ಆ್ಯಪ್ನಗರ

ತಿಂಡ್ಲು ಸರ್ಕಲ್‌ನಲ್ಲಿ ವ್ಯವಸ್ಥಿತ ತಂಗುದಾಣ ಇಲ್ಲ: ಗ್ರಾಮಸ್ಥರ ಅಳಲು

ವ್ಯವಸ್ಥಿತ ತಂಗುದಾಣ ಇಲ್ಲದೆ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಸುಮಾರು ವರ್ಷಗಳಿಂದ ಪರದಾಡುವ ಸ್ಥಿತಿ ಇದ್ದು, ಗ್ರಾಮಸ್ಥರು ರಸ್ತೆಯಲ್ಲೇ ನಿಂತು ಬಸ್‌ಗಳಿಗೆ ಕಾಯುವ ಪರಿಸ್ಥಿತಿ ಎದುರಾಗಿದೆ ಎಂದು ಸ್ಥಳೀಯ ಗ್ರಾಮಸ್ಥರು ಆರೋಪಿಸಿದ್ದಾರೆ.

Vijaya Karnataka 15 Nov 2018, 3:52 pm
ಕುಂದಾಣ: ವ್ಯವಸ್ಥಿತ ತಂಗುದಾಣ ಇಲ್ಲದೆ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಸುಮಾರು ವರ್ಷಗಳಿಂದ ಪರದಾಡುವ ಸ್ಥಿತಿ ಇದ್ದು, ಗ್ರಾಮಸ್ಥರು ರಸ್ತೆಯಲ್ಲೇ ನಿಂತು ಬಸ್‌ಗಳಿಗೆ ಕಾಯುವ ಪರಿಸ್ಥಿತಿ ಎದುರಾಗಿದೆ ಎಂದು ಸ್ಥಳೀಯ ಗ್ರಾಮಸ್ಥರು ಆರೋಪಿಸಿದ್ದಾರೆ.
Vijaya Karnataka Web no bus shelter at tindlu ciricle
ತಿಂಡ್ಲು ಸರ್ಕಲ್‌ನಲ್ಲಿ ವ್ಯವಸ್ಥಿತ ತಂಗುದಾಣ ಇಲ್ಲ: ಗ್ರಾಮಸ್ಥರ ಅಳಲು


ಕುಂದಾಣ ಹೋಬಳಿಯ ಐವಿಸಿ ರಸ್ತೆ ಮಾರ್ಗದಲ್ಲಿ ಬರುವ ತಿಂಡ್ಲು ಸರ್ಕಲ್‌ನಲ್ಲಿ ಸುಮಾರು ವರ್ಷಗಳಿಂದ ಇರುವ ತಂಗುದಾಣ ಇದ್ದು ಇಲ್ಲದಂತೆ ಆಗಿದೆ. ತಂಗುದಾಣ ಸಂಪೂರ್ಣ ಶಿಥಿಲಗೊಂಡಿದ್ದು, ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿವೆ. ಮಳೆ ಬಂದರೆ ತಂಗುದಾಣದಲ್ಲಿ ನೀರು ಸೋರುತ್ತದೆ. ತಂಗುದಾಣದ ಮೇಲ್ಛಾವಣಿ ಹಾಗೂ ಮುಂಭಾಗದಲ್ಲಿ ಸ್ವಚ್ಛತೆಯ ನಿರ್ವಹಣೆ ಇಲ್ಲದೆ ಸಂಪೂರ್ಣ ಹದಗೆಟ್ಟಿದೆ.

ದಿನನಿತ್ಯ ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಇಲ್ಲಿಗೆ ಬರುತ್ತಾರೆ. ಸುಮಾರು 3-4 ಬಿಎಂಟಿಸಿ ಬಸ್‌ಗಳು ಈ ಮಾರ್ಗವಾಗಿ ಚಲಿಸುತ್ತವೆ. ದ್ಯಾವರಹಳ್ಳಿ, ಇಂಡ್ರಸನಹಳ್ಳಿ, ಚಪ್ಪರದಕಲ್ಲು, ಉಗನವಾಡಿ ಗ್ರಾಮಗಳಿಗೆ ಸಂಪರ್ಕ ರಸ್ತೆ ಇದಾಗಿದೆ. ದೇವನಹಳ್ಳಿ ಪಟ್ಟಣದಿಂದ ಐವಿಸಿ ರಸ್ತೆ ಮಾರ್ಗವಾಗಿ ದೊಡ್ಡಬಳ್ಳಾಪುರ, ಯಲಹಂಕ, ಬೆಂಗಳೂರಿಗೆ ಹೋಗಲು ಸಂಪರ್ಕ ರಸ್ತೆ ಇದಾಗಿದೆ. ಸಮೀಪದಲ್ಲಿಯೇ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನ ಇರುವುದರಿಂದ ಜನಸಂದಣಿ ಹೆಚ್ಚಾಗಿದೆ. ಆದರೆ ಇಲ್ಲಿ ಯಾವುದೇ ಅಭಿವೃದ್ಧಿ ಕಾರ್ಯವಾಗುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಸ್ಥಳೀಯ ಗ್ರಾಮಸ್ಥ ಅನಿಲ್‌ ಕುಮಾರ್‌ ಮಾತನಾಡಿ, ಈ ರಸ್ತೆ ಹಲವಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮಾರ್ಗವಾಗಿದೆ. ತಿಂಡ್ಲು ಸರ್ಕಲ್‌ನಲ್ಲಿ 4 ವಿವಿಧ ಮಾರ್ಗಗಳು ಇದ್ದು, 4 ದಿಕ್ಕಿನಲ್ಲಿ ವಾಹನಗಳು ಚಲಿಸುತ್ತವೆ. ಇಲ್ಲಿ ತಂಗುದಾಣ ಶಿಥಿಲಗೊಂಡಿರುವುದರಿಂದ ಗ್ರಾಮಸ್ಥರು ತಂಗುದಾಣದ ಮೊರೆ ಹೋಗದೆ ರಸ್ತೆ ಬದಿಯಲ್ಲಿ ನಿಲ್ಲುವಂತೆ ಆಗಿದೆ. ಈ ಭಾಗದಲ್ಲಿ ಕಾರ್ಯ ನಿರ್ವಹಿಸುವ ಸರಕಾರಿ ಅಧಿಕಾರಿಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತಾರೆ. ಆದರೂ ಕಂಡು ಕಾಣದಂತೆ ಇರುವುದು ಸರಿಯಲ್ಲ ಎಂದು ಪ್ರಶ್ನಿಸಿದರು. ಈಗಲಾದರೂ ಸಂಬಂಧಪಟ್ಟ ಗ್ರಾಪಂ ಅಧಿಕಾರಿಗಳು ಇತ್ತ ಗಮನ ಹರಿಸಿ ನೂತನ ತಂಗುದಾಣ ನಿರ್ಮಿಸಿಕೊಟ್ಟರೆ ಸಾರ್ವಜನಿಕರು ಮತ್ತು ಗ್ರಾಮಸ್ಥರಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.

ಪಿಡಿಒ ಹೇಳಿಕೆ: ಗ್ರಾಮಸ್ಥರು ಇದುವರೆಗೂ ತಂಗುದಾಣದ ದುರಸ್ಥಿಯ ಬಗ್ಗೆಯಾಗಲಿ, ನವೀಕರಣದ ಬಗ್ಗೆಯಾಗಲಿ ನಮ್ಮ ಗಮನಕ್ಕೆ ತಂದಿಲ್ಲ. ತಂಗುದಾಣದ ಶಿಥಿಲಾವಸ್ಥೆ ಹಾಗೂ ಸ್ವಚ್ಛತೆಯ ಬಗ್ಗೆ ಪರಿಶೀಲನೆ ಮಾಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಇದೇ ವೇಳೆ ಗ್ರಾಮಸ್ಥರಾದ ಆಂಜಿನಪ್ಪ, ಅಂಗಡಿ ಡಿ.ಎಂ. ಮುನಿರಾಜು, ನಂಜಪ್ಪ, ಗಿರಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ