ಅನಧಿಕೃತ ಚೀಟಿ ವ್ಯವಹಾರಕ್ಕೆ ಗೂಂಡಾ ಕಾಯ್ದೆ ಹಾಕಿ
ನÜಗರದ ಚಂದ್ರಶೇಖರಪುರದ ಕಿರಣ್ಕುಮಾರ್ ಮತ್ತು ಕುಟುಂಬದವರು ಯಾವುದೇ ಪರವಾನಿಗೆ ಪಡೆಯದೆ ಕಳೆದ 10 ವರ್ಷಗಳಿಂದ ಚೀಟಿ ವ್ಯವಹಾರ ನಡೆಸುತ್ತಿದ್ದು, ಚೀಟಿದಾರರ ಸುಮಾರು ಕೋಟ್ಯಾಂತರ ರೂಪಾಯಿಗಳನ್ನು ವಂಚಿಸಿ ಪರಾರಿಯಾಗಿದ್ದಾರೆ. ಈ ಕುರಿತು ಕೂಡಲೆ ಸಂಬಂಧಪಟ್ಟ ಅಧಿಕಾರಿಗಳು ಗೂಂಡಾ ಕಾಯ್ದೆಯಡಿ ಬಂಧಿಸಿ ವಂಚನೆಗೊಳಗಾದ ಚೀಟಿದಾರರಿಗೆ ನ್ಯಾಯ ಕೋಡಿಸಬೇಕು ಎಂದು ಪ್ರಜಾ ವಿಮಾಚನಾ ಚಳುವಳಿ ಸ್ವಾಭಿಮಾನಿ ರಾಜ್ಯಾಧ್ಯಕ್ಷ ಮುನಿಆಂಜಿನಪ್ಪ ಒತ್ತಾಯಿಸಿದರು.
Vijaya Karnataka 2 May 2019, 5:00 am
ವಿಕ ಸುದ್ದಿಲೋಕ ದೊಡ್ಡಬಳ್ಳಾಪುರ
ನÜಗರದ ಚಂದ್ರಶೇಖರಪುರದ ಕಿರಣ್ಕುಮಾರ್ ಮತ್ತು ಕುಟುಂಬದವರು ಯಾವುದೇ ಪರವಾನಿಗೆ ಪಡೆಯದೆ ಕಳೆದ 10 ವರ್ಷಗಳಿಂದ ಚೀಟಿ ವ್ಯವಹಾರ ನಡೆಸುತ್ತಿದ್ದು, ಚೀಟಿದಾರರ ಸುಮಾರು ಕೋಟ್ಯಾಂತರ ರೂಪಾಯಿಗಳನ್ನು ವಂಚಿಸಿ ಪರಾರಿಯಾಗಿದ್ದಾರೆ. ಈ ಕುರಿತು ಕೂಡಲೆ ಸಂಬಂಧಪಟ್ಟ ಅಧಿಕಾರಿಗಳು ಗೂಂಡಾ ಕಾಯ್ದೆಯಡಿ ಬಂಧಿಸಿ ವಂಚನೆಗೊಳಗಾದ ಚೀಟಿದಾರರಿಗೆ ನ್ಯಾಯ ಕೋಡಿಸಬೇಕು ಎಂದು ಪ್ರಜಾ ವಿಮಾಚನಾ ಚಳುವಳಿ ಸ್ವಾಭಿಮಾನಿ ರಾಜ್ಯಾಧ್ಯಕ್ಷ ಮುನಿಆಂಜಿನಪ್ಪ ಒತ್ತಾಯಿಸಿದರು.
ಅವರು ಚೀಟಿ ವ್ಯವಹಾರದಲ್ಲಿ ಕೋಟ್ಯಾಂತರ ಹಣವನ್ನು ವಂಚಿಸಿರುವವರ ವಿರುದ್ದ ಗೂಂಡಾ ಕಾಯ್ದೆ ಅಡಿಯಲ್ಲಿ ಬಂಧಿಸುವಂತೆ ಒತ್ತಾಯಿಸಿ ವಿಮೋಚನಾ ಚಳುವಳಿ ಸ್ವಾಭಿಮಾನಿ ನಗರ ಶಾಖೆ ವತಿಯಿಂದ ಇಲ್ಲಿನ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಪ ವಿಭಾಗಾಧಿಕಾರಿ ಕಚೇರಿ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಮಾತನಾಡುತ್ತಿದ್ದರು.
ಮಧ್ಯಮ ವರ್ಗ ಸೇರಿದಂತೆ ಬಡವರು, ಶ್ರಮಿಕ ವರ್ಗ ಚೀಟಿ ವ್ಯವಹಾರದಲ್ಲಿ ತಮ್ಮ ಮಕ್ಕಳ ಶೈಕ್ಷ ಣಿಕ ವೆಚ್ಚ, ಮದುವೆ ಸೇರಿದಂತೆ ಗೃಹ ನಿರ್ಮಾಣ ಹೀಗೆ ಹತ್ತು ಹಲವಾರು ಉದ್ದೇಶಗಳಿಗೆ ಹಣವನ್ನು ಚೀಟಿ ವ್ಯವಹಾರದಲ್ಲಿ ಹೂಡಿಕೆ ಮಾಡುತ್ತಾ ಬಂದಿದ್ದಾರೆ. ಆದರೆ ಅನಧಿಕೃತವಾಗಿ ಚೀಟಿ ನಡೆಸುತ್ತಿರುವ ಕಿರಣ್ಕುಮಾರ್, ರಾಧಾಕೃಷ್ಣ, ಬಾಬು, ವಿಶ್ವನಾಥ ಸೇರಿದಂತೆ ಹಲವಾರು ಮಂದಿ ವಂಚಕರು ಚೀಟಿ ಹಣವನ್ನು ವಂಚಿಸಿ ಪರಾರಿಯಾಗಿದ್ದಾರೆ. ಪರಿಣಾಮ ಮೋಸಹೋದ ಚೀಟಿದಾರರು ಅತ್ತ ಕಾನೂನು ಹೋರಾಟವೂ ಮಾಡಲಾಗುತ್ತಿಲ್ಲ, ಇತ್ತ ಚೀಟಿ ವಂಚಕರಲ್ಲಿಯೂ ಹಣ ಪಡೆಯಲಾಗದೆ ಕಂಗಾಲಾಗಿದ್ದಾರೆ. ಇದರಿಂದ ಇವರು ಬದುಕು ಬೀದಿಗೆ ಬಿದ್ದಿದೆ. ಹೀಗಾಗಿ ಕಾನೂನು ಬಾಹಿರವಾಗಿ ಚೀಟಿ ನಡೆಸಿ ವಂಚನೆ ಮಾಡಿರಿರುವವ ರ ವಿರುದ್ಧ ಆರ್ಥಿಕ ಅಪರಾಧದ ಅಡಿ ಬಂಧಿಸಿ ಸಂತ್ರಸ್ಥರಿಗೆ ನ್ಯಾಯ ನೀಡಬೇಕು ಎಂದು ಒತ್ತಾಯಿಸಿದರು.
ಈ ಕುರಿತು ಕಳೆದ ತಿಂಗಳಷ್ಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ದಾಖಲು ಮಾಡಿದ್ದೇವೆ. ನೆಪ ಮಾತ್ರಕ್ಕೆ ನಗರ ಪೊಲೀಸ್ ಠಾಣೆ ಅಧಿಕಾರಿ ಎಫ್ಐಆರ್ ದಾಖಲಿಸಿದ್ದರಾದರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಆರೋಪಿಸಿದರು. ತಾಲೂಕು ಕಚೇರಿ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ತೆರಳಿದ ಪ್ರತಿಭಟನಾಕಾರರು ಎಸಿ ಮಂಜುನಾಥ್ ಅವರಿಗೆ ಮನವಿ ಪತ್ರ ನೀಡಿದರು.
ಈ ಸಂದರ್ಭದಲ್ಲಿ ಪಿವಿಸಿ ಸ್ವಾಭಿಮಾನಿ ಬೆಂ.ಗ್ರಾ.ಜಿಲ್ಲಾಧ್ಯಕ್ಷ ಹನುಮಣ್ಣ ಗೂಳ್ಯ, ಬೆಂಗಳೂರು ನಗರಾಧ್ಯಕ್ಷ ಆಯೂಭ್ಖಾನ್, ತಾಲೂಕು ಅಧ್ಯಕ್ಷ ಮದ್ದೂರಪ್ಪ, ನಗರಾಧ್ಯಕ್ ಎಚ್.ಮಂಜುನಾಥ್, ಬೆಂ.ಗ್ರಾ.ಜಿಲ್ಲಾ ಉಪಾರ್ಧಯಕ್ಷ ಕೊನಘಟ್ಟ ಬೀರಪ್ಪ, ಯಲಹಂಕ ತಾಲೂಕ ಅಧ್ಯಕ್ಷ ಕಾಂತರಾಜು, ದೇವನಹಳ್ಳಿ ತಾಲೂಕು ಅಧ್ಯಕ್ಷ ಸೋಲೂರು ನಾಗರಾಜ್, ಬೆಂಗಳೂರು ಸಂಘಟನಾ ಕಾರ್ಯದರ್ಶಿ ಚನ್ನಮರಿಯಪ್ಪ, ಮಹಿಳಾ ಮಹಿಳಾ ಘಟಕದ ಅಧ್ಯಕ್ಷೆ ಹಮಾಮ್, ಬೆಂ.ಗ್ರಾ.ಜಿಲ್ಲಾ ಉಪಾಧ್ಯಕ್ಷೆ ಲಕ್ಷ ್ಮಮ್ಮ ಇದ್ದರು.
ನÜಗರದ ಚಂದ್ರಶೇಖರಪುರದ ಕಿರಣ್ಕುಮಾರ್ ಮತ್ತು ಕುಟುಂಬದವರು ಯಾವುದೇ ಪರವಾನಿಗೆ ಪಡೆಯದೆ ಕಳೆದ 10 ವರ್ಷಗಳಿಂದ ಚೀಟಿ ವ್ಯವಹಾರ ನಡೆಸುತ್ತಿದ್ದು, ಚೀಟಿದಾರರ ಸುಮಾರು ಕೋಟ್ಯಾಂತರ ರೂಪಾಯಿಗಳನ್ನು ವಂಚಿಸಿ ಪರಾರಿಯಾಗಿದ್ದಾರೆ. ಈ ಕುರಿತು ಕೂಡಲೆ ಸಂಬಂಧಪಟ್ಟ ಅಧಿಕಾರಿಗಳು ಗೂಂಡಾ ಕಾಯ್ದೆಯಡಿ ಬಂಧಿಸಿ ವಂಚನೆಗೊಳಗಾದ ಚೀಟಿದಾರರಿಗೆ ನ್ಯಾಯ ಕೋಡಿಸಬೇಕು ಎಂದು ಪ್ರಜಾ ವಿಮಾಚನಾ ಚಳುವಳಿ ಸ್ವಾಭಿಮಾನಿ ರಾಜ್ಯಾಧ್ಯಕ್ಷ ಮುನಿಆಂಜಿನಪ್ಪ ಒತ್ತಾಯಿಸಿದರು.
ಅವರು ಚೀಟಿ ವ್ಯವಹಾರದಲ್ಲಿ ಕೋಟ್ಯಾಂತರ ಹಣವನ್ನು ವಂಚಿಸಿರುವವರ ವಿರುದ್ದ ಗೂಂಡಾ ಕಾಯ್ದೆ ಅಡಿಯಲ್ಲಿ ಬಂಧಿಸುವಂತೆ ಒತ್ತಾಯಿಸಿ ವಿಮೋಚನಾ ಚಳುವಳಿ ಸ್ವಾಭಿಮಾನಿ ನಗರ ಶಾಖೆ ವತಿಯಿಂದ ಇಲ್ಲಿನ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಪ ವಿಭಾಗಾಧಿಕಾರಿ ಕಚೇರಿ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಮಾತನಾಡುತ್ತಿದ್ದರು.
ಮಧ್ಯಮ ವರ್ಗ ಸೇರಿದಂತೆ ಬಡವರು, ಶ್ರಮಿಕ ವರ್ಗ ಚೀಟಿ ವ್ಯವಹಾರದಲ್ಲಿ ತಮ್ಮ ಮಕ್ಕಳ ಶೈಕ್ಷ ಣಿಕ ವೆಚ್ಚ, ಮದುವೆ ಸೇರಿದಂತೆ ಗೃಹ ನಿರ್ಮಾಣ ಹೀಗೆ ಹತ್ತು ಹಲವಾರು ಉದ್ದೇಶಗಳಿಗೆ ಹಣವನ್ನು ಚೀಟಿ ವ್ಯವಹಾರದಲ್ಲಿ ಹೂಡಿಕೆ ಮಾಡುತ್ತಾ ಬಂದಿದ್ದಾರೆ. ಆದರೆ ಅನಧಿಕೃತವಾಗಿ ಚೀಟಿ ನಡೆಸುತ್ತಿರುವ ಕಿರಣ್ಕುಮಾರ್, ರಾಧಾಕೃಷ್ಣ, ಬಾಬು, ವಿಶ್ವನಾಥ ಸೇರಿದಂತೆ ಹಲವಾರು ಮಂದಿ ವಂಚಕರು ಚೀಟಿ ಹಣವನ್ನು ವಂಚಿಸಿ ಪರಾರಿಯಾಗಿದ್ದಾರೆ. ಪರಿಣಾಮ ಮೋಸಹೋದ ಚೀಟಿದಾರರು ಅತ್ತ ಕಾನೂನು ಹೋರಾಟವೂ ಮಾಡಲಾಗುತ್ತಿಲ್ಲ, ಇತ್ತ ಚೀಟಿ ವಂಚಕರಲ್ಲಿಯೂ ಹಣ ಪಡೆಯಲಾಗದೆ ಕಂಗಾಲಾಗಿದ್ದಾರೆ. ಇದರಿಂದ ಇವರು ಬದುಕು ಬೀದಿಗೆ ಬಿದ್ದಿದೆ. ಹೀಗಾಗಿ ಕಾನೂನು ಬಾಹಿರವಾಗಿ ಚೀಟಿ ನಡೆಸಿ ವಂಚನೆ ಮಾಡಿರಿರುವವ ರ ವಿರುದ್ಧ ಆರ್ಥಿಕ ಅಪರಾಧದ ಅಡಿ ಬಂಧಿಸಿ ಸಂತ್ರಸ್ಥರಿಗೆ ನ್ಯಾಯ ನೀಡಬೇಕು ಎಂದು ಒತ್ತಾಯಿಸಿದರು.
ಈ ಕುರಿತು ಕಳೆದ ತಿಂಗಳಷ್ಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ದಾಖಲು ಮಾಡಿದ್ದೇವೆ. ನೆಪ ಮಾತ್ರಕ್ಕೆ ನಗರ ಪೊಲೀಸ್ ಠಾಣೆ ಅಧಿಕಾರಿ ಎಫ್ಐಆರ್ ದಾಖಲಿಸಿದ್ದರಾದರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಆರೋಪಿಸಿದರು. ತಾಲೂಕು ಕಚೇರಿ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ತೆರಳಿದ ಪ್ರತಿಭಟನಾಕಾರರು ಎಸಿ ಮಂಜುನಾಥ್ ಅವರಿಗೆ ಮನವಿ ಪತ್ರ ನೀಡಿದರು.
ಈ ಸಂದರ್ಭದಲ್ಲಿ ಪಿವಿಸಿ ಸ್ವಾಭಿಮಾನಿ ಬೆಂ.ಗ್ರಾ.ಜಿಲ್ಲಾಧ್ಯಕ್ಷ ಹನುಮಣ್ಣ ಗೂಳ್ಯ, ಬೆಂಗಳೂರು ನಗರಾಧ್ಯಕ್ಷ ಆಯೂಭ್ಖಾನ್, ತಾಲೂಕು ಅಧ್ಯಕ್ಷ ಮದ್ದೂರಪ್ಪ, ನಗರಾಧ್ಯಕ್ ಎಚ್.ಮಂಜುನಾಥ್, ಬೆಂ.ಗ್ರಾ.ಜಿಲ್ಲಾ ಉಪಾರ್ಧಯಕ್ಷ ಕೊನಘಟ್ಟ ಬೀರಪ್ಪ, ಯಲಹಂಕ ತಾಲೂಕ ಅಧ್ಯಕ್ಷ ಕಾಂತರಾಜು, ದೇವನಹಳ್ಳಿ ತಾಲೂಕು ಅಧ್ಯಕ್ಷ ಸೋಲೂರು ನಾಗರಾಜ್, ಬೆಂಗಳೂರು ಸಂಘಟನಾ ಕಾರ್ಯದರ್ಶಿ ಚನ್ನಮರಿಯಪ್ಪ, ಮಹಿಳಾ ಮಹಿಳಾ ಘಟಕದ ಅಧ್ಯಕ್ಷೆ ಹಮಾಮ್, ಬೆಂ.ಗ್ರಾ.ಜಿಲ್ಲಾ ಉಪಾಧ್ಯಕ್ಷೆ ಲಕ್ಷ ್ಮಮ್ಮ ಇದ್ದರು.