ಆ್ಯಪ್ನಗರ

ಟೋಲ್‌: ಪ್ರಯಾಣಿಕರಿಗೆ ತೊಂದರೆ

ಸತತವಾಗಿ ಹಲವಾರು ಬಾರಿ ಟೋಲ್‌ ಮಾಲೀಕರೊಂದಿಗೆ ಚರ್ಚಿಸಿದರೂ ಮತ್ತೆ ಮತ್ತೆ ಸ್ಥಳೀಯರ ತಾಳ್ಮೆಯನ್ನು ಪರಿಶೀಲಿಸುತ್ತಲೇ ಇದ್ದಾರೆ. ಬಿಎಂಟಿಸಿ ಬಸ್‌ನವರು ಪಾಸ್‌ ಇದ್ದರೂ 6 ರೂ. ಹೆಚ್ಚುವರಿ ಹಣ ವಸೂಲಿಯನ್ನು ಪ್ರತಿ ಪ್ರಯಾಣಕ್ಕೆ ಪಡೆಯುತ್ತಿರುವುದು ಸರಿಯಲ್ಲ. ಪ್ರಶ್ನಿಸಿದರೆ ಟೋಲ್‌ ಸುಂಕ ಕಟ್ಟಲು ಪ್ರಯಾಣಿಕರಿಂದ ಹೆಚ್ಚಾಗಿ 6 ರೂ. ಪಡೆಯಲಾಗುತ್ತಿದೆ ಎಂದು ಉತ್ತರಿಸುತ್ತಾರೆ. ಇದರಿಂದ ಪ್ರಯಾಣಿಕರಿಗೆ ಅನನುಕೂಲವಾಗುತ್ತಿದೆ ಎಂದು ಸುವರ್ಣ ಜನಶಕ್ತಿ ವೇದಿಕೆ ರಾಜ್ಯಾಧ್ಯಕ್ಷ ನಾಗೇನಹಳ್ಳಿ ಕೃಷ್ಣಮೂರ್ತಿ ತಿಳಿಸಿದರು.

Vijaya Karnataka 11 Dec 2018, 5:00 am
ದೇವನಹಳ್ಳಿ: ಸತತವಾಗಿ ಹಲವಾರು ಬಾರಿ ಟೋಲ್‌ ಮಾಲೀಕರೊಂದಿಗೆ ಚರ್ಚಿಸಿದರೂ ಮತ್ತೆ ಮತ್ತೆ ಸ್ಥಳೀಯರ ತಾಳ್ಮೆಯನ್ನು ಪರಿಶೀಲಿಸುತ್ತಲೇ ಇದ್ದಾರೆ. ಬಿಎಂಟಿಸಿ ಬಸ್‌ನವರು ಪಾಸ್‌ ಇದ್ದರೂ 6 ರೂ. ಹೆಚ್ಚುವರಿ ಹಣ ವಸೂಲಿಯನ್ನು ಪ್ರತಿ ಪ್ರಯಾಣಕ್ಕೆ ಪಡೆಯುತ್ತಿರುವುದು ಸರಿಯಲ್ಲ. ಪ್ರಶ್ನಿಸಿದರೆ ಟೋಲ್‌ ಸುಂಕ ಕಟ್ಟಲು ಪ್ರಯಾಣಿಕರಿಂದ ಹೆಚ್ಚಾಗಿ 6 ರೂ. ಪಡೆಯಲಾಗುತ್ತಿದೆ ಎಂದು ಉತ್ತರಿಸುತ್ತಾರೆ. ಇದರಿಂದ ಪ್ರಯಾಣಿಕರಿಗೆ ಅನನುಕೂಲವಾಗುತ್ತಿದೆ ಎಂದು ಸುವರ್ಣ ಜನಶಕ್ತಿ ವೇದಿಕೆ ರಾಜ್ಯಾಧ್ಯಕ್ಷ ನಾಗೇನಹಳ್ಳಿ ಕೃಷ್ಣಮೂರ್ತಿ ತಿಳಿಸಿದರು.
Vijaya Karnataka Web passengers affected by toll
ಟೋಲ್‌: ಪ್ರಯಾಣಿಕರಿಗೆ ತೊಂದರೆ


ಸಾದಹಳ್ಳಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಸುವರ್ಣ ಜನಶಕ್ತಿ ವೇದಿಕೆಯ ರೈತ ಘಟಕದ ಗೌರವಾಧ್ಯಕ್ಷ ಜಯರಾಮಯ್ಯ ಅವರ ಹುಟ್ಟುಹಬ್ಬ ಸಂದರ್ಭದಲ್ಲಿ ಅವರನ್ನು ಅಭಿನಂದಿಸಿ ಮಾತನಾಡಿದರು.

ಈ ಭಾಗದ ರೈತರಿಗೆ ಯಾವುದೇ ರೀತಿಯ ಕುಂದುಕೊರತೆಗಳಿಲ್ಲದೆ ಸಹಕರಿಸಲು ನಮ್ಮ ಸಂಘಟನೆ ಮುಂದಾಗುತ್ತದೆ. ಟೋಲ್‌ ವಿಚಾರವಾಗಿ ಕ್ಷೇತ್ರದ ಶಾಸಕರು ಹಾಗೂ ಟೋಲ್‌ ಅಧಿಕಾರಿಗಳೊಂದಿಗೆ ಸಭೆ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಸವೀರ್‍ಸ್‌ ರಸ್ತೆ ನಿರ್ಮಾಣವೂ ಆಗದಿರುವುದು ಟೋಲ್‌ ಅಧಿಕಾರಿಗಳ ಬೇಜಾಬ್ದಾರಿತನ ಎದ್ದು ಕಾಣುತ್ತಿದೆ. ಇದೇ ರೀತಿ ಮುಂದುವರಿದರೆ ಬೃಹತ್‌ ಪ್ರತಿಭಟನೆಯ ಮೂಲಕ ತಕ್ಕ ಪಾಠ ಕಲಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇದೇ ಸಂದರ್ಭದಲ್ಲಿ ತಾಪಂ ಸದಸ್ಯ ಸಾದಹಳ್ಳಿ ಮಹೇಶ್‌, ಸುಜವೇ ತಾಲೂಕು ಅಧ್ಯಕ್ಷ ನರೇಂದ್ರ ಬಾಬು, ಜೆಡಿಎಸ್‌ ಪ್ರಚಾರ ಸಮಿತಿ ಅಧ್ಯಕ್ಷ ನೆರಗನಹಳ್ಳಿ ಶ್ರೀನಿವಾಸ್‌, ರಾಜ್ಯ ಸಮಿತಿ ಸದಸ್ಯ ಪಿ.ನಾಗೇಶ್‌, ಜಿಲ್ಲಾ ಸಮಿತಿ ಸದಸ್ಯ ಚಂದ್ರು, ಗ್ರಾಮಸ್ಥರು ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ