ಆ್ಯಪ್ನಗರ

ಕಾಂಗ್ರೆಸ್ ಬೆನ್ನಿಗೆ ಚೂರಿ ಹಾಕಿ ಹೋದ ಎಂಟಿಬಿ ಒಬ್ಬ ದ್ರೋಹಿ: ಸಿದ್ದರಾಮಯ್ಯ ಆಕ್ರೋಶ

ಕಾಂಗ್ರೆಸ್ ಬೆನ್ನಿಗೆ ಚೂರಿ ಹಾಕಿ ಎಂಟಿಬಿ, ಈಗ ಬಿಜೆಪಿಗೆ ಹೋಗಿದ್ದಾರೆ, ಅವನೊಬ್ಬ ದ್ರೋಹಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು. ಹೊಸಕೋಟೆಯಲ್ಲಿ ತೆರೆದ ವಾಹನದಲ್ಲಿ ರ‍್ಯಾಲಿ ನಡೆಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

Vijaya Karnataka Web 16 Nov 2019, 4:16 pm
ಹೊಸಕೋಟೆ: ಕಾಂಗ್ರೆಸ್ ಬೆನ್ನಿಗೆ ಚೂರಿ ಹಾಕಿರುವ ಎಂಟಿಬಿ, ಈಗ ಬಿಜೆಪಿಗೆ ಹೋಗಿದ್ದಾರೆ, ಅವನೊಬ್ಬ ದ್ರೋಹಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೊಸಕೋಟೆ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಯಾಗಿ ಪದ್ಮಾವತಿ ಸುರೇಶ್ ನಾಮಪತ್ರ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಹೊಸಕೋಟೆ ಕೆಇಬಿ ಸರ್ಕಲ್ ನಿಂದ ಮೆರವಣೆಯಲ್ಲಿ ತೆರೆದ ವಾಹನದಲ್ಲಿ ರ‍್ಯಾಲಿ ನಡೆಸಿ ಕಾರ್ಯಕರ್ತರನ್ನ ಉದ್ದೇಶಿಸಿ ಮಾತನಾಡಿದರು.
Vijaya Karnataka Web MTB Nagaraj
ಎಂಟಿಬಿ ನಾಗರಾಜ್‌


ಈಗಿನ ಸಮಾಜವಾದಿಗಳಿಗೆಲ್ಲಾ ಫಾರಿನ್ ಸ್ಕಾಚ್ ಬೇಕು! ಸಿ.ಟಿ. ರವಿ ಟಾಂಗ್ ಕೊಟ್ಟಿದ್ದು ಯಾರಿಗೆ ಗೊತ್ತಾ?

ಕಾಂಗ್ರೆಸ್ ಬೆನ್ನಿಗೆ ಚೂರಿ ಹಾಕಿ ಎಂಟಿಬಿ ಬಿಜೆಪಿಗೆ ಹೋಗಿದ್ದಾರೆ, ಅವನೊಬ್ಬ ದ್ರೋಹಿ,ಮಾತು ಎತ್ತಿದರೆ ಸಾಕು ನನ್ನ ಎದೆಯಲ್ಲಿ ಸಿದ್ದರಾಮಯ್ಯ ಇದ್ದಾರೆ ಅಂತಿದ್ರು. ಆದರೆ, ಈಗ ಎದೆಯಲ್ಲಿ ಯಡಿಯೂರಪ್ಪ ಅವರನ್ನ ಇಟ್ಟುಕೊಂಡವ್ನಂತೆ ಎಂದು ಏಕವಚನದಲ್ಲಿಯೇ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

'ಕೈ' ಅಭ್ಯರ್ಥಿಗಳಿಗೆ ಟಿಕೆಟ್ ಸಂಕಟ, ಆಯ್ಕೆ ಸಮಿತಿಯಲ್ಲಿ ಬಣಗಳ ಬಡಿದಾಟ! ಹೈಕಮಾಂಡ್ ಅಂಗಳಕ್ಕೆ ದೂರು

ಎಂಟಿಬಿಯನ್ನ ಸಚಿವರನ್ನಾಗಿ ಮಾಡಿದ್ದೆ. ನಿಗಮ ಮಂಡಳಿ ಅಧ್ಯಕ್ಷರನ್ನಾಗಿಯೂ ಮಾಡಿದ್ದೆ.ಕೇಳಿದಾಗ ಎಲ್ಲ ಅನುದಾನವನ್ನ ಕೊಟ್ಟೆ. ಆದರೆ ಈಗ ನನ್ನ ಬಗ್ಗೆನೇ ಮಾತಾಡುತ್ತಾನೆ. ನೀವು ಸ್ವಾಭಿಮಾನಿಗಳಾದ್ರೆ ಎಂಟಿಬಿಯನ್ನ ಸೋಲಿಸಿ ಎಂದ ಸಿದ್ದರಾಮಯ್ಯ ಕ್ಷೇತ್ರದ ಜನತೆಯಲ್ಲಿ ಕೇಳಿಕೊಂಡರು.

ಈ ಭಾರಿ ನನ್ನ ಪ್ರಕಾರ ಎಂಟಿಬಿ ಮೂರನೇ ಸ್ಥಾನಕ್ಕೆ ಹೋಗ್ತಾನೆ. ಎರಡನೇ ಸ್ಥಾನ ಪಕ್ಷೇತರ ಅಭ್ಯರ್ಥಿ ಪಡೆಯಬಹುದು.ಪಕ್ಷಕ್ಕೆ ದ್ರೋಹ ಮಾಡಿದ ಅನರ್ಹರು ಯಾರು ಗೆಲ್ಲಲ್ಲ ಎಂದು ಸಿದ್ದರಾಮಯ್ಯ ಎಂಟಿಬಿ ವಿರುದ್ಧ ವಾಗ್ದಾಳಿ ನಡೆಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ