ಆ್ಯಪ್ನಗರ

ಅಂತರ್ಜಾತಿ ವಿವಾಹ: ಗಂಡನ ಹತ್ಯೆ, ಹೆಂಡತಿ ನೇಣಿಗೆ ಶರಣು

ಮೈದುನನಿಂದಲೇ ಗಂಡ ಕೊಲೆಗೀಡಾದ ದುಃಖವನ್ನು ತಾಳಲಾರದ ಹೆಂಡತಿ ಡೆತ್‌ನೋಟ್‌ ಬರೆದಿಟ್ಟು ನೇಣಿಗೆ ಶರಣಾಗಿರುವ ಘಟನೆ ನಡೆದಿದೆ.

Vijaya Karnataka 7 Dec 2018, 5:00 am
ದೇವನಹಳ್ಳಿ: ಮೈದುನನಿಂದಲೇ ಗಂಡ ಕೊಲೆಗೀಡಾದ ದುಃಖವನ್ನು ತಾಳಲಾರದ ಹೆಂಡತಿ ಡೆತ್‌ನೋಟ್‌ ಬರೆದಿಟ್ಟು ನೇಣಿಗೆ ಶರಣಾಗಿರುವ ಘಟನೆ ನಡೆದಿದೆ.
Vijaya Karnataka Web inter caste marriage husband murdered wife commit suicide
ಅಂತರ್ಜಾತಿ ವಿವಾಹ: ಗಂಡನ ಹತ್ಯೆ, ಹೆಂಡತಿ ನೇಣಿಗೆ ಶರಣು


ಪ್ರೀತಿಸಿ 8 ತಿಂಗಳ ಹಿಂದೆ ಅಂತರ್ಜಾತಿ ಮದುವೆಯಾಗಿದ್ದ ಮೀನಾಕ್ಷಿ ಹಾಗೂ ಹರೀಶ್‌ ಸುಖವಾಗಿ ಜೀವನ ನಡೆಸುತ್ತಿದ್ದರು. ಇದಕ್ಕೆ ಸಾಕ್ಷಿ ಎಂಬಂತೆ 3 ತಿಂಗಳ ಗರ್ಬಿಣಿಯಾಗಿದ್ದಳು. ಕಳೆದ ತಿಂಗಳು, ಮೀನಾಕ್ಷಿ ತಮ್ಮ ವಿನಯ್‌ ತನ್ನ ಭಾವ ಹರೀಶ್‌ನನ್ನು ಹತ್ಯೆ ಮಾಡಿದ್ದ. ಇದರಿಂದ ಮೀನಾಕ್ಷಿ ಮನನೊಂದ ತನ್ನ ಗಂಡ ಮದುವೆ ಸಮಯದಲ್ಲಿ ಕೊಡಿಸಿದ್ದ ಸೀರೆ ಉಟ್ಟು ಡೆತ್‌ ನೋಟ್‌ ಬರೆದಿಟ್ಟು ನೇಣಿಗೆ ಶರಣಾಗಿದ್ದಾಳೆ.

ವಿಶ್ವನಾಥಪುರ ಪೊಲೀಸ್‌ ಠಾಣೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕಳೆದ ತಿಂಗಳು ನಲ್ಲೂರಿನಲ್ಲಿ ಹರೀಶ್‌ ಕೊಲೆಯಾಗಿದ್ದ. ಹರೀಶ್‌ ದೇವನಹಳ್ಳಿ ತಾಲೂಕಿನ ಬಿದಲೂರು ಗ್ರಾಮದ ಮುನಿನಾರಾಯಣಪ್ಪ ಎಂಬುವರ ಮಗ. ಮೀನಾಕ್ಷಿ ನಲ್ಲೂರು ಗ್ರಾಮದ ನಾರಾಯಣಸ್ವಾಮಿ ಎಂಬುವರ ಮಗಳು.

ಡೆತ್‌ನೋಟ್‌: ನನ್ನ ಸಾವಿಗೆ ನಾನೇ ಕಾರಣ. ದಯವಿಟ್ಟು ನನ್ನನ್ನು ಎಲ್ಲರೂ ಕ್ಷ ಮಿಸಿಬಿಡಿ. ಅಪ್ಪ, ಅಮ್ಮ ನಿಮ್ಮನ್ನು ಬಿಟ್ಟು ಮೋಸ ಮಾಡಿ ಹೋಗುತ್ತಿದ್ದೇನೆ. ಹರೀಶ್‌ನನ್ನು ಬಿಟ್ಟು ಇರುವ ಪ್ರತಿ ದಿನವೂ ನನಗೆ ನರಕವಾಗುತ್ತಿದೆ. ನಾನು ಹರೀಶನ ಬಳಿ ಹೋಗುತ್ತಿದ್ದೇನೆ. ನೀವೆಲ್ಲರೂ ನನ್ನ ಮಗಳಂತೆ ನೋಡಿಕೊಂಡಿದ್ದೀರಿ. ತವರು ಮನೆಯ ನೆನಪನ್ನೇ ಕಳೆದಿದ್ದೀರಿ ಎಂದು ಡೆತ್‌ ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ದಯವಿಟ್ಟು ಯಾರು ಅಂತರ್ಜಾತಿಯ ವಿವಾಹವನ್ನು ಆಗಬೇಡಿ, ಮನೆಯವರನ್ನು ಒಪ್ಪಿಸಿ ಮದುವೆಯಾಗಿ, ಮಿಸ್‌ಯೂ ಎವೆರಿಒನ್‌ : ಇದು ಆತ್ಮಹತ್ಯೆಗೂ ಮೊದಲು ಮೀನಾಕ್ಷಿ ಬರೆದಿಟ್ಟ ಮರಣಪತ್ರ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ