ಆ್ಯಪ್ನಗರ

ಲಂಕಾ ಬಾಂಬ್‌ ದಾಳಿ: ಮೃತರ ಅಂತಿಮ ದರ್ಶನ ಪಡೆದ ಎಚ್‌ಡಿಡಿ, ಎಚ್‌ಡಿಕೆ

ನೆಲಮಂಗಲದ ಮುಖ್ಯ ಬಿ.ಹೆಚ್‌. ರಸ್ತೆ ಮೂಲಕ ​ಮೃತ ಶಿವಕುಮಾರ್ ಹಾಗೂ ಲಕ್ಷ್ಮೀನಾರಾಯಣ್ ಪಾರ್ಥಿವ ಶರೀರ ಸ್ವಗೃಹದಿಂದ ಕ್ರೀಢಾಂಗಣದತ್ತ ಮೆರವಣಿಗೆ ಮೂಲಕ ಕರೆ ತರಲಾಯಿತು.

Vijaya Karnataka Web 24 Apr 2019, 1:09 pm
ನೆಲಮಂಗಲ: ಮಾಜಿ ಪ್ರಧಾನಿ ಹೆಚ್.ಡಿ ದೇವೆಗೌಡ ಮತ್ತು ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರು ಶ್ರೀಲಂಕಾದ ಸರಣಿ ಆತ್ಮಾಹುತಿ ಬಾಂಬ್‌ ದಾಳಿಯಲ್ಲಿ ರಾಜ್ಯದ ಮೃತರ ಅಂತಿಮ ದರ್ಶನ ಪಡೆದು, ಕುಟುಂಬ ಸದಸ್ಯರಿಗೆ ಸಂತ್ವಾನ ಹೇಳಿದರು.
Vijaya Karnataka Web HDD HDK


ಮೃತರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ದೇವರು ನೀಡಲಿ. ಇವರು ಪಕ್ಷಕ್ಕೆ ಆಧಾರ ಸ್ಥಂಭಗಳಿಂತಿದ್ರು. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಜಗತ್ತಿನಾದ್ಯಂತ ಭಯೋತ್ಪಾದಕ ಚಟುವಟಿಕೆಗಳು ಆತಂಕ ಹುಟ್ಟಿಸಿವೆ. ಭಯೋತ್ಪಾದಕತೆಯನ್ನ ಬುಡ ಸಮೇತ ತೊಲಗಿಸುವವರೆಗೂ ಶಾಂತಿ ನೆಲಸಲ್ಲ. ಉಗ್ರ ಚಟುವಟಿಕೆಗಳನ್ನ ನಿರ್ನಾಮ ಮಾಡಲು ಎಲ್ಲರೂ ಕೈ ಜೋಡಿಸಬೇಕು ಎಂದು ಎಚ್‌ ಡಿ ದೇವೇಗೌಡರು ಮನವಿ ಮಾಡಿದರು.

ನೆಲಮಂಗಲದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಂತಿಮ ನಮನದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬೆಂಗಳೂರು ಗ್ರಾಮಾಂತರ ಎಸ್ ಪಿ ರಾಮ್ ನಿವಾಸ್ ಸಪೆಟ್ ಸ್ಥಳದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ನೆಲಮಂಗಲದ ಮುಖ್ಯ ಬಿ.ಹೆಚ್‌. ರಸ್ತೆ ಮೂಲಕ ಮೃತ ಶಿವಕುಮಾರ್ ಹಾಗೂ ಲಕ್ಷ್ಮೀನಾರಾಯಣ್ ಪಾರ್ಥಿವ ಶರೀರ ಸ್ವಗೃಹದಿಂದ ಕ್ರೀಢಾಂಗಣದತ್ತ ಮೆರವಣಿಗೆ ಮೂಲಕ ಕರೆ ತರಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ