ಆ್ಯಪ್ನಗರ

ಜಮೀನು ವಿವಾದ: ಮಹಿಳೆಯರ ಮೇಲೆ ಮಾರಾಣಾಂತಿಕ ಹಲ್ಲೆ

ವಿಕ ಸುದ್ದಿಲೋಕ ದೊಡ್ಡಬಳ್ಳಾಪುರ ತಮ್ಮ ಜಮೀನನ್ನ ಅಣ್ಣನೇ ಲಪಟಾಯಿಸಲು ಮುಂದಾಗಿದ್ದಾನೆಂದು ಆರೋಪಿಸಿ, ಪಶ್ನಿಸಲು ಮುಂದಾದ ತಮ್ಮನ ಕುಟುಂಬಸ್ಥರ ಮೇಲೆ ಮರಾಣಾಂತಿಕವಾಗಿ ಹಲ್ಲೆ ...

Vijaya Karnataka 24 Mar 2019, 5:00 am
ವಿಕ ಸುದ್ದಿಲೋಕ ದೊಡ್ಡಬಳ್ಳಾಪುರ
Vijaya Karnataka Web land dispute a deadly assault on women
ಜಮೀನು ವಿವಾದ: ಮಹಿಳೆಯರ ಮೇಲೆ ಮಾರಾಣಾಂತಿಕ ಹಲ್ಲೆ


ತಮ್ಮ ಜಮೀನನ್ನ ಅಣ್ಣನೇ ಲಪಟಾಯಿಸಲು ಮುಂದಾಗಿದ್ದಾನೆಂದು ಆರೋಪಿಸಿ, ಪಶ್ನಿಸಲು ಮುಂದಾದ ತಮ್ಮನ ಕುಟುಂಬಸ್ಥರ ಮೇಲೆ ಮರಾಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ನೇರಳಘಟ್ಟ ಗ್ರಾಮದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಮಾ.21ರಂದು ನಡೆದ ಘಟನೆಯಲ್ಲಿ ಪ್ರೇಮ ಹಾಗೂ ಮಗಳು ಕುಸುಮ ಹಲ್ಲೆಗೆ ಒಳಗಾಗಿದ್ದು, ಈ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಏನಿದು ಘಟನೆ; ನೇರಳಘಟ್ಟ ಗ್ರಾಮದ ರಮೇಶ್‌ ಹಾಗೂ ಮುನಿಯಪ್ಪ ಎಂಬುವವರು ಇಬ್ಬರು ಅಣ್ಣ ತಮ್ಮಂದಿರು. ಈ ಕುಟುಂಬಕ್ಕೆ ಸುಮಾರು 25 ಎಕರೆಗೂ ಅಧಿಕ ಜಮೀನಿದೆ ಎನ್ನಲಾಗಿದ್ದು ಈ ಜಮೀನಿನಲ್ಲಿ ಅಣ್ಣ ಮುನಿಯಪ್ಪ ಎರಡು ಎಕರೆ ಮಾತ್ರ ತಮ್ಮನಾದ ರಮೇಶ್‌ಗೆ ಕೊಟ್ಟಿದ್ದಾರೆ. ಇನ್ನುಳಿದ ಎಲ್ಲಾ ಜಮೀನು ಮೋಸ ಮಾಡಿ ತನ್ನ ಹೆಸರಿಗೆ ನೋಮದಣೆ ಮಾಡಿಸಿಕೊಂಡಿದ್ದಾನೆ. ಜೊತೆಗೆ ಉಳಿದ ಎರಡು ಎಕರೆ ಜಮೀನು ಕೂಡ ಬೇರೆಯವರಿಗೆ ಅಗ್ರಿಮೆಂಟ್‌ ಮಾಡಿಕೊಟ್ಟಿದ್ದು, ವಿಚಾರ ತಿಳಿದ ರಮೇಶ್‌ ಕುಟುಂಬ ತನ್ನ ಅಣ್ಣನ ಬಳಿ ಕೇಳಲು ಹೋಗಿದ್ದಾರೆ. ಈ ವೇಳೆ ತಮ್ಮನ ಹೆಂಡತಿ ಪ್ರೇಮ ಹಾಗೂ ಮಗಳು ಕುಸುಮ ಮೇಲೆ ಮುನಿಯಪ್ಪ, ನಾರಯಣಮ್ಮ, ವಿಶ್ವನಾಥ್‌ ಎಂಬುವವರು ಹುಲ್ಲು ಕೊಯ್ಯುವ ಕುಡಗೋಲು ಹಾಗೂ ದೊಣ್ಣೆಯಿಂದ ಮರಾಣಾಂತಿಕವಾಗಿ ಹಲ್ಲೆಯನ್ನ ನಡೆಸಿದ್ದಾರೆ ಎಂದು ದೂರುದಾರರಾದ ಪ್ರೇಮ ಮತ್ತು ತಮ್ಮ ಮಗಳಾದ ಕುಸುಮ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

ಹಲ್ಲೆಗೊಳಗಾದವರನ್ನ ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದ್ದು, ಚಿಕಿತ್ಸೆಯನ್ನ ನೀಡಲಾಗುತ್ತಿದೆ. ಈ ಕುರಿತು ಪೊಲೀಸ್‌ ಇಲಾಖೆ ತಪಿತಸ್ಥರ ಮೇಲೆ ಕೂಡಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಹಲ್ಲೆಗೊಳಗಾದ ಪ್ರೇಮ ಮತ್ತು ತನ್ನ ಮಗಳಾದ ಕುಸುಮ ಆಗ್ರಹಿಸಿದ್ದಾರೆ.

ಫೋಟೋ;23ಡಿಬಿ2; ಹಲ್ಲೆಗೊಳಗಾದ ಪ್ರೇಮ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಪಡೆಯುತ್ತಿರುವುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ