ಆ್ಯಪ್ನಗರ

ಎಂಟಿಬಿ ನಮಕ್ ಹರಾಮ್: ಮಾಜಿ ಸ್ಪೀಕರ್ ರಮೇಶ್ ಕುಮಾರ್‌

ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಈಗ ಬಿಜೆಪಿ ಸೇರುವ ಹೊಸ್ತಿಲಲ್ಲಿರುವ ಹೊಸಕೋಟೆಯ ಅನರ್ಹ ಶಾಸಕ ಎಂಟಿಬಿ ನಾಗರಾಜ್‌ ವಿರುದ್ಧ ಮಾಜಿ ಸ್ಪೀಕರ್ ಕೆಆರ್‌ ರಮೇಶ್‌ ಕುಮಾರ್‌ ಕಿಡಿಕಾರಿದ್ದಾರೆ.

Vijaya Karnataka Web 21 Sep 2019, 2:39 pm
ಹೊಸಕೋಟೆ: ಅನರ್ಹಗೊಂಡಿರುವ ಶಾಸಕ ಎಂಟಿಬಿ ನಾಗರಾಜ್ ವಿರುದ್ಧ ಮಾಜಿ ಸ್ಪೀಕರ್‌ ಕೆಆರ್‌ ರಮೇಶ್ ಕುಮಾರ್‌ ಕಿಡಿಕಾರಿದ್ದಾರೆ.
Vijaya Karnataka Web ಕಾಂಗ್ರೆಸ್‌ ಸಮಾವೇಶ
ಕಾಂಗ್ರೆಸ್‌ ಸಮಾವೇಶ


ಹೊಸ ಕೋಟೆಯಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಇದೇ ಕ್ಷೇತ್ರದಲ್ಲಿ ಶಾಸಕರಾಗಿದ್ದ ಎಂಟಿಬಿ ನಾಗರಾಜ್‌ ವಿರುದ್ಧ ವಾಗ್ದಾಳಿ ನಡೆಸಿದರು.

ತಾಳಿ ಕಟ್ಟಿ ಮಾಡೋದು ಸಂಸಾರ, ತಾಳಿ ಒಬ್ಬರಿಗೆ ಕಟ್ಟಿ ಮತ್ತೊಬ್ಬರೊಂದಿಗೆ ಓಡಿಹೋಗುವುದನ್ನು ಏನನ್ನಬೇಕು. ಉರ್ದುವಿನಲ್ಲಿ ಅದಕ್ಕೆ ನಮಕ್ ಹರಾಮ್ ಎನ್ನುತ್ತಾರೆ ಎಂದು ಅನರ್ಹ ಶಾಸಕ ಎಂಟಿಬಿ ನಾಗರಾಜ್ ವಿರುದ್ಧ ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಾಗ್ದಾಳಿ ನಡೆಸಿದರು.

ಕೂಡಿಕೆ ಸಂಸಾರ ಸರಿಯಲ್ಲ. ಶಾಸ್ತ್ರೋತ್ರವಾಗಿ ಮದುವೆಯಾದರೆ ಸರಿ ಎಂದು ನಾನು ನನ್ನ ಕೆಲಸ ಮಾಡಿದ್ದೇನೆ. ಕೂಡಿಕೆ ಸಂಸಾರ ಬೇಕೋ, ಬೇಡವೋ ಎಂದು ಕ್ಷೇತ್ರದ ಮತದಾರರೇ ನಿರ್ಧರಿಸಬೇಕು ಎಂದರು.

ಯಡಿಯೂರಪ್ಪಗೆ ಬಹುಮತ ಇಲ್ಲ. ಅವರು ಬೇರೆಯವರ ಕಡೆಯಿಂದ ಬಂದ ಹೆಣ್ಣುಮಗಳನ್ನು ಎತ್ತಿಕೊಂಡು ಓಡಾಡುತ್ತಿದ್ದಾರೆ. ಈ ಉಪಚುನಾವಣೆ ಫಲಿತಾಂಶ ಹೆಚ್ಚು ಕಡಿಮೆ ಆದರೆ ವಾಪಸ್ ಬರುತ್ತಾರೆ. ಎಂದು ರಮೇಶ್‌ ಕುಮಾರ್‌ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ