ಆ್ಯಪ್ನಗರ

ಅಭಿವೃದ್ಧಿ ಮಾಡುವಲ್ಲಿ ಸಂಸದ ಮೊಯ್ಲಿ ವಿಫಲ: ಬಿ.ಎನ್‌ ಬಚ್ಚೇಗೌಡ

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವನ್ನು ಅಭಿವೃದ್ಧಿಗೊಳಿಸುವಲ್ಲಿ ಸಂಸದ ಮೊಯ್ಲಿ ವಿಫಲರಾಗಿದ್ದು, ಸುಳ್ಳು ಹೇಳುವುದರಲ್ಲಿ ಅವರಿಗೆ ಭಾರತರತ್ನ ನೀಡಬೇಕು ಮಾಜಿ ಸಚಿವ ಬಿ.ಎನ್‌ ಬಚ್ಚೇಗೌಡ ಟೀಕಿಸಿದರು.

Vijaya Karnataka 11 Jan 2019, 5:00 am
ನೆಲಮಂಗಲ : ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವನ್ನು ಅಭಿವೃದ್ಧಿಗೊಳಿಸುವಲ್ಲಿ ಸಂಸದ ಮೊಯ್ಲಿ ವಿಫಲರಾಗಿದ್ದು, ಸುಳ್ಳು ಹೇಳುವುದರಲ್ಲಿ ಅವರಿಗೆ ಭಾರತರತ್ನ ನೀಡಬೇಕು ಮಾಜಿ ಸಚಿವ ಬಿ.ಎನ್‌ ಬಚ್ಚೇಗೌಡ ಟೀಕಿಸಿದರು.
Vijaya Karnataka Web mp moily fails to develop bn bachchegowda
ಅಭಿವೃದ್ಧಿ ಮಾಡುವಲ್ಲಿ ಸಂಸದ ಮೊಯ್ಲಿ ವಿಫಲ: ಬಿ.ಎನ್‌ ಬಚ್ಚೇಗೌಡ


ತಾಲೂಕಿನ ಭವಾನಿ ಶಂಕರ ಹೋಟಲ್‌ ಸಭಾಂಗಣದಲ್ಲಿ ಬಿಜೆಪಿ ತಾಲೂಕು ಘಟಕದಿಂದ ಆಯೋಜಿಸಲಾಗಿದ್ದ ಲೋಕಸಭಾ ಚುನಾವಣೆ ಪೂರ್ವಸಿದ್ದತಾ ಸಭೆಯಲ್ಲಿ ಮಾತನಾಡಿ ಈ ಹಿಂದಿನ ಚುನಾವಣೆಯಲ್ಲಿ ಕೆಲವೇ ಮತಗಳಿಂದ ಸೋಲಬೇಕಾಯಿತು. ಈ ಪರಿಣಾಮ ಚಿಕ್ಕಬಳ್ಳಾಪುರದ ಅಭಿವೃದ್ಧಿ ಕಾಣದಂತಾಯಿತು. ಮೊಯ್ಲಿ ಬಿಟ್ಟ ಸುಳ್ಳುಗಳ ಸರಮಾಲೆಯಲ್ಲಿ ಜನ ಸಿಲುಕದೆ ಸತ್ಯಾಂಶ ಮನವರಿಕೆ ಮಾಡಿಕೊಳ್ಳಬೇಕು, ದೇಶದ ನಂಬರ್‌ 1 ಸುಳ್ಳುಗಾರ ಎಂದು ಮೂದಲಿಸಿದರು.

ಚಿಕ್ಕಬಳ್ಳಾಪುರ ಟಿಕೆಟ್‌ ಆಕಾಂಕ್ಷಿ: ಪಕ್ಷದ ಕಾರ್ಯಕರ್ತರು ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರರ್ಕಾರ ಜನರಿಗಾಗಿ ತಂದಿರುವ ಜನಪರ ಯೋಜನೆಗಳನ್ನು ಪ್ರತಿಯೊಂದು ಮನೆಯ ಸದಸ್ಯರಿಗೆ ತಿಳಿಸಬೇಕು. ಈ ಭಾರಿ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಆಕಾಂಕ್ಷಿಯಾಗಿದ್ದೇನೆ. ವರಿಷ್ಠರು ಟಿಕೇಟ್‌ ನೀಡಿದರೆ ಸ್ಪರ್ಧಿಸಿ ಅಭಿವೃದ್ಧಿ , ಪಕ್ಷ ಸಂಘಟನೆಗೆ ಒತ್ತು ನೀಡುತ್ತೇನೆ ಎಂದರು.

ಎತ್ತಿನಹೊಳೆ ಹೆಸರಲ್ಲಿ ಹಣ ಲೂಟಿ: ಯಲಹಂಕ ಶಾಸಕ ಎಸ್‌.ಆರ್‌ ವಿಶ್ವನಾಥ್‌ ಮಾತನಾಡಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಸಂಸದರಿಂದ ಯಾವುದೇ ಅಭಿವೃದ್ಧಿ ಕೆಲಸಗಳು ನಡೆದಿಲ್ಲ, ಎತ್ತಿನಹೊಳೆ ಯೋಜನೆ ಎನ್ನುತ್ತಾ ಹತ್ತು ವರ್ಷದಿಂದ ಓಡಾಡಿಕೊಂಡಿರುವ ವೀರಪ್ಪ ಮೊಯ್ಲಿ ಹಣವನ್ನು ಲೂಟಿಮಾಡಲು ಮುಂದಾಗಿದ್ದಾರೆ, ಇನ್ನೂ ಐದು ವರ್ಷಗಳಾದರೂ ಎತ್ತಿನಹೊಳೆ ಯೋಜನೆ ಪೂರ್ಣವಾಗಿ ಜನರಿಗೆ ಅನುಕೂಲವಾಗುವುದಿಲ್ಲ, ಮತ್ತೆ ಅವರನ್ನು ಆಯ್ಕೆಮಾಡದೆ ಎಚ್ಚರಿಕೆ ವಹಿಸಬೇಕು. ಈ ಬಾರಿ ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ತಾಲೂಕಿನ ಎಲ್ಲಾ ಮುಖಂಡರು ವೈಮನಸ್ಸು ಮರೆತು ನರೇಂದ್ರ ಮೋದಿಯವರಿಗಾಗಿ ಕೆಲಸಮಾಡಬೇಕು ಎಂದರು.

ಗುಂಪುಗಾರಿಕೆ ನಿರ್ಮೂಲನೆಗೆ ಮುಂದಾಗಿ: ಬೆಂಗಳೂರು ಗ್ರಾಮಾಂತರ ಬಿಜೆಪಿ ಜಿಲ್ಲಾಧ್ಯಕ್ಷ ರಾಜಣ್ಣ ಮಾತನಾಡಿ ತಾಲೂಕಿನ ಬಿಜೆಪಿಯಲ್ಲಿ ಗುಂಪುಗಾರಿಕೆ ಹೆಚ್ಚಾಗಿದ್ದು ಇದನ್ನು ನಿರ್ಮೂಲನೆ ಮಾಡಲು ಮುಂದಾಗಬೇಕು, ಅದನ್ನು ಬಿಟ್ಟು ಗುಂಪುಗಾರಿಕೆ ಮುಂದುವರೆಸಿದರೆ ಮುಂದಿನ ಪರಿಣಾಮ ಅನುಭವಿಸಬೇಕು. ಎಲ್ಲಾ ಬೇಸರಗಳನ್ನು ಮರೆತು ಪಕ್ಷ ಸಂಘಟನೆ ಮಾಡಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅತಿಹೆಚ್ಚು ಮತವನ್ನು ನೀಡುವ ಕ್ಷೇತ್ರವನ್ನಾಗಿ ಮಾಡಬೇಕು ಎಂದರು.

ಸಂದರ್ಭದಲ್ಲಿ ಬಿಜೆಪಿ ತಾಲೂಕುಅಧ್ಯಕ್ಷ ಲೋಕೇಶ್‌, ಜಿಲ್ಲಾಪ್ರಧಾನ ಕಾರ್ಯದರ್ಶಿ ರಾಮಕೃಷ್ಣಪ್ಪ, ರಾಜ್ಯಕಾರ‍್ಯಕಾರಣಿ ಸದಸ್ಯ ಸತೀಶ್‌, ತಾಲೂಕುಉಪಾಧ್ಯಕ್ಷ ಆಂಜನಮೂರ್ತಿ, ಪ್ರಧಾನಕಾರ್ಯದರ್ಶಿ ಎಂ.ಎಂ ಗೌಡ್ರು, ಭವಾನಿಶಂಕರ್‌ ಬೈರೇಗೌಡ, ಎಸ್ಸಿ ಮೋರ್ಚ್‌ ಉಪಾಧ್ಯಕ್ಷ ಎಂ.ಎನ್‌ ರಾಮು, ಪುರಸಭೆ ಸದಸ್ಯ ಕೇಶವ, ಮಹಿಳಾ ಘಟಕದ ರಾಜಮ್ಮ, ಸವಿತಾ, ಅನಿತಾ, ಸೌಮ್ಯ, ಸ್ಲಂ ಮೋರ್ಚ ಜಿಲ್ಲಾಧ್ಯಕ್ಷ ರವಿ, ಕಲೆ ಮತ್ತು ಸಾಂಸ್ಕೃತಿಕ ಘಟಕದ ಸಂಚಾಲಕಿ ಅನಿತಾ, ಯುವಬ್ರಿಗೇಡ್‌ ತಾಲೂಕು ಸಂಚಾಲಕ ಮೋಹನ್‌, ಶ್ರೀನಿವಾಸ್‌, ಆನಂದ್‌, ರುದ್ರೇಶ್‌, ಮಣಿ ಮತ್ತಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ