ಆ್ಯಪ್ನಗರ

ಕಾನೂನು ಪ್ರಕಾರ ಜಿಂದಾಲ್‌ಗೆ ಭೂಮಿ ಹಂಚಿಕೆ, ಬಿಜೆಪಿ ಅವಧಿಯಲ್ಲಿ ದರ ನಿಗದಿ: ದೇಶಪಾಂಡೆ

ಜಿಲ್ಲೆಯ ಬರ ನಿರ್ವಹಣೆ ಹಾಗೂ ಪ್ರಗತಿ ಪರಿಶೀಲನೆ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ದೇಶಪಾಂಡೆ, ಜಿಂದಾಲ್‌ ಗೆ ಭೂಮಿ ಮಂಜೂರಾತಿ ಹಿಂದೆ ಯಾವುದೇ ಅವ್ಯವಹಾರ ನಡೆದಿಲ್ಲ. ಯಾವ ಅಂಶ ಇಟ್ಟುಕೊಂಡು ಎಚ್.ಕೆ. ಪಾಟೀಲ್ ಪತ್ರ ಬರೆದಿದ್ದಾರೆ ಗೊತ್ತಿಲ್ಲ. ಇಂದು ವೇಳೆ ತಪ್ಪಾಗಿದ್ದರೆ ಕಾನೂನು ಪ್ರಕಾರ ಕ್ರಮಕೈಗೊಳ್ಳಬೇಕು ಎಂದರು.

Vijaya Karnataka Web 7 Jun 2019, 4:00 pm
ಬೆಂಗಳೂರು ಗ್ರಾಮಾಂತರ: ಜಿಂದಾಲ್‌ ಗೆ ಅಕ್ರಮವಾಗಿ ಒಂದಿಂಚ್ಚು ಭೂಮಿಯನ್ನು ಹಂಚಿಕೆ ಮಾಡಿಲ್ಲ. ಕಾನೂನು ಪ್ರಕಾರ ಷರತ್ತಿನ ಮೇಲೆಯೇ ಭೂಮಿ ಮಂಜೂರು ಮಾಡಲಾಗಿದೆ. ಇದರಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಕಂದಾಯ ಸಚಿವ ಆರ್. ವಿ. ದೇಶಪಾಂಡೆ ತಿಳಿಸಿದರು.
Vijaya Karnataka Web R V Deshpande


ಜಿಲ್ಲೆಯ ಬರ ನಿರ್ವಹಣೆ ಹಾಗೂ ಪ್ರಗತಿ ಪರಿಶೀಲನೆ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ದೇಶಪಾಂಡೆ, ಜಿಂದಾಲ್‌ ಗೆ ಭೂಮಿ ಮಂಜೂರಾತಿ ಹಿಂದೆ ಯಾವುದೇ ಅವ್ಯವಹಾರ ನಡೆದಿಲ್ಲ. ಯಾವ ಅಂಶ ಇಟ್ಟುಕೊಂಡು ಎಚ್.ಕೆ. ಪಾಟೀಲ್ ಪತ್ರ ಬರೆದಿದ್ದಾರೆ ಗೊತ್ತಿಲ್ಲ. ಇಂದು ವೇಳೆ ತಪ್ಪಾಗಿದ್ದರೆ ಕಾನೂನು ಪ್ರಕಾರ ಕ್ರಮಕೈಗೊಳ್ಳಬೇಕು ಎಂದರು.

ಭೂಮಿ ಮಂಜೂರಾತಿಗೂ, ಮೈಸೂರು ಮಿನರಲ್ಸ್ ಬಾಡಿಗೆಗೆ ಏನೂ ಸಂಬಂಧವಿಲ್ಲ. ನ್ಯಾಯಯುತವಾಗಿ, ಕಾಯ್ದೆಯಂತೆ ಭೂಮಿ ನೀಡಲಾಗಿದೆ. ಅಷ್ಟಕ್ಕೂ ಬಿಜೆಪಿ ಸರಕಾರ ಇದ್ದಾಗಲೇ ದರ ನಿಗದಿಯಾಗಿತ್ತು ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತಂತೆ ಪ್ರತಿಕ್ರಿಯಿಸಿದ ಸಚಿವರು, ದಿನೇಶ್ ಗುಂಡೂರಾವ್ ಒಳ್ಳೆ ಕೆಲಸ ಮಾಡುತ್ತಿದ್ದಾರೆ. ಅವರ ಬದಲಾವಣೆ ಚಿಂತನೆ ಏನೂ ನಡೆದಿಲ್ಲ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ