ಆ್ಯಪ್ನಗರ

ಎಲೈಕ್ಷನ್‌ ಟೈಂನಲ್ಲಿ ಅಕ್ರಮ ಮದ್ಯದ ರೈಡ್‌!

ಇಲ್ಲಿನ ಸೋಂಪುರ ಹೋಬಳಿಯ ಬಹುತೇಕ ಗ್ರಾಮಗಳ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ದಂಧೆ ಅವ್ಯಾಹತವಾಗಿದ್ದರೂ, ನಿಯಂತ್ರಣದ ಬಗ್ಗೆ ಕ್ರಮ ವಹಿಸದ ಅಬ್ಕಾರಿ ಅಧಿಕಾರಿಗಳು ಚುನಾವಣೆ ಘೋಷಣೆಯಾಗುತ್ತಲೇ ಅಕ್ರಮ ಮದ್ಯ ಮಾರಾಟ ನಿಯಂತ್ರಣಕ್ಕೆ ಮುಂದಾಗಿರುವುದು, ಅಕ್ರಮದ ನಿಯಂತ್ರಣಕ್ಕೆ ಚುನಾವಣೆಯೇ ಬರಬೇಕೇ ಎಂಬ ಪ್ರಶ್ನೆ ಎದುರಾಗಿದೆ.

Vijaya Karnataka 1 Apr 2019, 5:00 am
ಚುನಾವಣೆಗೆ ಮುಂಚೆಯೇ ದೂರಿದರೂ ನಿಯಂತ್ರಣಕ್ಕೆ ಅಬ್ಕಾರಿ ಇಲಾಖೆ ಹಿಂದೇಟು | ಗ್ರಾಮಸ್ಥರ ಆಕ್ರೋಶ
Vijaya Karnataka Web illegal liquor ride at election time dabaspeterural side
ಎಲೈಕ್ಷನ್‌ ಟೈಂನಲ್ಲಿ ಅಕ್ರಮ ಮದ್ಯದ ರೈಡ್‌!


ವಿಕ ಸುದ್ದಿಲೋಕ ದಾಬಸಪೇಟೆ

ಇಲ್ಲಿನ ಸೋಂಪುರ ಹೋಬಳಿಯ ಬಹುತೇಕ ಗ್ರಾಮಗಳ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ದಂಧೆ ಅವ್ಯಾಹತವಾಗಿದ್ದರೂ, ನಿಯಂತ್ರಣದ ಬಗ್ಗೆ ಕ್ರಮ ವಹಿಸದ ಅಬ್ಕಾರಿ ಅಧಿಕಾರಿಗಳು ಚುನಾವಣೆ ಘೋಷಣೆಯಾಗುತ್ತಲೇ ಅಕ್ರಮ ಮದ್ಯ ಮಾರಾಟ ನಿಯಂತ್ರಣಕ್ಕೆ ಮುಂದಾಗಿರುವುದು, ಅಕ್ರಮದ ನಿಯಂತ್ರಣಕ್ಕೆ ಚುನಾವಣೆಯೇ ಬರಬೇಕೇ ಎಂಬ ಪ್ರಶ್ನೆ ಎದುರಾಗಿದೆ.

ಕಳೆದ ಎರಡು ವರ್ಷಗಳಿಂದಲೂ ಗ್ರಾಮಗಳಪೆಟ್ಟಿಗೆ ಅಂಗಡಿ, ದಿನಸಿ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದ್ದು, ಚುನಾವಣೆಗೂ ಮುಂಚೆಯೇ ಅಕ್ರಮ ಮದ್ಯ ಮಾರಾಟದ ಬಗ್ಗೆ ಗ್ರಾಮದ ಮಹಿಳೆಯರು ಸಂಬಂಧಪಟ್ಟ ಇಲಾಖೆ ಪೊಲೀಸರು ಗಮನಕ್ಕೆ ತಂದರೂ ಅಧಿಕಾರಿಗಳು ಇತ್ತ ಸುಳಿಯಲಿಲ್ಲ. ಚÜುನಾವಣೆ ಎದುರಾದ ಸಂದರ್ಭದಲ್ಲಿ ಮಾತ್ರ ದಾಳಿ ಮೇಲೆ ದಾಳಿ ನಡೆಸುವುದು ಅಚ್ಚರಿ ಮೂಡಿಸಿದೆ ಎನ್ನುತ್ತಾರೆ ನಿಡವಂದ ಗ್ರಾಮದ ಸರೋಜಮ್ಮ.

ಬಾರ್‌ಗಳಿಗಿಂತಲೂ ದಿನಸಿ ಅಂಗಡಿಗಳಲ್ಲಿ ಭರ್ಜರಿ ಮದ್ಯ ಮಾರಾಟ: ಸೋಂಪುರ ಹೋಬಳಿಯಲ್ಲಿ ಪರವಾನಗಿ ಪಡೆದಿರುವ 5 ಬಾರ್‌ ಅಂಗಡಿಗಳಿದ್ದು ಇಲ್ಲಿನ ಅಂಗಡಿಗಳಲ್ಲಿ ನ ಖರೀದಿಗಿಂತ ಹಳ್ಳಿಗಳಲ್ಲಿನ ದಿನಸಿ ಅಂಗಡಿಗಳಲ್ಲೆ ಹೆಚ್ಚು ಅಕ್ರಮ ಮಧ್ಯ ಮಾರಾಟವಾಗುತ್ತಿದೆ ಎಂದು ಶಿವಗಂಗೆಯ ನಾಗರಾಜು ದೂರುತ್ತಾರೆ.

ಪ್ರವಾಸಿ ಕ್ಷೇತ್ರಗಳಲ್ಲಿ ನಿಲ್ಲದ ಅಕ್ರಮ ದಂಧೆ : ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ಶಿವಗಂಗೆಗೆ ಪ್ರತಿನಿತ್ಯ ಸಾವಿರಾರು ಭಕ್ತರು ಹಾಗೂ ಪ್ರವಾಸಿಗರು ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಾರೆ. ಇಲ್ಲಿನ ಚಿಲ್ಲರೆ ಅಂಗಡಿ ಹಾಗೂ ದಿನಸಿ ಅಂಗಡಿಗಳಲ್ಲಿ ಅಕ್ರಮ ಮಧ್ಯ ಮಾರಾಟ ಮಾಡುತ್ತಿದ್ದು, ಸಂಜೆ ವೇಳೆಯಲ್ಲಿ ಅಂಗಡಿಗಳ ಮುಂದೆ ಕುಡುಕರ ಹಾವಳಿ ಹೇಳತೀರದಾಗಿದೆ. ಈ ಸಮಯದಲ್ಲಿ ಮಹಿಳೆಯರು ನಿರ್ಭಯವಾಗಿ ಓಡಾಡಲಾಗದ ಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೇ ಶಿವಗಂಗೆ ಗ್ರಾ.ಪಂ.ವ್ಯಾಪ್ತಿಯ ಶಿವಾನಂದ ನಗರ, ಘಂಟೆ ಹೊಸಹಳ್ಳಿ, ಗೌರಾಪುರ, ಗಂಗೇನಪುರ, ಮಾಚನಹಳ್ಳಿ, ಗೊಟ್ಟಿಕೆರೆ ಗ್ರಾಮಗಳಲ್ಲಿ ಅಕ್ರಮ ಮದ್ಯದಂಗಡಿಗಳು ತಲೆ ಎತ್ತಿವೆ ಎಂಬ ದೂರು ಕೇಳಿಬರುತ್ತಿದೆ.

ಜನಪ್ರತಿನಿದಿಗಳ ಊರಲ್ಲಿ ಹೆಚ್ಚು : ಜಿ.ಪಂ.ಸದಸ್ಯ ಹಾಗೂ ಗ್ರಾ.ಪಂ.ಅಧ್ಯಕ್ಷ ರು ವಾಸಿಸುವ ನರಸೀಪುರ ಗ್ರಾಮದಲ್ಲೇ ಅಕ್ರಮ ಮದ್ಯ ಮಾರಾಟ ರಾಜಾರೋಷವಾಗಿ ನಡೆಯತ್ತಿದೆ ಎಂಬ ದೂರು ವ್ಯಾಪಕವಾಗಿದ್ದು, ಇದರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಜನಪ್ರತಿನಿಧಿಗಳು ಮತ್ತು ಪೊಲೀಸರು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಗ್ರಾಮದ ಮಹಿಳೆಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮಾಮೂಲಿ ವಸೂಲಿ : ಅಕ್ರಮ ಮಧ್ಯದಂಗಡಿಯವರಿಂದ ಪೊಲೀಸರು ಮಾಮೂಲಿ ವಸೂಲಿ ಮಾಡುತ್ತಿದ್ದಾರೆ ಎಂದು ಮಹಿಳೆಯರು ಆರೋಪಿಸುತ್ತಿದ್ದು, ಅಕ್ರಮ ಮದ್ಯ ಮಾರಾಟ ಮಾಡುವವರು ಸಂಜೆ 7ರ ನಂತರ ಮದ್ಯವನ್ನು ಚೀಲಗಳಲ್ಲಿ ತುಂಬಿ ಅಂಗಡಿ ಇಲ್ಲವೆ ಕೆಲವು ನಿರ್ದಿಷ್ಟ ಮನೆಗಳಿಗೆ ಸರಬರಾಜು ಮಾಡುತ್ತಾರೆ . ನಕಲಿ ಮದ್ಯವನ್ನು ದುಬಾರಿ ಬೆಲೆಗೆ ಇಲ್ಲಿ ಮಾರಾಟ ಮಾಡುವ ಮಧ್ಯದ ಬೆಲೆ ದುಬಾರಿಯಾಗಿ ಮಾರಾಟ ಮಾಡುತ್ತಿದ್ದಾರೆ. ಇಲ್ಲಿ ನಕಲಿ ಮದ್ಯವನ್ನು ಮಾರಾಟ ಮಾಡಿ ಜನರಿಂದ ಹಣದೋಚುತ್ತಿದ್ದಾರೆ ಎಂಬ ಆರೋಪವನ್ನು ಮದ್ಯಪ್ರಿಯರೇ ಮಾಡುತ್ತಿದ್ದಾರೆ.

ಎಂಎಸ್‌ಐಎಲ್‌ ತೆರೆಯುವಂತೆ ಒತ್ತಾಯ : ಹೋಬಳಿಯ ಕೆಲವು ಹಲವೆಡೆ ನಕಲಿ ಮದ್ಯ ಮಾರಾಟ ಮಾಡುತ್ತಿದ್ದು, ಇದರಿಂದ ಜನರ ಆರೋಗ್ಯ ಮತ್ತಷ್ಟು ಹಾಳಾಗುತ್ತಿದೆ. ನಕಲಿ ಮದ್ಯಕ್ಕೆ ಕಡಿವಾಣ ಹಾಕಲು ಎಂ ಎಸ್‌ಐಎಲ್‌ ಮಳಿಗೆ ತೆರೆಯಬೇಕೆಂÜು ಶಿವಗಂಗೆ ಗ್ರಾಮದ ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ