ಆ್ಯಪ್ನಗರ

ಎಂಟಿಬಿ ನಾಗರಾಜ್ ನಾಮಪತ್ರ ಸಲ್ಲಿಕೆ, ಕಾರ್ಯಕರ್ತರಿಗೆ ಟಿ ಶರ್ಟ್ ವಿತರಣೆ

ಹೊಸಕೋಟೆಯಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ಎಂಟಿಬಿ ನಾಗರಾಜ್ ಇಂದು ನಾಮಪತ್ರ ಸಲ್ಲಿಸುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಕರ್ತರಿಗೆ ಟಿ ಶರ್ಟ್ ವಿತರಣೆ ಮಾಡಲಾಗಿದೆ. ಜೊತೆಗೆ ಎಂಟಿಬಿ ಕಣ್ಣು ನೋವಿನಿಂದ ಬಳಲುತ್ತಿದ್ದಾರೆ.

Vijaya Karnataka Web 18 Nov 2019, 11:47 am
ಹೊಸಕೋಟೆ: ವಿಧಾನಸಭಾ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ಎಂಟಿಬಿ ನಾಗರಾಜ್ ಅವರು ಇಂದು ನಾಮಪತ್ರ ಸಲ್ಲಿಕೆ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹೊಸಕೋಟೆಯಲ್ಲಿ ಬೃಹತ್ ಮೆರವಣಿಗೆ ನಡೆಯುತ್ತಿದ್ದು, ಎಂಟಿಬಿ ಕಚೇರಿಯಲ್ಲಿ ಕಾರ್ಯಕರ್ತರ ದಂಡು ಜಮಾಯಿಸಿದೆ.
Vijaya Karnataka Web mtb


ಸೋಮವಾರ ಬೈ ಎಲೆಕ್ಷನ್ ನಾಮಿನೇಷನ್ ಭರಾಟೆ! ಎಂಟಿಬಿಗೆ ಬಿಎಸ್‌ವೈ ಸಾಥ್, ಮಹೇಶ್‌ಗೆ ಸವದಿ ಬಲ..!

ಹೊಸಕೋಟೆಯಿಂದ ಎರಡನೇ ಬಾರಿಗೆ ಎರಡನೇ ಬಾರಿ ಬಿಜೆಪಿ ಅಭ್ಯರ್ಥಿ ಯಾಗಿ ನಾಮಪತ್ರ ಸಲ್ಲಿಸುತ್ತಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಅನೇಕ ರಾಜ್ಯದ ಬಿಜೆಪಿ ಮುಖಂಡರು ಎಂಟಿಬಿ ಸಾಥ್ ನೀಡುವ ಸಾಧ್ಯತೆ ಇದೆ.

ನನ್ನ‘ಎದೆ ಬಗೆದರೆ’ ಸಿದ್ದರಾಮಯ್ಯ ಇದ್ದಾರೆ ಎಂದಿದ್ದ ಎಂಟಿಬಿ ಪಾಲಿಗಿಂದು ಸಿದ್ದು ‘ದ್ರೋಹಿಯಂತೆ’!

ಎಂಟಿಬಿ ನಾಮಪತ್ರ ಸಲ್ಲಿಸುತ್ತಿರುವ ಜೊತೆಗೆ ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲಾಗಿದ್ದು, ಹೊಸಕೋಟೆ ಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಜೊತೆಗೆ ನಾಮಪತ್ರ ಸಲ್ಲಿಸುವ ಕಾರ್ಯಕ್ರಮಕ್ಕೆ ಕಾರ್ಯಕರ್ತರನ್ನು ಕರೆ ತರಲು ಖಾಸಾಗಿ ಬಸ್ ಗಳನ್ನು ಹಳ್ಳಿಹಳ್ಳಿಗೆ ನಾಗರಾಜ್ ಕಳುಹಿಸಿ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಹೊಸಕೋಟೆ ಕಣದಲ್ಲಿ 'ಸಂಪತ್ತೇ ಸವಾಲ್'; ಕೋಟಿ ಕುಳಗಳ ಪೈಕಿ ಗೆಲುವು ಯಾರಿಗೆ?

ಇಷ್ಟು ಮಾತ್ರವಲ್ಲ ಕಾರ್ಯಕರ್ತರಿಗೆ ಎಂಟಿಬಿ ಎಂದು ಮುದ್ರಿಸಿರುವ ಟೀ ಶರ್ಟ್ ವಿತರಣೆ ಮಾಡಲಾಗಿದೆ. ಟೀ ಶರ್ಟ್ ಹಿಂಬದಿಯಲ್ಲಿ ಅಭಿವೃದ್ದಿಗಾಗಿ ನಿಮ್ಮ ಮತ ಎಂದು ಬರೆಯಲಾಗಿದೆ.

ಕಾಂಗ್ರೆಸ್ ಬೆನ್ನಿಗೆ ಚೂರಿ ಹಾಕಿ ಹೋದ ಎಂಟಿಬಿ ಒಬ್ಬ ದ್ರೋಹಿ: ಸಿದ್ದರಾಮಯ್ಯ ಆಕ್ರೋಶ

ಕಣ್ಣು ನೋವಿನಿಂದ ಬಳಲುತ್ತಿರುವ ಎಂಟಿಬಿ:
ಇಂದು ನಾಮಪತ್ರ ಸಲ್ಲಿಸುತ್ತಿರುವುದರ ಜೊತೆಗೆ ಎಂಟಿಬಿ ನಾಗರಾಜ್ ಅವರು ಕಣ್ಣು ನೋವಿನಿಂದ ಬಳಲುತ್ತಿದ್ದು, ಹೊಸಕೋಟೆಯ ಜೆಇಎಫ್ ಕಣ್ಣಿನ ಆಅಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ