ಆ್ಯಪ್ನಗರ

ಎಲ್ಲರೂ ಒಗ್ಗಟ್ಟಿನಿಂದ ಇರಬೇಕು ಅಂತ ಜೆಡಿಎಸ್‌ ಶಾಸಕರು ರೆಸಾರ್ಟ್‌ನಲ್ಲಿದ್ದೇವೆ: ಬಂಡೆಪ್ಪ ಕಾಶಂಪೂರ

ದೇವನಹಳ್ಳಿ- ನಂದಿ ಹಿಲ್ಸ್ ಮಾರ್ಗ ಮಧ್ಯೆ ಇರುವ ಗಾಲ್ಪ್ ಶೈರ್ ರೆಸಾರ್ಟ್‌ನಲ್ಲಿ 23 ಜೆಡಿಎಸ್ ಶಾಸಕರು ತಂಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಈ ಪ್ರೆಸ್ಟೀಜ್ ಗಾಲ್ಪ್ ಶೈರ್ ರೆಸಾರ್ಟ್‌ನಲ್ಲಿ ಇವರು ಬೀಡು ಬಿಟ್ಟಿದ್ದಾರೆ.

Vijaya Karnataka Web 9 Jul 2019, 6:16 pm
ದೇವನಹಳ್ಳಿ: ಎಲ್ಲರೂ ಒಗ್ಗಟ್ಟಿನಿಂದ ಇರಬೇಕು ಅಂತ ಇವತ್ತು ಎಲ್ಲಾ ಜೆಡಿಎಸ್ ಶಾಸಕರು ಇದ್ದೇವೆ. ಹೀಗಾಗಿ ಎಲ್ಲಾ ಜೆಡಿಎಸ್ ಶಾಸಕರು ರೆಸಾರ್ಟ್‌ನಲ್ಲಿದ್ದೇವೆ ಎಂದು ಪ್ರೆಸ್ಟೀಜ್ ಗಾಲ್ಫ್‌ ಶೈರ್ ರೆಸಾರ್ಟ್ ಬಳಿ ಸಚಿವ ಬಂಡೆಪ್ಪ ಕಾಶಂಪೂರ ಹೇಳಿದ್ದಾರೆ.
Vijaya Karnataka Web bandeppa kashempur


ಎಲ್ಲರೂ ಒಗ್ಗಟ್ಟಿನಿಂದ ಇರಬೇಕು ಅಂತ ಇವತ್ತು ಎಲ್ಲಾ ಜೆಡಿಎಸ್ ಶಾಸಕರು ಇದೇ ರೆಸಾರ್ಟ್‌ನಲ್ಲಿದ್ದೇವೆ. ಯಾವಾಗ ವರಿಷ್ಠರ ಬುಲಾವ್ ಬರುತ್ತೋ ಆಗ ಹೊರಗಡೆ ಹೋಗ್ತೇವೆ ಎಂದು ರೆಸಾರ್ಟ್ ಬಳಿ ಸಚಿವ ಬಂಡೆಪ್ಪ ಕಾಶಂಪೂರ ಹೇಳಿಕೆ ನೀಡಿದ್ದಾರೆ.

ಇನ್ನು, ಇವತ್ತು ಮಂಗಳವಾರ ದೇವಿ ಮಾರಮ್ಮ ಗುಡಿಗೆ ಹೋಗಿ ವಾಪಸ್ ಬರುತ್ತಿದ್ದೇನೆ. ದೇವನಹಳ್ಳಿ ಬಳಿ ಇರೋ ಮಾರಮ್ಮ ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿ ಬರುತ್ತಿದ್ದೇನೆ. ಪ್ರತಿ ಮಂಗಳವಾರ ಮಾರಮ್ಮ ಗುಡಿಗೆ ಹೋಗೋದು ನನ್ನ ವಾಡಿಕೆ ಎಂದು ಸಹ ಬಂಡೆಪ್ಪ ಕಾಶಂಪೂರ ತಿಳಿಸಿದ್ದಾರೆ.

ರಾಜ್ಯ ರಾಜಕೀಯದಲ್ಲಿ ಕ್ಷಿಪ್ರ ಬೆಳವಣಿಗೆ ಹಾಗೂ ಸಮ್ಮಿಶ್ರ ಸರಕಾರಕ್ಕೆ ಕಂಟಕ ಎದುರಾಗಿರುವ ಹಿನ್ನೆಲೆ ಜೆಡಿಎಸ್‌ ಶಾಸಕರು ರೆಸಾರ್ಟ್‌ಗೆ ಶಿಫ್ಟ್ ಆಗಿದ್ದಾರೆ. ದೇವನಹಳ್ಳಿ- ನಂದಿ ಹಿಲ್ಸ್ ಮಾರ್ಗ ಮಧ್ಯೆ ಇರುವ ಗಾಲ್ಪ್ ಶೈರ್ ರೆಸಾರ್ಟ್‌ನಲ್ಲಿ ಶಾಸಕರು ತಂಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಈ ಪ್ರೆಸ್ಟೀಜ್ ಗಾಲ್ಪ್ ಶೈರ್ ರೆಸಾರ್ಟ್‌ನಲ್ಲಿ 23 ಜೆಡಿಎಸ್ ಶಾಸಕರು ಬೀಡು ಬಿಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ