ಆದರ್ಶ ಕೋಡಿ,ದೊಡ್ಡಬಳ್ಳಾಪುರ
ಕೊರೊನಾ 2ನೇ ಅಲೆಯಿಂದಾಗಿ ಲಸಿಕಾ ವಿತರಣೆ ತಡವಾದ ಪರಿಣಾಮವಾಗಿ ರಾಜ್ಯದಾದ್ಯಂತ ಕಾಲುಬಾಯಿ ರೋಗ ವ್ಯಾಪಿಸಿತ್ತು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತಾಲೂಕುಗಳಲ್ಲಿ ರೋಗದ ನಿವಾರಣೆಗೆ ಕಾಲುಬಾಯಿ ಲಸಿಕೆ ವಿತರಣೆ ಕಾರ್ಯ ಚುರುಕುಗೊಂಡಿತ್ತು. ಇದೀಗ ಲಸಿಕಾಭಿಯಾನ ಪ್ರಗತಿಯಲ್ಲಿದ್ದು ಜಿಲ್ಲೆಯಲ್ಲಿ ಶೇ .90ರಷ್ಟು ಲಸಿಕೆ ಪೂರ್ಣಗೊಂಡಿದೆ.ಜಿಲ್ಲೆಯಾದ್ಯಂತ ನ.8 ರಿಂದ ಒಂದು ತಿಂಗಳ ಕಾಲದಲ್ಲಿ 2 ಸುತ್ತಿನ. ಕಾಲುಬಾಯಿ ರೋಗ ಲಸಿಕೆ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ದೊರೆತಿದೆ. ಕಳೆದ ಬಾರಿ ಲಸಿಕೆ ವಿತರಣೆ ವೇಳೆಯಲ್ಲಿ ಕೊರೊನಾ ಪ್ರಭಾವ ಹೆಚ್ಚಾಗಿತ್ತು . ಇದರಿಂದ ಲಸಿಕಾ ವಿತರಣೆ ಸಾಧ್ಯವಾಗಲಿಲ್ಲ. ಇದೀಗ ಮನೆಮನೆಗೆ ತೆರಳಿ ಲಸಿಕೆ ನೀಡಲಾಗುತ್ತಿದ್ದು ಡಿ. 15ರೊಳಗೆ ಲಸಿಕಾ ವಿತರಣೆ ಕೊನೆ ಹಂತ ತಲುಪುವ ನಿರೀಕ್ಷೆಯಿದೆ.
1,50 ಸಾವಿರ ಲಸಿಕೆ ವಿತರಣೆ: ನ.8 ರಿಂದ ಜಿಲ್ಲೆಯಾದ್ಯಂತ ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ ಲಸಿಕೆ ವಿತರಣೆ ಆರಂಭವಾಗಿದೆ. ಜಿಲ್ಲೆಯ 4 ತಾಲೂಕುಗಳಲ್ಲಿ ತಿಂಗಳ ಅವಧಿಯಲ್ಲಿ ನಡೆಯುತ್ತಿರುವ ಅಭಿಯಾನದಲ್ಲಿ 1,82,000 ರಾಸುಗಳಿಗೆ ಲಸಿಕೆ ನೀಡಲು ಕ್ರಮ ವಹಿಸಲಾಗಿದೆ. ಈ ಪೈಕಿ 1,50ಸಾವಿರಕ್ಕೂ ಹೆಚ್ಚು ರಾಸುಗಳಿಗೆ ಲಸಿಕೆ ನೀಡಲಾಗಿದೆ. ಅಧಿಕಾರಿಗಳು,ಲಸಿಕೆದಾರರ ಒಳಗೊಂಡಂತೆ ತಂಡದ ಮೂಲಕ ಮೂರುವರೆ ತಿಂಗಳು ಮೇಲ್ಪಟ್ಟ ರಾಸುಗಳಿಗೆ ಲಸಿಕೆ ಹಂಚಿಕೆ ಬಹುತೇಕ ಮುಗಿಯುವ ಹಂತಕ್ಕೆ ತಲುಪಿದೆ.
1860 ಬ್ಲಾಕ್ ಗಳಲ್ಲಿಲಸಿಕೆ: ಕಾಲುಬಾಯಿ ರೋಗ ಲಸಿಕಾಭಿಯಾನ ಜಿಲ್ಲೆಯಲ್ಲಿ ಆರಂಭವಾಗಿ ಯಶಸ್ವಿಯಾಗುತ್ತಿದೆ.4 ತಾಲೂಕುಗಳಲ್ಲಿ ಲಸಿಕೆಯನ್ನು ವಿತರಿಸಲು 38 ತಂಡಗಳನ್ನು ರಚಿಸಲಾಗಿತ್ತು.66 ಮಂದಿ ತಂಡದಲ್ಲಿ ಮೇಲ್ವಿಚಾರಕರು ಇದ್ದು, 198 ಮಂದಿ ಲಸಿಕೆದಾರರು ಕಾರ್ಯ ನಿರ್ವಹಿಸಿದ್ದಾರೆ. ಜಿಲ್ಲೆಯಲ್ಲಿ ಲಸಿಕಾ ವಿತರಣೆಗಾಗಿ 1860 ಬ್ಲಾಕ್ ಗಳಾಗಿ ವಿಂಗಡಿಸಿ ಲಸಿಕೆ ಹಂಚಿಕೆ ನಡೆಯಿತು. ಜತೆಗೆ ಲಸಿಕೆ ನೀಡಿದ ನಂತರ ಪ್ರತಿ ರಾಸುಗಳ ವಿವರಗಳನ್ನು ರಾಸುಗಳ ಕಿವಿಯೋಲೆ ನಂಬರ್ ಗೆ ಆನ್ಲೆನ್ ಮೂಲಕ ಮಾಹಿತಿ ದಾಖಲಿಸಲಾಗಿದೆ. ಈ ಮೂಲಕ ಮಾಹಿತಿ ಸಂಗ್ರಹಿಸಿ ಎಲ್ಲಾರಾಸುಗಳಿಗೆ ಲಸಿಕೆಯನ್ನು ಸಂಪೂರ್ಣವಾಗಿ ಲಸಿಕೆಯನ್ನು ಪೂರ್ಣಗೊಳಿಸಲಾಗಿದೆ.
ಕಾಲುಬಾಯಿಗೆ ಬಲಿಯಾದ 12 ಕರುಗಳು: ಕಳೆದೆರಡು ತಿಂಗಳಿಂದ ಜಿಲ್ಲೆಯ ರಾಸುಗಳನ್ನು ಕಾಲುಬಾಯಿ ರೋಗ ವ್ಯಾಪಕವಾಗಿ ಕಾಡುತ್ತಿತ್ತು. ಲಸಿಕೆ ತಡವಾದ ಹಿನ್ನೆಲೆ ರೋಗ ಉಲ್ಬಣಗೊಂಡಿತ್ತು. ಜಿಲ್ಲೆಯ 71ಗ್ರಾಪಂಗಳಲ್ಲಿ ಕಾಲುಬಾಯಿ ರೋಗ 829 ಮಂದಿ ರಾಸುಗಳಲ್ಲಿ ಕಾಣಿಸಿಕೊಂಡಿತ್ತು. ಈ ಪೈಕಿ ಯಾವುದೇ ಹಸುಗಳಿಗೆ ಪ್ರಾಣಹಾನಿಯಾಗದಿದ್ದರೂ 12 ಕರುಗಳು ಮರಣಹೊಂದಿದ್ದವು. ನಂತರದಲ್ಲಿ ಇಲಾಖೆ ಹಾಗೂ ಪಶುವೈದ್ಯಾಧಿಕಾರಿಗಳು ಕ್ರಮವಹಿಸಿ ಲಸಿಕೆ ವಿತರಣೆ ಚುರುಕುಗೊಳಿಸಿದರು.
ಪ್ರಮುಖಾಂಶಗಳು
ರೈತರ ಸಾಥ್
ಕಾಲುಬಾಯಿ ರೋಗದ ಲಸಿಕೆ ತಡವಾದ ಹಿನ್ನೆಲೆ ಎಲ್ಲೆಡೆ ಕಾಲುಬಾಯಿ ವ್ಯಾಪಕವಾಗಿ ಹರಡಿತ್ತು. ಕಳೆದ ವರ್ಷಗಳಲ್ಲಿ ಲಸಿಕೆ ಬಗ್ಗೆ ಅಷ್ಟೇನು ಗಮನಹರಿಸದ ರೈತರು ಈ ಬಾರಿ ಎಚ್ಚರವಹಿಸಿ ಸ್ವಯಂ ಪ್ರೇರಿತರಾಗಿ ಲಸಿಕೆ ಹಾಕಿಸಲು ಮುಂದಾಗಿದ್ದರು .ಇದರಿಂದ ಜಿಲ್ಲೆಯಲ್ಲಿ ಕಾಲುಬಾಯಿ ರೋಗಕ್ಕೆ ಕಡಿವಾಣ ಹಾಕಲು ಸಾಧ್ಯವಾಯಿತು.
ರೋಗದ ಲಕ್ಷಣಗಳೇನು?
ಕಾಲುಬಾಯಿ ರೋಗದಿಂದ ರಾಸುಗಳಲ್ಲಿ ವಿಪರೀತ ಜ್ವರ ಇರುತ್ತದೆ. ಬಾಯಿ ಮತ್ತು ನಾಲಿಗೆಯ ಮೇಲೆ ಸಣ್ಣ ಗುಳ್ಳೆಗಳಾಗಿ ನಂತರ ಒಡೆದು ಹುಣ್ಣುಗಳಾಗುತ್ತವೆ.ಮೇವು ತಿನ್ನಲು ಆಗದೆ, ಬಾಯಿಯಿಂದ ಧಾರಾಕಾರವಾಗಿ ಜೊಲ್ಲುಸುರಿಯುತ್ತದೆ. ಕಾಲಿನಲ್ಲಿ ಗೊರಸುಗಳ ಮಧ್ಯೆ ಹುಣ್ಣುಗಳಾಗಿ, ನಡೆಯಲು ಕಷ್ಟವಾಗುತ್ತದೆ. ಹಾಲಿನ ಇಳುವರಿ ಕಡಿಮೆಯಾಗುತ್ತದೆ.ನಂತರ ಅವುಗಳ ಸಾಯುವ ಸಂಭವವಿದೆ.
ಜಿಲ್ಲೆಯಲ್ಲಿ ಕಾಲುಬಾಯಿ ಲಸಿಕೆ ವಿತರಣೆ ಶೇ.90ರಷ್ಟು ಪೂರ್ಣಗೊಂಡಿದೆ.ಲಸಿಕೆ ನೀಡುವ ಕೆಲಸಕ್ಕೆ ರೈತರು ಸಾಥ್ ನೀಡಿದ್ದರು. ಡಿ.15ರೊಳಗೆ ಲಸಿಕೆ ಪೂರ್ಣಗೊಳಿಸಲು ಕ್ರಮವಹಿಸಲಾಗಿದೆ.
-ಡಾ. ಜೆ.ಎಂ. ನಾಗರಾಜ | ಉಪನಿರ್ದೇಶಕ, ಪಶುಪಾಲನಾ ಮತ್ತು ಪಶುವೈದ್ಯ ಇಲಾಖೆ ಬೆ.ಗ್ರಾ
ಕೊರೊನಾ 2ನೇ ಅಲೆಯಿಂದಾಗಿ ಲಸಿಕಾ ವಿತರಣೆ ತಡವಾದ ಪರಿಣಾಮವಾಗಿ ರಾಜ್ಯದಾದ್ಯಂತ ಕಾಲುಬಾಯಿ ರೋಗ ವ್ಯಾಪಿಸಿತ್ತು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತಾಲೂಕುಗಳಲ್ಲಿ ರೋಗದ ನಿವಾರಣೆಗೆ ಕಾಲುಬಾಯಿ ಲಸಿಕೆ ವಿತರಣೆ ಕಾರ್ಯ ಚುರುಕುಗೊಂಡಿತ್ತು.
1,50 ಸಾವಿರ ಲಸಿಕೆ ವಿತರಣೆ: ನ.8 ರಿಂದ ಜಿಲ್ಲೆಯಾದ್ಯಂತ ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ ಲಸಿಕೆ ವಿತರಣೆ ಆರಂಭವಾಗಿದೆ. ಜಿಲ್ಲೆಯ 4 ತಾಲೂಕುಗಳಲ್ಲಿ ತಿಂಗಳ ಅವಧಿಯಲ್ಲಿ ನಡೆಯುತ್ತಿರುವ ಅಭಿಯಾನದಲ್ಲಿ 1,82,000 ರಾಸುಗಳಿಗೆ ಲಸಿಕೆ ನೀಡಲು ಕ್ರಮ ವಹಿಸಲಾಗಿದೆ. ಈ ಪೈಕಿ 1,50ಸಾವಿರಕ್ಕೂ ಹೆಚ್ಚು ರಾಸುಗಳಿಗೆ ಲಸಿಕೆ ನೀಡಲಾಗಿದೆ. ಅಧಿಕಾರಿಗಳು,ಲಸಿಕೆದಾರರ ಒಳಗೊಂಡಂತೆ ತಂಡದ ಮೂಲಕ ಮೂರುವರೆ ತಿಂಗಳು ಮೇಲ್ಪಟ್ಟ ರಾಸುಗಳಿಗೆ ಲಸಿಕೆ ಹಂಚಿಕೆ ಬಹುತೇಕ ಮುಗಿಯುವ ಹಂತಕ್ಕೆ ತಲುಪಿದೆ.
1860 ಬ್ಲಾಕ್ ಗಳಲ್ಲಿಲಸಿಕೆ: ಕಾಲುಬಾಯಿ ರೋಗ ಲಸಿಕಾಭಿಯಾನ ಜಿಲ್ಲೆಯಲ್ಲಿ ಆರಂಭವಾಗಿ ಯಶಸ್ವಿಯಾಗುತ್ತಿದೆ.4 ತಾಲೂಕುಗಳಲ್ಲಿ ಲಸಿಕೆಯನ್ನು ವಿತರಿಸಲು 38 ತಂಡಗಳನ್ನು ರಚಿಸಲಾಗಿತ್ತು.66 ಮಂದಿ ತಂಡದಲ್ಲಿ ಮೇಲ್ವಿಚಾರಕರು ಇದ್ದು, 198 ಮಂದಿ ಲಸಿಕೆದಾರರು ಕಾರ್ಯ ನಿರ್ವಹಿಸಿದ್ದಾರೆ. ಜಿಲ್ಲೆಯಲ್ಲಿ ಲಸಿಕಾ ವಿತರಣೆಗಾಗಿ 1860 ಬ್ಲಾಕ್ ಗಳಾಗಿ ವಿಂಗಡಿಸಿ ಲಸಿಕೆ ಹಂಚಿಕೆ ನಡೆಯಿತು. ಜತೆಗೆ ಲಸಿಕೆ ನೀಡಿದ ನಂತರ ಪ್ರತಿ ರಾಸುಗಳ ವಿವರಗಳನ್ನು ರಾಸುಗಳ ಕಿವಿಯೋಲೆ ನಂಬರ್ ಗೆ ಆನ್ಲೆನ್ ಮೂಲಕ ಮಾಹಿತಿ ದಾಖಲಿಸಲಾಗಿದೆ. ಈ ಮೂಲಕ ಮಾಹಿತಿ ಸಂಗ್ರಹಿಸಿ ಎಲ್ಲಾರಾಸುಗಳಿಗೆ ಲಸಿಕೆಯನ್ನು ಸಂಪೂರ್ಣವಾಗಿ ಲಸಿಕೆಯನ್ನು ಪೂರ್ಣಗೊಳಿಸಲಾಗಿದೆ.
ಕಾಲುಬಾಯಿಗೆ ಬಲಿಯಾದ 12 ಕರುಗಳು: ಕಳೆದೆರಡು ತಿಂಗಳಿಂದ ಜಿಲ್ಲೆಯ ರಾಸುಗಳನ್ನು ಕಾಲುಬಾಯಿ ರೋಗ ವ್ಯಾಪಕವಾಗಿ ಕಾಡುತ್ತಿತ್ತು. ಲಸಿಕೆ ತಡವಾದ ಹಿನ್ನೆಲೆ ರೋಗ ಉಲ್ಬಣಗೊಂಡಿತ್ತು. ಜಿಲ್ಲೆಯ 71ಗ್ರಾಪಂಗಳಲ್ಲಿ ಕಾಲುಬಾಯಿ ರೋಗ 829 ಮಂದಿ ರಾಸುಗಳಲ್ಲಿ ಕಾಣಿಸಿಕೊಂಡಿತ್ತು. ಈ ಪೈಕಿ ಯಾವುದೇ ಹಸುಗಳಿಗೆ ಪ್ರಾಣಹಾನಿಯಾಗದಿದ್ದರೂ 12 ಕರುಗಳು ಮರಣಹೊಂದಿದ್ದವು. ನಂತರದಲ್ಲಿ ಇಲಾಖೆ ಹಾಗೂ ಪಶುವೈದ್ಯಾಧಿಕಾರಿಗಳು ಕ್ರಮವಹಿಸಿ ಲಸಿಕೆ ವಿತರಣೆ ಚುರುಕುಗೊಳಿಸಿದರು.
ಪ್ರಮುಖಾಂಶಗಳು
- ಜಿಲ್ಲೆಯಲ್ಲಿ ಶೇ.90ರಷ್ಟು ಕಾಲುಬಾಯಿ ಲಸಿಕೆ ಪೂರ್ಣ
- ಇಲಾಖೆ ಹಾಗೂ ರೈತರು ಲಸಿಕೆಗೆ ಸಾಥ್
- ಡಿ.15ರೊಳಗೆ ಲಸಿಕೆ ಪೂರ್ಣಗೊಳಿಸಲು ಕ್ರಮ
- ಕಾಲುಬಾಯಿಗೆ 12 ಕರುಗಳು ಸಾವು
- ಜಿಲ್ಲೆಯಲ್ಲಿ ಕಾಲುಬಾಯಿ ರೋಗ ನಿಯಂತ್ರಣ
ರೈತರ ಸಾಥ್
ಕಾಲುಬಾಯಿ ರೋಗದ ಲಸಿಕೆ ತಡವಾದ ಹಿನ್ನೆಲೆ ಎಲ್ಲೆಡೆ ಕಾಲುಬಾಯಿ ವ್ಯಾಪಕವಾಗಿ ಹರಡಿತ್ತು. ಕಳೆದ ವರ್ಷಗಳಲ್ಲಿ ಲಸಿಕೆ ಬಗ್ಗೆ ಅಷ್ಟೇನು ಗಮನಹರಿಸದ ರೈತರು ಈ ಬಾರಿ ಎಚ್ಚರವಹಿಸಿ ಸ್ವಯಂ ಪ್ರೇರಿತರಾಗಿ ಲಸಿಕೆ ಹಾಕಿಸಲು ಮುಂದಾಗಿದ್ದರು .ಇದರಿಂದ ಜಿಲ್ಲೆಯಲ್ಲಿ ಕಾಲುಬಾಯಿ ರೋಗಕ್ಕೆ ಕಡಿವಾಣ ಹಾಕಲು ಸಾಧ್ಯವಾಯಿತು.
ರೋಗದ ಲಕ್ಷಣಗಳೇನು?
ಕಾಲುಬಾಯಿ ರೋಗದಿಂದ ರಾಸುಗಳಲ್ಲಿ ವಿಪರೀತ ಜ್ವರ ಇರುತ್ತದೆ. ಬಾಯಿ ಮತ್ತು ನಾಲಿಗೆಯ ಮೇಲೆ ಸಣ್ಣ ಗುಳ್ಳೆಗಳಾಗಿ ನಂತರ ಒಡೆದು ಹುಣ್ಣುಗಳಾಗುತ್ತವೆ.ಮೇವು ತಿನ್ನಲು ಆಗದೆ, ಬಾಯಿಯಿಂದ ಧಾರಾಕಾರವಾಗಿ ಜೊಲ್ಲುಸುರಿಯುತ್ತದೆ. ಕಾಲಿನಲ್ಲಿ ಗೊರಸುಗಳ ಮಧ್ಯೆ ಹುಣ್ಣುಗಳಾಗಿ, ನಡೆಯಲು ಕಷ್ಟವಾಗುತ್ತದೆ. ಹಾಲಿನ ಇಳುವರಿ ಕಡಿಮೆಯಾಗುತ್ತದೆ.ನಂತರ ಅವುಗಳ ಸಾಯುವ ಸಂಭವವಿದೆ.
ಜಿಲ್ಲೆಯಲ್ಲಿ ಕಾಲುಬಾಯಿ ಲಸಿಕೆ ವಿತರಣೆ ಶೇ.90ರಷ್ಟು ಪೂರ್ಣಗೊಂಡಿದೆ.ಲಸಿಕೆ ನೀಡುವ ಕೆಲಸಕ್ಕೆ ರೈತರು ಸಾಥ್ ನೀಡಿದ್ದರು. ಡಿ.15ರೊಳಗೆ ಲಸಿಕೆ ಪೂರ್ಣಗೊಳಿಸಲು ಕ್ರಮವಹಿಸಲಾಗಿದೆ.
-ಡಾ. ಜೆ.ಎಂ. ನಾಗರಾಜ | ಉಪನಿರ್ದೇಶಕ, ಪಶುಪಾಲನಾ ಮತ್ತು ಪಶುವೈದ್ಯ ಇಲಾಖೆ ಬೆ.ಗ್ರಾ