ಸ್ವಚ್ಛತೆ ಮರೆತ ಗ್ರಾಪಂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು
ವಿಶ್ವೇಶ್ವರಪುರ ಗ್ರಾಪಂ ವ್ಯಾಪ್ತಿಯ ಷರಾಪುರ ಗ್ರಾಮದಲ್ಲಿ ಕುಡಿಯುವ ನೀರು ಸರಬರಾಜು ಮಾಡುವ ವಾಟರ್ ಟ್ಯಾಂಕ್ ಕಲುಷಿತಗೊಂಡಿದ್ದು, ಅದೇ ನೀರನ್ನು ಕುಡಿಯುವ ಜನ ಸಾಂಕ್ರಾಮಿಕ ರೋಗ ಭೀತಿ ಎದುರಿಸುತ್ತಿದ್ದಾರೆ.
Vijaya Karnataka 21 Oct 2018, 3:27 pm
ನೆಲಮಂಗಲ: ವಿಶ್ವೇಶ್ವರಪುರ ಗ್ರಾಪಂ ವ್ಯಾಪ್ತಿಯ ಷರಾಪುರ ಗ್ರಾಮದಲ್ಲಿ ಕುಡಿಯುವ ನೀರು ಸರಬರಾಜು ಮಾಡುವ ವಾಟರ್ ಟ್ಯಾಂಕ್ ಕಲುಷಿತಗೊಂಡಿದ್ದು, ಅದೇ ನೀರನ್ನು ಕುಡಿಯುವ ಜನ ಸಾಂಕ್ರಾಮಿಕ ರೋಗ ಭೀತಿ ಎದುರಿಸುತ್ತಿದ್ದಾರೆ.
ತಾಲೂಕಿನ ಅಭಿವೃದ್ಧಿ ಹೊಂದಿರುವ ಪಂಚಾಯಿತಿಗಳ ಪೈಕಿ ಪ್ರಮುಖವಾದದ್ದು ವಿಶ್ವೇಶ್ವರಪು ಗ್ರಾಮ ಪಂಚಾಯಿತಿ. ರಾಷ್ಟ್ರೀಯ ಹೆದ್ದಾರಿ 4 ಹಾಗೂ ತಾಲೂಕಿಗೆ ಹೊಂದಿಕೊಂಡಿರುವ ಪಂಚಾಯಿತಿ ವ್ಯಾಪ್ತಿಯ ಬಹುತೇಕ ಗ್ರಾಮಗಳ ಸುತ್ತಮುತ್ತಲಿನಲ್ಲಿ ಖಾಸಗಿ ಬಡಾವಣೆಗಳು ಹಾಗೂ ಕಾರ್ಖಾನೆಗಳು ಎಗ್ಗಿಲ್ಲದೆ ತಲೆ ಎತ್ತಿವೆ. ಸಾಕಷ್ಟು ತೆರಿಗೆ ಕಂದಾಯ ಸಂದಾಯವಾಗಿ ಸಾಕಷ್ಟು ಅಭಿವೃದ್ಧಿಯನ್ನು ಕಂಡಿದೆ. ಆದರೆ ಇಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿ ನಿರ್ಲಕ್ಷ್ಯದಿಂದಾಗಿ ಷರಾಪುರಪಾಳ್ಯದ ಜನರು ಪಾಚಿ ಕಟ್ಟಿದ ಹಾಗೂ ಹುಳುಗಳಿರುವ ಮತ್ತು ಕಲುಷಿತವಾಗಿರುವ ನೀರನ್ನು ಪ್ರತಿನಿತ್ಯ ಕುಡಿಯಬೇಕಾದ ಪರಿಸ್ಥಿತಿ ಎದುರಾಗಿದೆ.
ಗ್ರಾಮೀಣ ಕಿರು ನೀರು ಸರಬರಾಜು ಯೋಜನೆಗಳಡಿ ಗ್ರಾಮಗಳಲ್ಲಿ ಅಲ್ಲಲ್ಲಿ ಸಣ್ಣ ನೀರಿನ ಘಟಕಗಳನ್ನು ನಿರ್ಮಾಣ ಮಾಡಲಾಗಿದೆ. ಅವುಗಳನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸಿ ಪ್ರತಿನಿತ್ಯ ಅಥವಾ ಅವಶ್ಯಕತೆಗನುಗುಣವಾಗಿ ಗ್ರಾಮದ ಜನರಿಗೆ ನೀರನ್ನು ಸರಬರಾಜು ಮಾಡುವುದು ಮತ್ತು ಗ್ರಾಮದ ಜನರಿಗೆ ನೀರಿನ ಸಮಸ್ಯೆ ತಲೆದೋರದಂತೆ ಕಾಳಜಿ ವಹಿಸುವುದು ಯೋಜನೆಯ ಉದ್ದೇಶ. ಆದರೆ ವಾಟರ್ಟ್ಯಾಂಕ್ಗಳನ್ನು ಸ್ವಚ್ಛ ಮಾಡಬೇಕಾದ ಸ್ಥಳೀಯ ವಾಟರ್ಮನ್ಗಳ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯದಿಂದ ಜನರು ಕಲುಷಿತ ನೀರನ್ನೇ ಉಪಯೋಗಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಷರಾಪುರಪಾಳ್ಯ ಮತ್ತು ಕೆಲ ಸುತ್ತಮುತ್ತಲ ಗ್ರಾಮಗಳ ವಾಟರ್ಮನ್ಗಳು ಪಂಚಾಯಿತಿ ಅಧಿಕಾರಗಳ ಬೆಂಬಲದಿಂದ ಕೇವಲ ಸಂಬಳಕ್ಕೆ ಮಾತ್ರ ಸೀಮಿತವಾಗಿ ಸ್ವಚ್ಛತೆ ಮಾಡುವುದನ್ನು ಮರೆತಿದ್ದಾರೆ. ಇದರ ಬಗ್ಗೆ ಗ್ರಾಮಸ್ಥರು ಮತ್ತು ಕೆಲ ಸದಸ್ಯರು ಪಂಚಾಯಿತಿ ಅಧಿಕಾರಿಗಳು ಮತ್ತು ಆಡಳಿತ ಮಂಡಳಿಯ ಗಮನಕ್ಕೆ ತಂದರೂ ಕಾಳಜಿಯನ್ನು ವಹಿಸದೆ ಸರಿ ಮಾಡಿಸೋಣ ಎಂಬ ಆಶ್ವಾಸನೆಯಲ್ಲಿಯೇ ಸುಮ್ಮನಾಗಿದ್ದಾರೆ. ಇದರಿಂದ ಗ್ರಾಮದ ಜನರು ದಿನನಿತ್ಯ ಅನಾರೋಗ್ಯದಿಂದ ಬಳಲುವಂತಾಗಿದೆ.
ವಾಟರ್ ಟ್ಯಾಂಕ್ಗಳಲ್ಲಿ ಕೆಂಪುಹುಳುಗಳು ಕಂಡುಬಂದ ಬಗ್ಗೆ ಅಧಿಕಾರಿಗಳಿಗೆ ಮತ್ತು ವಾಟರ್ಮನ್ ಗಮನಕ್ಕೆ ತಂದರೂ ಸ್ವಚ್ಛ ಮಾಡಲು ಮುಂದಾಗದ ಕಾರಣ ಜನರು ಪಾಲಿಗೆ ಬಂದದ್ದೇ ಪಂಚಾಮೃತ ಎಂದು ಕೊಳಕು ನೀರನ್ನೇ ಬಳಕೆಮಾಡುವಂತಾಗಿದೆ.
ಸ್ವಚ್ಛತೆ ಇಲ್ಲ: ಟ್ಯಾಂಕ್ ಸುತ್ತಮುತ್ತಲ ಪ್ರದೇಶ ಸ್ವಚ್ಛತೆಯಿಲ್ಲದೆ ಹುಳುಗಳು ಸೃಷ್ಟಿಯಾಗಿದ್ದು ನೀರಿನ ಪೈಪ್ಗಳು ಪಾಚಿಕಟ್ಟಿವೆ. ಇಷ್ಟಾದರೂ ಅಧಿಕಾರಿಗಳು ಗಮನಹರಿಸದೇ ಪಂಚಾಯಿತಿ ಸುಸಜ್ಜಿತ ಕೊಠಡಿಗಳಲ್ಲಿ ಕಾಲಹರಣ ಮಾಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ನಾನು ರಜೆಯಲ್ಲಿದೇನೆ. ಷರಾಪುರಪಾಳ್ಯದಲ್ಲಿನ ವಾಟರ್ಟ್ಯಾಂಕ್ಗಳನ್ನು ಎರಡು ದಿನಗಳಲ್ಲಿ ಸ್ವಚ್ಛತೆ ಮಾಡಿಸಲಾಗುತ್ತದೆ. ಸ್ಥಳೀಯ ವಾಟರ್ಮನ್ಗಳಿಗೆ ಕಾಲಕಾಲಕ್ಕೆ ವಾಟರ್ ಟ್ಯಾಂಕ್ಗಳನ್ನು ಸ್ವಚ್ಛಗೊಳಿಸುವಂತೆ ಸೂಚನೆ ನೀಡುವುದರೊಂದಿಗೆ ಎಚ್ಚರಿಕೆ ನೀಡಲಾಗುವುದು.
-ಕೃಷ್ಣಮೂರ್ತಿ, ವಿಶ್ವೇಶ್ವರಪುರ ಗ್ರಾಪಂ ಪಿಡಿಒ
ವಾಟರ್ ಟ್ಯಾಂಕ್ಗಳನ್ನು ಸ್ವಚ್ಛ ಮಾಡುವ ಬಗ್ಗೆ ವಾಟರ್ಮನ್ಗಳಿಗೆ ತಿಳಿಸಲಾಗುತ್ತದೆ. ಸೋಮವಾರ ಸಮಸ್ಯೆ ಬಗೆಹರಿಸುತ್ತೇವೆ.
-ಲಕ್ಷ್ಮಿದೇವಮ್ಮ, ವಿಶ್ವೇಶ್ವರಪುರ ಗ್ರಾಪಂ ಅಧ್ಯಕ್ಷೆ
ತಾಲೂಕಿನ ಅಭಿವೃದ್ಧಿ ಹೊಂದಿರುವ ಪಂಚಾಯಿತಿಗಳ ಪೈಕಿ ಪ್ರಮುಖವಾದದ್ದು ವಿಶ್ವೇಶ್ವರಪು ಗ್ರಾಮ ಪಂಚಾಯಿತಿ. ರಾಷ್ಟ್ರೀಯ ಹೆದ್ದಾರಿ 4 ಹಾಗೂ ತಾಲೂಕಿಗೆ ಹೊಂದಿಕೊಂಡಿರುವ ಪಂಚಾಯಿತಿ ವ್ಯಾಪ್ತಿಯ ಬಹುತೇಕ ಗ್ರಾಮಗಳ ಸುತ್ತಮುತ್ತಲಿನಲ್ಲಿ ಖಾಸಗಿ ಬಡಾವಣೆಗಳು ಹಾಗೂ ಕಾರ್ಖಾನೆಗಳು ಎಗ್ಗಿಲ್ಲದೆ ತಲೆ ಎತ್ತಿವೆ. ಸಾಕಷ್ಟು ತೆರಿಗೆ ಕಂದಾಯ ಸಂದಾಯವಾಗಿ ಸಾಕಷ್ಟು ಅಭಿವೃದ್ಧಿಯನ್ನು ಕಂಡಿದೆ. ಆದರೆ ಇಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿ ನಿರ್ಲಕ್ಷ್ಯದಿಂದಾಗಿ ಷರಾಪುರಪಾಳ್ಯದ ಜನರು ಪಾಚಿ ಕಟ್ಟಿದ ಹಾಗೂ ಹುಳುಗಳಿರುವ ಮತ್ತು ಕಲುಷಿತವಾಗಿರುವ ನೀರನ್ನು ಪ್ರತಿನಿತ್ಯ ಕುಡಿಯಬೇಕಾದ ಪರಿಸ್ಥಿತಿ ಎದುರಾಗಿದೆ.
ಗ್ರಾಮೀಣ ಕಿರು ನೀರು ಸರಬರಾಜು ಯೋಜನೆಗಳಡಿ ಗ್ರಾಮಗಳಲ್ಲಿ ಅಲ್ಲಲ್ಲಿ ಸಣ್ಣ ನೀರಿನ ಘಟಕಗಳನ್ನು ನಿರ್ಮಾಣ ಮಾಡಲಾಗಿದೆ. ಅವುಗಳನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸಿ ಪ್ರತಿನಿತ್ಯ ಅಥವಾ ಅವಶ್ಯಕತೆಗನುಗುಣವಾಗಿ ಗ್ರಾಮದ ಜನರಿಗೆ ನೀರನ್ನು ಸರಬರಾಜು ಮಾಡುವುದು ಮತ್ತು ಗ್ರಾಮದ ಜನರಿಗೆ ನೀರಿನ ಸಮಸ್ಯೆ ತಲೆದೋರದಂತೆ ಕಾಳಜಿ ವಹಿಸುವುದು ಯೋಜನೆಯ ಉದ್ದೇಶ. ಆದರೆ ವಾಟರ್ಟ್ಯಾಂಕ್ಗಳನ್ನು ಸ್ವಚ್ಛ ಮಾಡಬೇಕಾದ ಸ್ಥಳೀಯ ವಾಟರ್ಮನ್ಗಳ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯದಿಂದ ಜನರು ಕಲುಷಿತ ನೀರನ್ನೇ ಉಪಯೋಗಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಷರಾಪುರಪಾಳ್ಯ ಮತ್ತು ಕೆಲ ಸುತ್ತಮುತ್ತಲ ಗ್ರಾಮಗಳ ವಾಟರ್ಮನ್ಗಳು ಪಂಚಾಯಿತಿ ಅಧಿಕಾರಗಳ ಬೆಂಬಲದಿಂದ ಕೇವಲ ಸಂಬಳಕ್ಕೆ ಮಾತ್ರ ಸೀಮಿತವಾಗಿ ಸ್ವಚ್ಛತೆ ಮಾಡುವುದನ್ನು ಮರೆತಿದ್ದಾರೆ. ಇದರ ಬಗ್ಗೆ ಗ್ರಾಮಸ್ಥರು ಮತ್ತು ಕೆಲ ಸದಸ್ಯರು ಪಂಚಾಯಿತಿ ಅಧಿಕಾರಿಗಳು ಮತ್ತು ಆಡಳಿತ ಮಂಡಳಿಯ ಗಮನಕ್ಕೆ ತಂದರೂ ಕಾಳಜಿಯನ್ನು ವಹಿಸದೆ ಸರಿ ಮಾಡಿಸೋಣ ಎಂಬ ಆಶ್ವಾಸನೆಯಲ್ಲಿಯೇ ಸುಮ್ಮನಾಗಿದ್ದಾರೆ. ಇದರಿಂದ ಗ್ರಾಮದ ಜನರು ದಿನನಿತ್ಯ ಅನಾರೋಗ್ಯದಿಂದ ಬಳಲುವಂತಾಗಿದೆ.
ವಾಟರ್ ಟ್ಯಾಂಕ್ಗಳಲ್ಲಿ ಕೆಂಪುಹುಳುಗಳು ಕಂಡುಬಂದ ಬಗ್ಗೆ ಅಧಿಕಾರಿಗಳಿಗೆ ಮತ್ತು ವಾಟರ್ಮನ್ ಗಮನಕ್ಕೆ ತಂದರೂ ಸ್ವಚ್ಛ ಮಾಡಲು ಮುಂದಾಗದ ಕಾರಣ ಜನರು ಪಾಲಿಗೆ ಬಂದದ್ದೇ ಪಂಚಾಮೃತ ಎಂದು ಕೊಳಕು ನೀರನ್ನೇ ಬಳಕೆಮಾಡುವಂತಾಗಿದೆ.
ಸ್ವಚ್ಛತೆ ಇಲ್ಲ: ಟ್ಯಾಂಕ್ ಸುತ್ತಮುತ್ತಲ ಪ್ರದೇಶ ಸ್ವಚ್ಛತೆಯಿಲ್ಲದೆ ಹುಳುಗಳು ಸೃಷ್ಟಿಯಾಗಿದ್ದು ನೀರಿನ ಪೈಪ್ಗಳು ಪಾಚಿಕಟ್ಟಿವೆ. ಇಷ್ಟಾದರೂ ಅಧಿಕಾರಿಗಳು ಗಮನಹರಿಸದೇ ಪಂಚಾಯಿತಿ ಸುಸಜ್ಜಿತ ಕೊಠಡಿಗಳಲ್ಲಿ ಕಾಲಹರಣ ಮಾಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ನಾನು ರಜೆಯಲ್ಲಿದೇನೆ. ಷರಾಪುರಪಾಳ್ಯದಲ್ಲಿನ ವಾಟರ್ಟ್ಯಾಂಕ್ಗಳನ್ನು ಎರಡು ದಿನಗಳಲ್ಲಿ ಸ್ವಚ್ಛತೆ ಮಾಡಿಸಲಾಗುತ್ತದೆ. ಸ್ಥಳೀಯ ವಾಟರ್ಮನ್ಗಳಿಗೆ ಕಾಲಕಾಲಕ್ಕೆ ವಾಟರ್ ಟ್ಯಾಂಕ್ಗಳನ್ನು ಸ್ವಚ್ಛಗೊಳಿಸುವಂತೆ ಸೂಚನೆ ನೀಡುವುದರೊಂದಿಗೆ ಎಚ್ಚರಿಕೆ ನೀಡಲಾಗುವುದು.
-ಕೃಷ್ಣಮೂರ್ತಿ, ವಿಶ್ವೇಶ್ವರಪುರ ಗ್ರಾಪಂ ಪಿಡಿಒ
ವಾಟರ್ ಟ್ಯಾಂಕ್ಗಳನ್ನು ಸ್ವಚ್ಛ ಮಾಡುವ ಬಗ್ಗೆ ವಾಟರ್ಮನ್ಗಳಿಗೆ ತಿಳಿಸಲಾಗುತ್ತದೆ. ಸೋಮವಾರ ಸಮಸ್ಯೆ ಬಗೆಹರಿಸುತ್ತೇವೆ.
-ಲಕ್ಷ್ಮಿದೇವಮ್ಮ, ವಿಶ್ವೇಶ್ವರಪುರ ಗ್ರಾಪಂ ಅಧ್ಯಕ್ಷೆ