ಆ್ಯಪ್ನಗರ

ತೆರೆದ ಕೊಳವೆ ಬಾವಿ ಮುಚ್ಚಿದ ಗ್ರಾಪಂ

ಶಿವಗಂಗೆ ಪಂಚಾಯಿತಿ ವ್ಯಾಪ್ತಿಯ ಘಂಟೆಹೊಸಹಳ್ಳಿ ಗ್ರಾಮದಲ್ಲಿವೈಫಲ್ಯ ಹೊಂದಿದ ಕುಡಿವ ನೀರಿನ ಕೊಳವೆಬಾವಿಗಳನ್ನು ಮುಚ್ಚದೆ ಹಾಗೆ ಬಿಟ್ಟಿದ್ದು,ವಿಕ ವರದಿ ಮಾಡಲು ಸ್ಥಳಕ್ಕೆ ಭೇಟಿ ನೀಡಿದ ವಿಷಯ ಅರಿತ ಪಂಚಾಯಿತಿ ಕೂಡಲೇ ಕೊಳವೆ ಬಾವಿ ಮುಚ್ಚಿದ್ದಾರೆ.

Vijaya Karnataka 5 Oct 2019, 5:00 am
ದಾಬಸ್‌ಪೇಟೆ: ಶಿವಗಂಗೆ ಪಂಚಾಯಿತಿ ವ್ಯಾಪ್ತಿಯ ಘಂಟೆಹೊಸಹಳ್ಳಿ ಗ್ರಾಮದಲ್ಲಿವೈಫಲ್ಯ ಹೊಂದಿದ ಕುಡಿವ ನೀರಿನ ಕೊಳವೆಬಾವಿಗಳನ್ನು ಮುಚ್ಚದೆ ಹಾಗೆ ಬಿಟ್ಟಿದ್ದು,ವಿಕ ವರದಿ ಮಾಡಲು ಸ್ಥಳಕ್ಕೆ ಭೇಟಿ ನೀಡಿದ ವಿಷಯ ಅರಿತ ಪಂಚಾಯಿತಿ ಕೂಡಲೇ ಕೊಳವೆ ಬಾವಿ ಮುಚ್ಚಿದ್ದಾರೆ.
Vijaya Karnataka Web grapam covered with open tube well
ತೆರೆದ ಕೊಳವೆ ಬಾವಿ ಮುಚ್ಚಿದ ಗ್ರಾಪಂ


ಕಳೆದ ನಾಲ್ಕು ತಿಂಗಳಿಂದಲೂ ತೆರೆದ ಕೊಳವೆ ಬಾವಿ ಮುಚ್ಚುವ ಬಗ್ಗೆ ಗ್ರಾಮಸ್ಥರು ಗ್ರಾಪಂ ಅಧ್ಯಕ್ಷರಿಗೆ ಮತ್ತು ಪಿಡಿಒ ಅಧಿಕಾರಿಗಲಿಗೆ ಮೌಖಿಕವಾಗಿ ತಿಳಿಸಿದ್ದರೂ ಇಲ್ಲಿಯವರೆಗೂ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಕಡೆಗೆ ಗ್ರಾಮಸ್ಥರೇ ಮಕ್ಕಳು, ಪ್ರಾಣಿಗಳು ಬಿದ್ದರೆ ಹೇಗೆ ಎಂದು ತೆರೆದ ಕೊಳವೆ ಬಾವಿಯ ಮೇಲೆ ಕಲ್ಲುಮಚ್ಚಿದ್ದರು. ಅದನ್ನು ಯಾರೋ ಕಿಡಿಗೇಡಿಗಳು ತೆಗೆದಿದ್ದರು. ಈ ಬಗ್ಗೆ ವಿಜಯಕರ್ನಾಟಕ ವರದಿಮಾಡಲು ಸ್ಥಳಕ್ಕೆ ಭೇಟಿ ಕೊಟ್ಟು ಚಿತ್ರ ಸೆರೆಹಿಡಿದುಕೊಂಡು ಹೋದ ಕೂಡಲೇ ಗ್ರಾಮ ಪಂಚಾಯಿತಿ ಸಿಬ್ಬಂದಿ ಬಂದು ತೆರೆದ ಕೊಳವೆ ಬಾವಿ ಮುಚ್ಚಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ