ ಬ್ಯಾಂಕ್‌ ಮುಂಭಾಗ ಪ್ರತಿಭಟನೆ


ರಾಜ್ಯಾದ್ಯಂತ ರೈತರ ಕೈ ಸಾಲಗಳು, ಲೇವಾದೇವಿದಾರರ ಬಳಿ ಸಾಲ ತೆಗೆದುಕೊಂಡಿದ್ದು, ಅವರ ಉಪಟಳ ತಡೆಯಲಾರದೆ ಆತ್ಮಹತ್ಯೆಗಳನ್ನು ಮಾಡಿಕೊಳ್ಳತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಸಮಸ್ಯೆಯಿಂದ ರೈತರು ಮುಕ್ತರಾಗುವವರೆಗೂ, ರೈತ ಮಹಿಳೆಯರದ್ದು ಸೇರಿದಂತೆ ಅಗತ್ಯದ ಮೇರೆಗೆ ಎಲ್ಲಾ ರೈತರ ಏಕ್ಸಿಸ್‌ ಬ್ಯಾಂಕ್‌ ಸೇರಿದಂತೆ ಖಾಸಗಿ ಬ್ಯಾಂಕ್‌ಗಳ ಸಾಲವನ್ನು ಮನ್ನಾ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಎಕ್ಸಿಸ್‌ ಬ್ಯಾಂಕ್‌ ಹಠಾವೊ: ರಾಜ್ಯದ ಒಬ್ಬ ರೈತರನ್ನು ಬಂಧಿಸಿದರೂ ಎಕ್ಸಿಸ್‌ ಬ್ಯಾಂಕ್‌ ಹಠಾವೋ ಚಳವಳಿಗೆ ಚಾಲನೆ ನೀಡುತ್ತೇವೆ. ರಾಜ್ಯದ ಪ್ರತಿ ಜಿಲ್ಲಾ ಮಟ್ಟದಲ್ಲಿ ಎಕ್ಸಿಸ್‌ ಕೇಂದ್ರ ಬ್ಯಾಂಕ್‌ಗೆ ಎಚ್ಚರಿಕೆ ನೀಡುವಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿದ್ದು, ಈ ಭಾಗವಾಗಿ ನಮ್ಮ ತಾಲೂಕು ಘಟಕ ಪ್ರತಿಭಟನೆ ನಡೆಸಿದೆ ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ನಾರಾಯಣಸ್ವಾಮಿ ತಿಳಿಸಿದರು.

ಮನವಿ: ಮನವಿ ಸ್ವೀಕರಿಸಿದ ಎಕ್ಸಿಸ್‌ ಬ್ಯಾಂಕ್‌ ವ್ಯವಸ್ಥಾಪಕ ಮನವಿಯನ್ನು ಕೇಂದ್ರ ಕಚೇರಿಗೆ ಕಳುಹಿಸಿಕೊಡುತ್ತೇವೆ. ನಮ್ಮ ದೊಡ್ಡಬಳ್ಳಾಪುರ ಶಾಖೆಯಲ್ಲಿ ಯಾವುದೇ ರೈತರ ಸಾಲ ಇಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಮಟ್ಟದ ರೈತ ಸಂಘದ ಮುಖಂಡರಾದ ನಾಗಸಂದ್ರ ಪ್ರಸನ್ನ, ವಕೀಲ ಸತೀಶ್‌, ತಾಲೂಕು ಪ್ರಧಾನ ಕಾರ್ಯದರ್ಶಿ ಆರ್‌.ಸತೀಶ್‌, ಉಪಾಧ್ಯಕ್ಷ ರವಿ, ಸಂಚಾಲಕರಾದ ಬೈರೇಗೌಡ, ಮರಿಯಣ್ಣ, ಮುನಿನಾರಾಯಣಪ್ಪ, ಉಮಾದೇವಿ, ವಾಸು, ವೆಂಕಟೇಶ್‌ ಸೇರಿದಂತೆ ಕಾರ್ಯಕರ್ತರು, ರೈತರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ