ಆ್ಯಪ್ನಗರ

ನೀರಿನ ಬವಣೆ ನೀಗಿಸುವುದೇ ನನ್ನ ಗುರಿ: ಮೊಯ್ಲಿ

ಯಾವುದೇ ಅಡ್ಡಿ ಎದುರಾದರೂ ಎರಡು ವರ್ಷದಲ್ಲಿ ಕ್ಷೇತ್ರಕ್ಕೆ ಎತ್ತಿನಹೊಳೆ ನೀರನ್ನು ಅರಿಸುವುದು ನನ್ನ ಪ್ರಥಮ ಆಧ್ಯತೆಯಾಗಿದೆ.ನನಗೆ ಅಧಿಕಾರದ ಅವಶ್ಯಕತೆಯಿಲ್ಲ,ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವನಾಗಿ, ಸಂಸದನಾಗಿ ಅನೇಕ ಹುದ್ದೆಯನ್ನು ಅನುಭವಿಸಿದ್ದೇನೆ. ಆದರೆ ನನ್ನ ಕ್ಷೇತ್ರದ ಜನತೆಯ ನೀರಿನ ಬವಣೆ ತೀರಿಸಬೇಕೆನ್ನುವುದೆ ನನ್ನ ಗುರಿಯಾಗಿದೆ ಎಂದು ಕಾಂಗ್ರೆಸ್‌ ಅಭ್ಯರ್ಥಿ ಡಾ. ಎಂ.ವೀರಪ್ಪಮಯ್ಲಿ ಹೇಳಿದರು

Vijaya Karnataka 12 Apr 2019, 3:36 pm
ದೊಡ್ಡಬಳ್ಳಾಪುರ ಯಾವುದೇ ಅಡ್ಡಿ ಎದುರಾದರೂ ಎರಡು ವರ್ಷದಲ್ಲಿ ಕ್ಷೇತ್ರಕ್ಕೆ ಎತ್ತಿನಹೊಳೆ ನೀರನ್ನು ಅರಿಸುವುದು ನನ್ನ ಪ್ರಥಮ ಆಧ್ಯತೆಯಾಗಿದೆ.ನನಗೆ ಅಧಿಕಾರದ ಅವಶ್ಯಕತೆಯಿಲ್ಲ,ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವನಾಗಿ, ಸಂಸದನಾಗಿ ಅನೇಕ ಹುದ್ದೆಯನ್ನು ಅನುಭವಿಸಿದ್ದೇನೆ. ಆದರೆ ನನ್ನ ಕ್ಷೇತ್ರದ ಜನತೆಯ ನೀರಿನ ಬವಣೆ ತೀರಿಸಬೇಕೆನ್ನುವುದೆ ನನ್ನ ಗುರಿಯಾಗಿದೆ ಎಂದು ಕಾಂಗ್ರೆಸ್‌ ಅಭ್ಯರ್ಥಿ ಡಾ. ಎಂ.ವೀರಪ್ಪಮಯ್ಲಿ ಹೇಳಿದರು.
Vijaya Karnataka Web my goal is to eliminate the water problem moily
ನೀರಿನ ಬವಣೆ ನೀಗಿಸುವುದೇ ನನ್ನ ಗುರಿ: ಮೊಯ್ಲಿ


ತಾಲೂಕಿನ ಕನಸವಾಡಿ, ಮಧುರೆ, ದೊಡ್ಡಬೆಳವಂಗಲ, ಕೊನಘಟ್ಟ, ಬಾಶೆಟ್ಟಿಹಳ್ಳಿ ಗಳಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕಾಂಗ್ರೆಸ್‌ ಅಭ್ಯರ್ಥಿಪರ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷ ಗಳು ಜಂಟಿಯಾಗಿ ಚುನಾವಣಾ ಪ್ರಚಾರ ಸಭೆಗಳನ್ನು ನಡೆಸಿದರು. ಈ ವೇಳೆ ಮಾತನಾಡಿದ ಅವರು, ಬಯಲು ಸೀಮೆಗೆ ನೀರು ಹಸಿರುವುದನ್ನು ತಡೆಯಲು ಬಿಜೆಪಿ ಅನೇಕ ಪ್ರಯತ್ನ ನಡೆಸುತ್ತಿದೆ.ಎತ್ತಿನ ಹೊಳೆ ಯೋಜನೆ ವಿರುದ್ದ ಹೋರಾಟಕ್ಕೆ ಬೆಂಬಲ ನೀಡಿದ್ದು, ಕೆಸಿವ್ಯಾಲಿ ಮುಂತಾದ ಯೋಜನೆಗಳಿಗೆ ಅಡ್ಡಿ ಪಡಿಸುತ್ತಿದೆ. ಆದರೆ ಯಾವುದೇ ಅಡ್ಡಿ ಎದುರಾದರೂ ಎರಡು ವರ್ಷದಲ್ಲಿ ನೀರು ಹರಿಸಲಾಗುವುದು ಎಂದರು.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅವರ ಅಭಿವೃದ್ಧಿ ಯೋಜನೆಗಳು ಏನೆಂದು ಜನಕ್ಕೆ ಹೇಳಿ ಮತ ಯಾಚನೆ ಮಾಡಲಿ. ಅದನ್ನು ಬಿಟ್ಟು ಬಯಲು ಸೀಮೆಗೆ ಅಗತ್ಯವಾದ ಎತ್ತಿನಹೊಳೆ ಯೋಜನೆ ಪ್ರಗತಿಯಲ್ಲಿದ್ದರೂ. ಈ ಯೋಜನೆಯಿಂದ ನೀರೇ ಬರುವುದಿಲ್ಲ ಎಂದು ಕಾಂಗ್ರೆಸ್‌ ಅಭಿವೃದ್ಧಿ ಕಾರ್ಯಗಳನ್ನು ನಕಾರಾತ್ಮಕವಾಗಿ ಬಿಂಬಿಸಿ ಜನಗಳ ತೆಲೆ ಕಡೆಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಶಾಸಕ ಟಿ.ವೆಂಣಕಟರಮಣಯ್ಯ ಮಾತನಾಡಿ, ಬಿಜೆಪಿಯವರು ಮೋದಿ ಮಂತ್ರ ಪಟಿಸುತ್ತಾ ಮತ ಯಾಚನೆ ಮಾಡುತ್ತಿದ್ದಾರೆ. ಆದರೆ ಮೋದಿ ಈ ಕ್ಷೇತ್ರಕ್ಕೆ ಏನು ನೀಡಿದ್ದಾರೆ ಎಂಬುದನ್ನು ಜನ ಅರಿತು ಕಾಂಗ್ರೆಸ್‌ಗೆ ಮತ ಚಲಾಯಿಸುವ ಮೂಲಕ ಪ್ರಜ್ಞಾವಂತಿಕೆ ಮರೆಯಬೇಕಿದೆ ಎಂದರು.

ಜೆಡಿಎಸ್‌ ಜಿಲ್ಲಾ ಅಧ್ಯಕ್ಷ ಬಿ.ಮುನೇಗೌಡ ಮಾತನಾಡಿ, ತನ್ನ ಸ್ವ ಕ್ಷೇತ್ರದಲ್ಲಿ ವಿರೋಧವಿದ್ದರು ತನ್ನ ಕ್ಷೇತ್ರದ ಜನತೆಯ ನೀರಿನ ಬವಣೆ ನೀಗಿಸಲು ಭಗೀರಥ ಪ್ರಯತ್ನ ನಡೆಸುತ್ತಿರುವ ವೀರಪ್ಪಮೊಯ್ಲಿ ಕಾರ್ಯ ಪ್ರಶಂಸನೀಯವಾಗಿದೆ. ತುಮಕೂರಿನಲ್ಲಿ ದೇವೇಗೌಡ ಹಾಗೂ ಚಿಕಬಳ್ಳಾಪುರದಲ್ಲಿ ವೀರಪ್ಪಮೊಯ್ಲಿ ಗೆದ್ದಾಗ ಮಾತ್ರ ಈ ವ್ಯಾಪ್ತಿಯಲ್ಲಿನ ನೀರಿನ ಸಮಸ್ಯೆ ಬಗೆಹರಿಯಲು ಸಾಧ್ಯವೆಂದರು.

ಚುನಾವಣಾ ಪ್ರಚಾರದಲ್ಲಿ ಮಾಜಿ ಶಾಸಕ ಆರ್‌.ಜಿ.ವೆಂಕಟಾಚಲಯ್ಯ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮಮ್ಮ, ತಾಲೂಕು ಜೆಡಿಎಸ್‌ ಅಧ್ಯಕ್ಷ ಲಕ್ಷ್ಮಿಪತಯ್ಯ ಸೇರಿದಂತೆ ಸ್ಥಳೀಯ ಮುಖಂಡರು, ಕಾಂಗ್ರೆಸ್‌ ಎಲ್ಲಾ ವಿಭಾಗ ಬ್ಲಾಕ್‌ ಅಧ್ಯಕ್ಷ ರು, ಜೆಡಿಎಸ್‌ ಮುಖಂಡರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ