ಆ್ಯಪ್ನಗರ

ಲಾಕ್‌ಡೌನ್‌ ಎಫೆಕ್ಟ್‌: ಘಾಟಿ ಸುಬ್ರಹ್ಮಣ್ಯ ಹುಂಡಿ ಸಂಗ್ರಹದಲ್ಲಿ ಭಾರಿ ಇಳಿಕೆ, ವಿದೇಶಿ ಕರೆನ್ಸಿ, ಹಳೆ ನೋಟು ಪತ್ತೆ

ಪ್ರತೀ ತಿಂಗಳು 35 ರಿಂದ ಸರಿ ಸುಮಾರು ರೂ 50 ಲಕ್ಷದ ವರೆಗೆ ಹುಂಡಿಯಲ್ಲಿ ಸಂಗ್ರಹವಾಗುತ್ತಿತ್ತು. ಆದರೆ ಕೋವಿಡ್‌ 19 ಅಬ್ಬರಕ್ಕೆ ಲಾಕ್‌ಡೌನ್‌ ಆದ ಹಿನ್ನೆಲೆ ಸುಮಾರು ತಿಂಗಳಿಗೂ ಹೆಚ್ಚು ಕಾಲ ದೇವಾಲಯ ಮುಚ್ಚಿತ್ತು.

Vijaya Karnataka Web 30 Jun 2020, 10:05 am
ದೊಡ್ಡಬಳ್ಳಾಪುರ: ಪ್ರತಿ ಮಂಗಳವಾರ ಹಾಗೂ ಭಾನುವಾರ ದಕ್ಷಿಣ ಭಾರತದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶ್ರೀಸುಬ್ರಹ್ಮಣ್ಯ ಘಾಟಿ ಕ್ಷೇತ್ರದಲ್ಲಿ ಭಕ್ತ ಸಾಗರ ಸೇರುತ್ತಿತ್ತು. ಅತ್ಯಂತ ಐತಿಹ್ಯ ಹಾಗೂ ಭಾರಿ ಭಕ್ತರನ್ನು ಹೊಂದಿರುವ ಘಾಟಿ ಸುಬ್ರಹ್ಮಣ್ಯ ದೇವಾಲಯ ಈಗ ಲಾಕ್‌ಡೌನ್‌ ಎಫೆಕ್ಟ್‌ನಿಂದ ಭಾರಿ ನಷ್ಟಕ್ಕೆ ಒಳಗಾಗಿದೆ. ಈಗ ದೇವಾಲಯದ ಹುಂಡಿ ಮೂರು ತಿಂಗಳ ನಂತರ ಎಣಿಕೆ ನಡೆದಿದ್ದು, ಲಾಕ್‌ ಡೌನ್‌ ಎಫೆಕ್ಟ್ ನಿಂದಾಗಿ ಮೊದಲ ಬಾರಿಗೆ ಭಾರಿ ಇಳಿಕೆ ಕಂಡಿದೆ.
Vijaya Karnataka Web ಘಾಟಿ ಸುಬ್ರಹ್ಮಣ್ಯ
ಘಾಟಿ ಸುಬ್ರಹ್ಮಣ್ಯ


ಎಸ್‌ಎಸ್‌ ಘಾಟಿ ಕ್ಷೇತ್ರದ ಹುಂಡಿಯಲ್ಲಿ ಕೇವಲ 24.01 ಲಕ್ಷ ರೂಪಾಯಿ ಸಂಗ್ರಹವಾಗಿದೆ.

ಪ್ರತೀ ತಿಂಗಳು 35 ರಿಂದ ಸರಿ ಸುಮಾರು ರೂ 50 ಲಕ್ಷದ ವರೆಗೆ ಹುಂಡಿಯಲ್ಲಿ ಸಂಗ್ರಹವಾಗುತ್ತಿತ್ತು. ಆದರೆ ಕೋವಿಡ್‌ 19 ಅಬ್ಬರಕ್ಕೆ ಲಾಕ್‌ಡೌನ್‌ ಆದ ಹಿನ್ನೆಲೆ ಸುಮಾರು ತಿಂಗಳಿಗೂ ಹೆಚ್ಚು ಕಾಲ ದೇವಾಲಯ ಮುಚ್ಚಿತ್ತು. ನಂತರ ಲಾಕ್‌ ಡೌನ್‌ ಸಡಿಲಿಕೆ ಹಿನ್ನೆಲೆ ದೇವಾಲಯ ತೆರೆದಿತ್ತು. ಆದ್ದರಿಂದ ಹುಂಡಿ ಹಣದಲ್ಲಿ ಮೊದಲ ಭಾರಿಗೆ ಭಾರಿ ಇಳಿಕೆ ಆಗಿದೆ. ಲಾಕ್‌ಡೌನ್‌ ನಡುವೆಯೂ 24 ಲಕ್ಷ ರೂ. ಸಂಗ್ರಹವಾಗಿರುವುದು ಕ್ಷೇತ್ರದ ಮಹಿಮೆಗೆ ಹಿಡಿದ ಕನ್ನಡಿಯಾಗಿದೆ.

62 ಸಾವಿರ ಮೌಲ್ಯದ ಚಿನ್ನಾಭರಣ

ಪ್ರತೀ ತಿಂಗಳ ಹುಂಡಿ ಎಣಿಕೆಯಲ್ಲೂ ವಿದೇಶಿ ಕರೆನ್ಸಿ ಮತ್ತು ಅಮಾನ್ಯಗೊಂಡಿರುವ ಇಂಡಿಯನ್‌ ಕರೆನ್ಸಿ ದೊರಕುತ್ತಿರುವುದು ಸಾಮಾನ್ಯವಾಗಿತ್ತು. ತಮ್ಮ ಗಳಿಕೆಯ ಒಂದಷ್ಟು ಹಣವನ್ನು ಸಮರ್ಪಣೆ ಮಾಡುವ ಸಂಪ್ರದಾಯವನ್ನು ಭಕ್ತರು ಇಂದಿಗೂ ಪಾಲಿಸಿಕೊಂಡು ಬಂದಿದ್ದಾರೆ. ನೋಟು ಅಮಾನ್ಯಗೊಂಡು ವರ್ಷಗಳೇ ಕಳೆದಿದ್ದರೂ ಹಳೆ ನೋಟುಗಳು ಹುಂಡಿಗೆ ಬಿದ್ದಿವೆ. ಹುಂಡಿಯಲ್ಲಿ ಪ್ರತೀ ತಿಂಗಳಂತೆ ಈ ಬಾರಿಯೂ ಚಿನ್ನ, ಬೆಳ್ಳಿ ಸಂಗ್ರಹವಾಗಿದೆ.

ವಿದೇಶಿ ಕರೆನ್ಸಿ

ಕೆನಡಾ ಕರೆನ್ಸಿ- ಡಾಲರ್‌ನ 1 ನೋಟು, 50 ಡಾಲರ್‌ನ 8 ನೋಟು, ಸಿಂಗಾಪುರದ 1 ಡಾಲರ್‌ನ 1 ನೋಟು, ರೂ 500 ಮುಖ ಬೆಲೆಯ ಹಳೆಯ ಮೂರು ನೋಟು ಸಿಕ್ಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ