ಆ್ಯಪ್ನಗರ

ಸಿದ್ದರಾಮಯ್ಯ ಅಲ್ಲ, ಯಾರೇ ಬಂದರೂ ಭಯವಿಲ್ಲ: ಎಂಟಿಬಿ ನಾಗರಾಜ್‌

ಕಾಂಗ್ರೆಸ್‌ ನಾಯಕರ ವಿರುದ್ಧ ಎಂಟಿಬಿ ನಾಗರಾಜ್‌ ಮತ್ತೆ ಗುಡುಗಿದ್ದಾರೆ. ಸಿದ್ದರಾಮಯ್ಯ ಅಲ್ಲದೇ ಬೇರೆ ಯಾವುದೇ ನಾಯಕ ಇಲ್ಲಿ ಬಂದರೂ ನನ್ನ ಕ್ಷೇತ್ರದ ಜನ ನನ್ನ ಕೈ ಬಿಡಲ್ಲ ಎಂದು ನಾಗರಾಜ್ ಹೇಳಿದ್ದಾರೆ.

Vijaya Karnataka Web 21 Sep 2019, 5:25 pm
ಹೊಸಕೋಟೆ: ಕೈ ನಾಯಕರು ಇಂದು ಸಮಾವೇಶದ ನಡುವೆ ನನ್ನ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ. ನಾನು ಎಲ್ಲದಕ್ಕು ಸಿದ್ದ ಎಂದು ಅನರ್ಹ ಶಾಸಕ ಎಂಟಿಬಿ ನಾಗರಾಜ್‌ ತಿಳಿಸಿದ್ದಾರೆ.
Vijaya Karnataka Web ಎಂಟಿಬಿ ನಾಗರಾಜ್
ಎಂಟಿಬಿ ನಾಗರಾಜ್



ಹೊಸಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಸಮಾವೇಶ ಹಿನ್ನಲೆಯಲ್ಲಿ ಎಂಟಿಬಿ ನಾಗರಾಜ್‌ ತಮ್ಮ ಗರುಡಾಚಾರ್ ಪಾಳ್ಯದ ನಿವಾಸದ ಬಳಿ ಪ್ರತಿಕ್ರಿಯೆ ನೀಡಿದರು.

ಯಾರು ಏನು ಭಾಷಣ ಮಾಡ್ತಾರೊ ಮಾಡ್ಲಿ, ಏನೂ ಆಗಲ್ಲ ನಾನು ಎಲ್ಲದಕ್ಕೂ ಸಿದ್ದವಾಗಿದ್ದೇನೆ. ಸಿದ್ದರಾಮಯ್ಯ ಅಲ್ಲ ಯಾರು ಕ್ಷೇತ್ರಕ್ಕೆ ಬಂದ್ರು ನಾನು ರೆಡಿ. ಸವಾಲು ಸ್ವೀಕರಿಸಲು ಸಿದ್ಧ ಎಂದು ತಿಳಿಸಿದರು.

ಮೊಟ್ಟ ಮೊದಲ ಬಾರಿಗೆ ನಮ್ಮ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದ್ದಾರೆ, ಅವರು ಏನೇನು ಮಾತಾಡ್ತಾರೆ ನೋಡೋಣ ನಂಗೆ ಯಾರ ಭಾಷಣದಿಂದಲೂ ಭಯವಿಲ್ಲ, ಅವರ ಭಾಷಣದ ಬಳಿಕ ಏನು ಮಾತನಾಡುತ್ತರೋ‌ ಅದಕ್ಕೆ ಉತ್ತರ ಕೊಡುತ್ತೇನೆ ಎಂದರು

ರಾಜ್ಯಕ್ಕೆ ಕೇಂದ್ರ ನೆರವಿನ ಅವಶ್ಯಕತೆ ಇಲ್ಲ ಎಂಬ ತೇಜಸ್ವಿ ಸೂರ್ಯ ಹೇಳಿಕೆ ಕುರಿತು ಮಾತನಾಡಿದ ಎಂಟಿಬಿ ನಾಗರಾಜ್‌ ಅವರು ಏಕೆ ಈ ರೀತಿ ಹೇಳಿಕೆ ಕೊಟ್ಟಿದ್ದಾರೋ ಗೊತ್ತಿಲ್ಲ
ಎಂದರು.

ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಹಯೋಗದ ನೆರವು ಅವಶ್ಯವಿದೆ, ಈಗಾಗಲೇ ಕೇಂದ್ರ ಸರಕಾರ ನೆರವು ನೀಡುವ ಭರವಸೆ ನೀಡಿದೆ, ಕೇಂದ್ರದ ನೆರವು ಬೇಡ ಎನ್ನುವುದು ಎಷ್ಟು ಸರಿ, ನೆರವು ಬೇಕಿದೆ, ಮನೆ, ಮಠ ಕಳೆದುಕೊಂಡವರಿಗೆ ಸರಕಾರ ಹಲವು ಭರವಸೆ ನೀಡಿದೆ, ಭರವಸೆ ಈಡೇರಿಸಲು ಕೇಂದ್ರ, ರಾಜ್ಯ ಸರಕಾರ ನೆರವಿನ ಅವಶ್ಯಕತೆಯಿದೆ ಎಂದು ನಾಗರಾಜ್‌ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ