ಆ್ಯಪ್ನಗರ

ಡೀಸೆಲ್‌ ಕಳ್ಳನ ಹಿಡಿದು ಜೀವ ಕಳೆದುಕೊಂಡ ಚಾಲಕ

ಹೊಸಕೋಟೆ ತಾಲೂಕಿನ ಬೀರಹಳ್ಳಿಯಲ್ಲಿ ಲಾರಿ ಚಾಲಕರೊಬ್ಬರು ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೊಲೆಯಾದ ವ್ಯಕ್ತಿ ಆಂದ್ರಪ್ರದೇಶದ ಚಿತ್ತೂರು ಜಿಲ್ಲೆ ಪುಂಗನೂರು ಬಳಿಯ ಮುತ್ತಕೂರು ನಿವಾಸಿ ಎಂದು ಪೊಲೀಸರು ತಿಳಿಸಿದ್ದಾರೆ.

Vijaya Karnataka Web 27 Jul 2018, 2:33 pm
ಸೂಲಿಬೆಲೆ: ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಬೀರಹಳ್ಳಿಯಲ್ಲಿ ಲಾರಿ ಚಾಲಕರೊಬ್ಬರು ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೊಲೆಯಾದ ವ್ಯಕ್ತಿ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆ ಪುಂಗನೂರು ಬಳಿಯ ಮುತ್ತಕೂರು ನಿವಾಸಿ ಎಂದು ಪೊಲೀಸರು ತಿಳಿಸಿದ್ದಾರೆ.
Vijaya Karnataka Web murder2


ನಂದಗುಡಿ ಹೋಬಳಿ ಬೀರಹಳ್ಳಿಯಲ್ಲಿ ಚನ್ನಕೇಶವ ಸ್ಟೋನ್ ಜಲ್ಲಿ ಕ್ರಷರ್‌ನಲ್ಲಿ ಕಳೆದ ಒಂದು ವರ್ಷ ಎರಡು ತಿಂಗಳಿಂದ ಶಂಕರ್ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದರು.

2 ತಿಂಗಳ ಹಿಂದೆ ಚಿಂತಾಮಣಿ ತಾಲೂಕು ಬಟ್ಲಹಳ್ಳಿ ಗ್ರಾಮದ ಶ್ರೀನಿವಾಸ್ ರೆಡ್ಡಿ ಕ್ರಷರ್ನಲ್ಲಿ ಕಂಪನಿ ಇನ್ಜಾರ್ಜ್ ಕೆಲಸಕ್ಕೆಸೇರಿಕೊಂಡಿದ್ದ. ಈತ ಶಂಕರ್ ಓಡಿಸುತ್ತಿದ್ದ ಲಾರಿಯಲ್ಲಿ ಡೀಸೆಲ್‌ ಕದಿಯುತ್ತಿದ್ದಾಗ ಶಂಕರ್ ಕೈಗೆ ಸಿಕ್ಕಿ ಬಿದ್ದಿದ್ದ. ಈ ವಿಚಾರವನ್ನು ಶಂಕರ್ ಮಾಲೀಕರಿಗೆ ತಿಳಿಸಿದ ಕಾರಣ ಮಾಲೀಕರು ಶ್ರೀನಿವಾಸ್ ರೆಡ್ಡಿಯನ್ನು ಕೆಲಸದಿಂದ ತೆಗೆದು ಹಾಕಿದ್ದರು.ಇದರಿಂದ ಕುಪಿತಗೊಂಡ ಶ್ರೀನಿವಾಸ ರೆಡ್ಡಿ ತನ್ನ ಇತರ ಸಹಚರರೊಂದಿಗೆ ಗುರುವಾರ ರಾತ್ರಿ ಸುಮಾರು 9ಗಂಟೆ ಸಮಯದಲ್ಲಿ ಕ್ರಷರ್ ಕಂಪನಿಯ ಒಳಗೆ ಇದ್ದ ಶಂಕರನ್ನು ಹೊರಗೆ ಕರೆದು ಮಾರಾಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದಾನೆ ಎಂದು ಅರೋಪಿಸಿ ಕೊಲೆಯಾದ ಶಂಕರ್ ಬಾಮೈದ ಪವನ್ ನಂದಗುಡಿ ಪೊಲೀಸರಿಗೆ ದೂರು ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ