ಆ್ಯಪ್ನಗರ

ಮಾಕೇನಹಳ್ಳಿಯಲ್ಲಿ ವಿವಾಹಿತ ಮಹಿಳೆಯ ಬಾಯಿಗೆ ಬಟ್ಟೆ ತುರುಕಿ ಮಾನ ಭಂಗಕ್ಕೆ ಯತ್ನ

ಪ್ರತಿರೋಧ ಒಡ್ಡಿ, ಕಿರುಚಾಡಿದ ಮಹಿಳೆಯನ್ನು ಕತ್ತು ಹಿಸುಕಿ ಹಲ್ಲೆ ನಡೆಸಿದ ಆರೋಪಿಗೆ ಸ್ಥಳೀಯರಿಂದ ಗೂಸಾ. ಪೊಲೀಸರ ವಶದಲ್ಲಿರುವ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿ.

Vijaya Karnataka Web 19 Feb 2020, 10:15 am
ಬೆಂಗಳೂರು ಗ್ರಾಮಾಂತರ: ಮಾಕೇನಹಳ್ಳಿ ಗ್ರಾಮದ ಬಳಿ ಗಾರ್ಮೆಂಟ್‌ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ಮಹಿಳೆಯನ್ನು ಅಡ್ಡ ಗಟ್ಟಿ ಅತ್ಯಾಚಾರಕ್ಕೆ ಪ್ರಯತ್ನಿಸಿದ ಘಟನೆ ಸೋಮವಾರ ರಾತ್ರಿ ನಡೆದಿದೆ.
Vijaya Karnataka Web Sexual Harasment


ಮಾಕೇನಹಳ್ಳಿ ಗ್ರಾಮದ ರಂಗನಾಥ (55) ಎಂಬವರು ಜಿನ್ನಯ್ಯನಪಾಳ್ಯದ ವಿವಾಹಿತ ಮಹಿಳೆಯನ್ನು ಅಡ್ಡಗಟ್ಟಿ ಆಕೆಯನ್ನು ತಬ್ಬಿಕೊಂಡು ಮೈಮೇಲಿನ ಬಟ್ಟೆ ಹರಿದು ಹಾಕಿ ಬಾಯಿಗೆ ಬಟ್ಟೆ ತುರುಕಿ ಮಾನ ಭಂಗಕ್ಕೆ ಮುಂದಾಗಿದ್ದಾರೆ.

ಆಗ ಆತನ ಮುಖವನ್ನು ಮೊಬೈಲ್‌ನಿಂದ ಸೆರೆ ಹಿಡಿಯುವಾಗ ಆತ ಫೋನ್‌ ಅನ್ನು ಕಿತ್ತು ಬಿಸಾಕಿ ಮಚ್ಚು ತೋರಿಸಿ ಕೂಗಿಕೊಂಡರೆ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡುವುದಾಗಿ ಬೆದರಿಸಿದ್ದಾನೆ. ಈ ವೇಳೆ ಮಹಿಳೆ ಕಿರುಚಿ ಕೊಂಡಿದ್ದು, ಈ ವೇಳೆ ರಂಗನಾಥ್‌ ಮಹಿಳೆಯ ಕತ್ತು ಹಿಸುಕಿದ್ದಾನೆ. ಈ ವೇಳೆ ಮಹಿಳೆ ಜೋರಾಗಿ ಕಿರುಚಿಕೊಂಡಾಗ ಊರಿನಲ್ಲಿ ಮೇಕೆ ಕಾಯುವ ನಾಗಮ್ಮ ಬಂದು ಕಾಮುಕ ರಂಗನಾಥನಿಗೆ ಬೈದಿದ್ದಾಳೆ.

ನರಕಯಾತನೆಯಿಂದ 24 ಗೆಳತಿಯರ ಕಾಪಾಡಿದ ಬಾಲೆಯ ಕರುಣಾಜನಕ ಕಥೆ

ಇವರ ಗಲಾಟೆ ಕೇಳಿಸಿ ಕೊಂಡ ಗ್ರಾಮಸ್ಥರು ಕೂಡಲೇ ಸ್ಥಳಕ್ಕೆ ದೌಡಾಯಿಸಿದ್ದಾರೆ. ಜನರು ಬರುತ್ತಿರುವುದನ್ನು ನೋಡಿದ ಕಾಮುಕ ರಂಗನಾಥ್‌ ಸ್ಥಳದಿಂದ ಪರಾರಿಯಾಗುವ ವೇಳೆ ಜನ ಆತನನ್ನು ಹಿಡಿದು ತದುಕಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಸಂತ್ರಸ್ಥೆ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದಾಗಿ ಸಬ್‌ ಇನ್ಸ್‌ಪೆಕ್ಟರ್‌ ವಸಂತ ತಿಳಿಸಿದರು.

ಮಕ್ಕಳ ಮೇಲೆ ನಡೆಯುವ ದೌರ್ಜನ್ಯಗಳು ಹೆಚ್ಚುತ್ತಿವೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ