ಆ್ಯಪ್ನಗರ

7ಲಕ್ಷ ಮೌಲ್ಯದ ಸಿಗರೇಟು ಕದ್ದ ಆರೋಪಿ ಅಂದರ್: 2 ಲಕ್ಷದ 5ಸಾವಿರ ಮಾಲು ವಶ

7ಲಕ್ಷ ಮೌಲ್ಯದ ಸಿಗರೇಟುಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರ ತಂಡ ಬಂಧಿಸಿ ಹಣವನ್ನು ವಶಕ್ಕೆ ಪಡೆದಿದ್ದಾರೆ, ಮಾತ್ರವಲ್ಲದೇ 2 ಲಕ್ಷದ 5ಸಾವಿರ ಮಾಲನ್ನು ವಶಪಡಿಸಿಕೊಂಡಿದ್ದಾರೆ.

Vijaya Karnataka Web 18 Sep 2020, 10:18 am
ನೆಲಮಂಗಲ: ಗೋದಾಮಿನಲ್ಲಿ ಸಂಗ್ರಹಿಸಲಾಗಿದ್ದ 7ಲಕ್ಷ ಮೌಲ್ಯದ ಸಿಗರೇಟುಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ದಾಬಸ್‌ಪೇಟ್‌ ಪೊಲೀಸ್‌ ಠಾಣೆ ಪಿಎಸ್‌ಐ ಡಿ.ಆರ್‌. ಮಂಜುನಾಥ್‌ ನೇತೃತ್ವದ ಪೊಲೀಸರ ತಂಡ ಬಂಧಿಸಿ ಹಣವನ್ನು ವಶಕ್ಕೆ ಪಡೆದಿದ್ದಾರೆ.
Vijaya Karnataka Web ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ


ರಾಮಕೃಷ್‌(25) ಎ 1 ಆರೋಪಿಯಾಗಿದ್ದು, ಮೂಲತಃ ಮಧ್ಯಪ್ರದೇಶದವನಾಗಿದ್ದಾನೆ. ಖಾಸಗಿಯಾಗಿ ಕೆಲಸ ಮಾಡಿಕೊಂಡಿದ್ದ ಈತ ಸ್ನೇಹಿತ ಅನಿಲ್‌ ಜತೆಯಾಗಿ ಸೋಂಪುರ ಸಮೀಪದ ಗೋದಾಮಿನಲ್ಲಿ ಕಳ್ಳತನ ಮಾಡಿ ಕಡಿಮೆ ದರಕ್ಕೆ ಸಿಗರೇಟುಗಳನ್ನು ಮಾರಾಟ ಮಾಡಿದ್ದರು. 7 ಲಕ್ಷ ಮೌಲ್ಯದ ಸಿಗರೇಟುಗಳನ್ನು 5 ಲಕ್ಷಕ್ಕೆ ಮಾರಾಟ ಮಾಡಿ ಇಬ್ಬರು ಆರೋಪಿಗಳು 2.5 ಲಕ್ಷದಂತೆ ಹಂಚಿಕೊಂಡಿದ್ದರು. ಆರೋಪಿಗಳಿರುವ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ರಾಮಕೃಷ್ಣ ಎಂಬ ಆರೋಪಿ ಬಂಧಿಸಿ 20,5000 ನಗದು ಹಣವನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ಮತೊಬ್ಬ ಆರೋಪಿ ಅನಿಲ್‌ ಪರಾರಿಯಾಗಿದ್ದು, ಶೀಘ್ರದಲ್ಲಿ ಬಂಧನ ಮಾಡಲಾಗುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ಡಿವೈಎಸ್‌ಪಿ ಮೋಹನ್‌ಕುಮಾರ್‌ ತಿಳಿಸಿದರು.

6 ತಿಂಗಳ ಪ್ರಕರಣ 2ಲಕ್ಷ 5ಸಾವಿರ ವಶ
ಕಳ್ಳತನ ಮಾಡಿ ಪರಾರಿಯಾದ ಖದೀಮರಿಂದ ನಗದು ಹಣ ವಶಕ್ಕೆ ಪಡೆಯುವುದು ಬಹಳ ಅಪರೂಪ. ಆದರೆ ದಾಬಸ್‌ಪೇಟೆ ಪೊಲೀಸರು 6 ತಿಂಗಳ ಹಿಂದೆ ಸಿಗರೇಟು ಕಳ್ಳತನ ಮಾಡಿ ಪರಾರಿಯಾಗಿದ್ದ ವ್ಯಕ್ತಿಯಿಂದ ಆರು ತಿಂಗಳ ನಂತರ 2ಲಕ್ಷದ 5 ಸಾವಿರ ನಗದು ಹಣವನ್ನು ವಶಕ್ಕೆ ಪಡೆದಿದ್ದು, ಸಾರ್ವಜನಿಕರ ಪ್ರಶಂಸೆಗೆ ಒಳಗಾಗಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ವೃತ್ತನಿರೀಕ್ಷಕ ಶಿವಣ್ಣ, ಸಬ್‌ಇನ್‌ಸ್ಪೆಕ್ಟರ್‌ ಡಿ.ಆರ್‌. ಮಂಜುನಾಥ್‌ ಹಾಗೂ ಸಿಬ್ಬಂದಿಗಳಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ