ವಿಕ ಸುದ್ದಿಲೋಕ ದೊಡ್ಡಬಳ್ಳಾಪುರ
ವಿವಾಹವಾದ ಒಂದೇ ತಿಂಗಳಿಗೆ ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಜೀವನದ ದುರಂತ ಅಂತ್ಯ ಕಂಡಿರುವ ಹೃದಯ ವಿದ್ರಾವಕ ಘಟನೆ ತಾಲೂಕಿನ ವೀರಾಪುರ ಬಳಿ ನಡೆದಿದೆ. ಮೃತ ಪ್ರೇಮಿಗಳನ್ನು ನಗರದ ಶಾಂತಿನಗರ ವಾಸಿಗಳಾದ ಲಕ್ಷ್ಮಿಪತಿ(ವಿಜಯ್) (27), ಲೀಲಾವತಿ(18) ಎಂದು ಗುರುತಿಸಲಾಗಿದೆ.
ವೀರಾಪುರ ಗ್ರಾಮದ ರೈಲ್ವೆ ಗೇಟ್ ಬಳಿ ಸೋಮವಾರ ಬೆಳಗ್ಗೆ ಹೈದರಾಬಾದ್ನಿಂದ ಬೆಂಗಳೂರಿಗೆ ಬರುತ್ತಿದ್ದ ಕಾಚಿಗುಡ ಎಕ್ಸ್ಪ್ರೆಸ್ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇವರಿಬ್ಬರು ಅಂತರ್ಜಾತಿವರಾಗಿದ್ದು, ಪೊಷಕರ ವಿರೋಧದ ನಡೆವೆ ಮದುವೆಯಾಗಿದ್ದರು. ಯುವತಿಯ ಸೋದರ ಮಾವ ಮಂಜುನಾಥ್ ನೀಡುತ್ತಿದ್ದ ಕಿರುಕುಳದಿಂದ ಪ್ರೇಮಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ತನ್ನ ಸಾವಿಗೆ ಮಂಜುನಾಥ್ ಕಾರಣ ಎಂದು ಯುವತಿ ಬರೆದಿಟ್ಟಿರುವ ಡೆತ್ನೋಟ್ ಪತ್ತೆಯಾಗಿದೆ.
...............
ವಿವಾಹವಾದ ಒಂದೇ ತಿಂಗಳಿಗೆ ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಜೀವನದ ದುರಂತ ಅಂತ್ಯ ಕಂಡಿರುವ ಹೃದಯ ವಿದ್ರಾವಕ ಘಟನೆ ತಾಲೂಕಿನ ವೀರಾಪುರ ಬಳಿ ನಡೆದಿದೆ. ಮೃತ ಪ್ರೇಮಿಗಳನ್ನು ನಗರದ ಶಾಂತಿನಗರ ವಾಸಿಗಳಾದ ಲಕ್ಷ್ಮಿಪತಿ(ವಿಜಯ್) (27), ಲೀಲಾವತಿ(18) ಎಂದು ಗುರುತಿಸಲಾಗಿದೆ.
ವೀರಾಪುರ ಗ್ರಾಮದ ರೈಲ್ವೆ ಗೇಟ್ ಬಳಿ ಸೋಮವಾರ ಬೆಳಗ್ಗೆ ಹೈದರಾಬಾದ್ನಿಂದ ಬೆಂಗಳೂರಿಗೆ ಬರುತ್ತಿದ್ದ ಕಾಚಿಗುಡ ಎಕ್ಸ್ಪ್ರೆಸ್ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇವರಿಬ್ಬರು ಅಂತರ್ಜಾತಿವರಾಗಿದ್ದು, ಪೊಷಕರ ವಿರೋಧದ ನಡೆವೆ ಮದುವೆಯಾಗಿದ್ದರು. ಯುವತಿಯ ಸೋದರ ಮಾವ ಮಂಜುನಾಥ್ ನೀಡುತ್ತಿದ್ದ ಕಿರುಕುಳದಿಂದ ಪ್ರೇಮಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ತನ್ನ ಸಾವಿಗೆ ಮಂಜುನಾಥ್ ಕಾರಣ ಎಂದು ಯುವತಿ ಬರೆದಿಟ್ಟಿರುವ ಡೆತ್ನೋಟ್ ಪತ್ತೆಯಾಗಿದೆ.
...............