ಆ್ಯಪ್ನಗರ

ರಾಜ್ಯದಲ್ಲಿ ಬಡವರ ಸುಲಿಗೆಗೆ ಬೀಳದ ಕಡಿವಾಣ | ಚೆಕ್‌, ಬಾಂಡ್‌ ಪೇಪರ್‌ ಪಡೆದು ನಡೀತಿದೆ ಮೀಟರ್ ಬಡ್ಡಿ ದಂಧೆ..!

ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದ ನೇಕಾರರು, ಸಣ್ಣ ವ್ಯಾಪಾರಿಗಳು ಕಳೆದ ವರ್ಷ ಕುಟುಂಬ ನಿರ್ವಹಣೆಗೆಂದು ಲಕ್ಷಾಂತರ ರೂ. ಸಾಲ ಪಡೆದಿದ್ದು, ಸದ್ಯ ಬಡ್ಡಿ ಕಟ್ಟಲಾಗದೆ ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಕೆಲವೆಡೆ ಮೀಟರ್‌ ಬಡ್ಡಿ ದಂಧೆಯ ತೀವ್ರತೆಗೆ ಸಾವಿನ ಪ್ರಕರಣಗಳು ವರದಿಯಾಗುತ್ತಿದೆ.

Vijaya Karnataka Web 5 Feb 2021, 7:41 am

ಹೈಲೈಟ್ಸ್‌:

  • ರಾಜ್ಯದೆಲ್ಲೆಡೆ ಅವ್ಯಾಹತವಾಗಿ ನಡೀತಿದೆ ಮೀಟರ್‌ಬಡ್ಡಿ ದಂಧೆ
  • ದುಪ್ಪಟ್ಟು ಬಡ್ಡಿ ಹೆಸರಲ್ಲಿ ಬಡವರ ಪ್ರಾಣ ಹಿಂಡುತ್ತಿವೆ ಸಾಲನೀಡುವ ಸಂಘ ಸಂಸ್ಥೆಗಳು
  • ಬಡ್ಡಿ ಕಟ್ಟಲಾಗದೆ ಸಾವಿನ ಕದ ತಟ್ಟುತ್ತಿದ್ದವರು ಜನಸಾಮಾನ್ಯರು
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Man loses Rs 92,000 to online liquor fraud.
ನಾಗರಾಜು ಅಶ್ವತ್ಥ್‌
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಲಾಕ್‌ಡೌನ್‌ ಬಳಿಕವಂತೂ ಮೀಟರ್‌ಬಡ್ಡಿ ದಂಧೆಗೆ ಜೀವ ಬಂದಿದೆ. ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದ ನೇಕಾರರು, ಸಣ್ಣ ವ್ಯಾಪಾರಿಗಳು ಕಳೆದ ವರ್ಷ ಕುಟುಂಬ ನಿರ್ವಹಣೆಗೆಂದು ಲಕ್ಷಾಂತರ ರೂ. ಸಾಲ ಪಡೆದಿದ್ದು, ಸದ್ಯ ಬಡ್ಡಿ ಕಟ್ಟಲಾಗದೆ ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಕೆಲವೆಡೆ ಮೀಟರ್‌ ಬಡ್ಡಿ ದಂಧೆಯ ತೀವ್ರತೆಗೆ ಸಾವಿನ ಪ್ರಕರಣಗಳು ವರದಿಯಾಗುತ್ತಿದ್ದು, ಸರಕಾರ ದಂಧೆಗೆ ಕಡಿವಾಣ ಹಾಕಬೇಕಿದೆ.
ಮೀಟರ್‌ಬಡ್ಡಿ ಜೀವಂತ: ರಾಜ್ಯದಲ್ಲಿ ಸಾಮಾನ್ಯವರಿಗೆ ನೆರವಾಗಲೆಂದು ‘ಬಡವರ ಬಂಧು’ ಯೋಜನೆ ಮೂಲಕ 2-10 ಸಾವಿರ ರೂ. ಸಾಲ ಸೌಲಭ್ಯವಿದೆ. ಆದರೆ, ಡಿಸಿಸಿ ಬ್ಯಾಂಕ್‌ ಸುತ್ತ ದಾಖಲೆ, ಅರ್ಜಿ ಹಿಡಿದು ಅಲೆಯುವ ತಲೆ ನೋವೇಕೆ ಎಂದು ಸಣ್ಣ ವ್ಯಾಪಾರಿಗಳು ಬಡ್ಡಿ ಹಣ ಪಡೆಯುತ್ತಿದ್ದಾರೆ. ಇದಕ್ಕೆ ಜಾಗೃತಿಯ ಕೊರತೆಯಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಬಡ್ಡಿ ದಂಧೆಕೋರರು ಎಪಿಎಂಸಿ, ಮಾರುಕಟ್ಟೆಗಳ ಬೀದಿ ಬದಿ ವ್ಯಾಪಾರಿಗಳಿಗೆ ಬೆಳಗ್ಗೆ 5 ಗಂಟೆಗೆ ಸಾಲ ನೀಡುತ್ತಾರೆ. ಬೆಳಗ್ಗೆ ಕೊಡುವಾಗಲೇ ಸಾಲದಲ್ಲಿ ಶೇ.10-15 ಬಡ್ಡಿ ದರ ಕಡಿತಗೊಳಿಸಿ ನೀಡಿ, ಸಂಜೆ ಮರಳಿ ವಾಪಸ್‌ ಪಡೆಯುತ್ತಾರೆ. ಜತೆಗೆ, ನೇಕಾರರು, ಸಣ್ಣ ವ್ಯಾಪಾರಸ್ಥರಿಗೆ ಮಾಸಿಕ ಶೇ.10 ಬಡ್ಡಿ ದರಕ್ಕೆ ಸಾಲ ನೀಡುವ ಫೈನಾನ್ಸ್‌ ಪದ್ಧತಿ ಜೀವಂತವಾಗಿದೆ.
ಗುಡ್‌ನ್ಯೂಸ್‌..! ಚಿನ್ನದ ಬೆಲೆಯಲ್ಲಿ ಕಳೆದ ನಾಲ್ಕು ದಿನದಲ್ಲಿ ಭಾರೀ ಇಳಿಕೆ..! ಇಲ್ಲಿದೆ ಇಂದಿನ ದರವಿವರ
ಖಾಕಿಯ ಶ್ರೀರಕ್ಷೆ?: ರಾಜ್ಯದಲ್ಲಿ ಬಡ್ಡಿ ದಂಧೆಕೋರರ ರಕ್ಷಣೆಗೆ ಖಾಕಿ ನಿಂತಿದೆ ಎನ್ನುವ ಆರೋಪಗಳಿವೆ. ಇಲಾಖೆಯ ಸಹಾಯವಾಣಿ ಇದ್ದರೂ ದೂರುಗಳು ಮಾತ್ರ ಠಾಣೆ ಮೆಟ್ಟಿಲೇರುತ್ತಿಲ್ಲ. ಇದಕ್ಕೆ ಕಾರಣ ಪೊಲೀಸ್‌ ಇಲಾಖೆಯ ಸಿಬ್ಬಂದಿಯೇ ಬಡ್ಡಿ ದಂಧೆಯಲ್ಲಿ ತೊಡಗಿರುವ ಗುಮಾನಿಗಳಿಂದಾಗಿ ಜನರು ಠಾಣೆಗಳತ್ತ ಮುಖ ಮಾಡುತ್ತಿಲ್ಲ. ಇದನ್ನೆ ಬಂಡವಾಳವಾಗಿಸಿಕೊಳ್ಳುವ ಕಾರ್ಪೊರೇಟರ್‌ಗಳು, ರಾಜಕಾರಣಿಗಳು, ಫೈನಾನ್ಸ್‌ ಕಂಪನಿಗಳು ಮನಸೋ ಇಚ್ಛೆ ಬಡ್ಡಿ ದರ ಫಿಕ್ಸ್‌ ಮಾಡಿ ಜನರನ್ನು ಸುಲಿಗೆ ಮಾಡುತ್ತಿರುವುದು ವಾಸ್ತವ.
10 ಸಾವಿರ ಹೆಕ್ಟೇರ್‌ನಲ್ಲಿ ಬೆಳೆ, ಮೇಲಕ್ಕೆ ಏರದ ಬೆಲೆ..! ಅರಿಶಿಣ ಬೆಳೆದ ರೈತರಿಗೆ ಈಗ ಕೈ ಸುಡುವ ಆತಂಕ..!
ದಂಧೆಗೆ ಬಲಿ: ರಾಜ್ಯದಲ್ಲಿ ಅನೇಕರು ಮೀಟರ್‌ ಬಡ್ಡಿಗೆ ಬೇಸತ್ತು ಸಾವಿನ ಕದ ತಟ್ಟುತ್ತಿದ್ದಾರೆ. ಜ.9ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಗ್ರಾಮದಲ್ಲಿ ಯುವಕ ರಾಘವೇಂದ್ರ ಮೀಟರ್‌ ಬಡ್ಡಿ ದಂಧೆಗೆ ಸಿಲುಕಿ ಸೆಲ್ಫಿ ವೀಡಿಯೊ ಮಾಡಿ ಸಾವಿಗೆ ಶರಣಾಗಿದ್ದ. ತಾನು ಪಡೆದಿದ್ದ 8 ಲಕ್ಷ ರೂ. ಸಾಲಕ್ಕೆ ಲಕ್ಷಾಂತರ ರೂ. ಬಡ್ಡಿ ಸೇರಿಸಿ ಕೊಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಸಿದ್ದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಯುವಕ ವೀಡಿಯೊದಲ್ಲಿ ತಿಳಿಸಿದ್ದ. ಇದೇ ರೀತಿಯ ಪ್ರಕರಣಗಳು ರಾಜ್ಯದಲ್ಲಿ ದಾಖಲಾಗುತ್ತಿವೆ.
ಮೀಟರ್‌ ಬಡ್ಡಿ ಕಾನೂನು ಬಾಹಿರ. ಚೆಕ್‌ ಪಡೆಯುವುದು, ಆಸ್ತಿ ಬರೆಸಿಕೊಳ್ಳುವುದು ಅಕ್ರಮ. ನೊಂದವರು ಕೂಡಲೇ ಆಯಾ ವ್ಯಾಪ್ತಿಯ ಪೊಲೀಸ್‌ ಠಾಣೆಗಳಲ್ಲಿ ದೂರು ದಾಖಲಿಸಿ.
ರವಿ ಡಿ ಚೆನ್ನಣ್ಣನವರ್‌ | ಎಸ್ಪಿ, ಬೆಂ. ಗ್ರಾಮಾಂತರ

ಮೀಟರ್‌ ಬಡ್ಡಿ ದಂಧೆ ತಡೆಗೆ ಪೊಲೀಸರು ದಾಳಿಗಳನ್ನು ನಡೆಸುತ್ತಿದ್ದು, ಮತ್ತಷ್ಟು ಕ್ರಮಕ್ಕೆ ಸೂಚಿಸಲಾಗುವುದು. ಜತೆಗೆ, ಬಡವರ ಬಂಧು ಸಾಲ ಸೌಲಭ್ಯ ನಿರೀಕ್ಷಿತ ಮಟ್ಟದಲ್ಲಿ ಜನರನ್ನು ಮುಟ್ಟಲು ರಾಜ್ಯದ ಎಲ್ಲಾ ಡಿಸಿಸಿ ಬ್ಯಾಂಕ್‌ಗಳಿಗೆ ಸೂಚಿಸಲಾಗಿದೆ.
ಸೋಮಶೇಖರ್‌ ಎಸ್‌.ಟಿ | ಸಹಕಾರ ಸಚಿವ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ