ಆ್ಯಪ್ನಗರ

ದೂರು ಪಡೆಯಲು ಮನೆ ಬಾಗಿಲಿಗೆ ಪೊಲೀಸ್‌

ಕಳವು, ಮಹಿಳೆಯರ ಅಪಹರಣ ಪ್ರಕರಣಗಳಲ್ಲಿಮನೆ ಬಾಗಿಲಿಗೆ ಪೊಲೀಸರು ಬಂದು ಪ್ರಕರಣ ದಾಖಲಿಸಿಕೊಳ್ಳುವ ಜನ ಸ್ನೇಹಿ ವ್ಯವಸ್ಥೆಯನ್ನು ಜಾರಿಗೆ ತರಲು ಪೊಲೀಸ್‌ ಇಲಾಖೆ ಚಿಂತನೆ ನಡೆಸಿದ್ದು, ಇದನ್ನು ಅಕ್ಟೋಬರ್‌ ತಿಂಗಳಲ್ಲಿಪ್ರಾಯೋಗಿಕವಾಗಿ ಜಾರಿಗೆ ತರುತ್ತಿದ್ದೇವೆ ಎಂದು ಎಸ್ಪಿ ರವಿ ಡಿ. ಚೆನ್ನಣ್ಣವರ್‌ ತಿಳಿಸಿದರು.

Vijaya Karnataka 14 Sep 2019, 5:00 am
ಜಿಲ್ಲೆಯಲ್ಲಿಕಳವು, ಮಹಿಳೆಯರ ಅಪಹರಣ ಪ್ರಕರಣದಲ್ಲಿಜನಸೇಹಿ ವ್ಯವಸ್ಥೆ ಜಾರಿ: ಎಸ್ಪಿ ರವಿ.ಡಿ.ಚನ್ನಣ್ಣವರ್‌ ಘೋಷಣೆ
Vijaya Karnataka Web police at the door to complain sp ravi d channannavar
ದೂರು ಪಡೆಯಲು ಮನೆ ಬಾಗಿಲಿಗೆ ಪೊಲೀಸ್‌


ದೊಡ್ಡಬಳ್ಳಾಪುರ : ಕಳವು, ಮಹಿಳೆಯರ ಅಪಹರಣ ಪ್ರಕರಣಗಳಲ್ಲಿಮನೆ ಬಾಗಿಲಿಗೆ ಪೊಲೀಸರು ಬಂದು ಪ್ರಕರಣ ದಾಖಲಿಸಿಕೊಳ್ಳುವ ಜನ ಸ್ನೇಹಿ ವ್ಯವಸ್ಥೆಯನ್ನು ಜಾರಿಗೆ ತರಲು ಪೊಲೀಸ್‌ ಇಲಾಖೆ ಚಿಂತನೆ ನಡೆಸಿದ್ದು, ಇದನ್ನು ಅಕ್ಟೋಬರ್‌ ತಿಂಗಳಲ್ಲಿಪ್ರಾಯೋಗಿಕವಾಗಿ ಜಾರಿಗೆ ತರುತ್ತಿದ್ದೇವೆ ಎಂದು ಎಸ್ಪಿ ರವಿ ಡಿ. ಚೆನ್ನಣ್ಣವರ್‌ ತಿಳಿಸಿದರು.

ಅವರು ಇಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ನೇತೃತ್ವದಲ್ಲಿಶುಕ್ರವಾರ ನಡೆದ ಸಮಾಜ ವಿಜ್ಞಾನ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಮನೆಗೆ ಬಂದು ಪ್ರಕರಣ ದಾಖಲಿಸುವ ಜತೆಗೆ ಕಾಲ ಕಾಲಕ್ಕೆ ದೂರಿನ ಪ್ರಗತಿಯನ್ನು ಒದಗಿಸಿಕೊಡಲಿದ್ದೇವೆ ಎಂದರು.

ಅಕ್ಟೋಬರ್‌ ವೇಳೆಗೆ ವಿದ್ಯಾರ್ಥಿಗಳನ್ನು ಪೊಲೀಸ್‌ ಪಹರೆಗೆ ಬಳಸಿಕೆಳ್ಳಲಿದ್ದು, ವಿದ್ಯಾರ್ಥಿ ವಿಭಾಗ, ಹಿರಿಒಯ ನಾಗರಿಕರ ವಿಭಾಗ, ಟ್ರಾಫಿಕ್‌ ವಿಭಾಗವಾಗಿ ವಿಂಗಡನೆ ಮಾಡುವ ಮೂಲಕ ನಗರದಲ್ಲಿಅಪರಾಧ ಪ್ರಕರಣಗಳನ್ನು ಹತ್ತಿಕ್ಕಲು ಪ್ರಯತ್ನಿಸಲಿದ್ದೇವೆ. ಇನ್ನೊಂದು ವರ್ಷವಷ್ಟೆ ತಾವು ಎಸ್ಪಿಯಾಗಿರುವ ಸಾಧ್ಯತೆ ಇದ್ದು, ಪದೋನ್ನತಿ ಹೊಂದುವುದರೊಳಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಉತ್ತಮ ಕ್ರಮಗಳನ್ನು ಜಾರಿಗೊಳಿಸುವ ಮೂಲಕ ಅಪರಾಧ ಪ್ರಕರಣಗಳನ್ನು ತಡೆಯಲು ಪ್ರಾಮಾಣಿಕ ಪಯತ್ನ ಮಾಡುತ್ತೇನೆ. ಇದಕ್ಕೆ ಸಾರ್ವಜನಿಕ ಸಹಕಾರ ಮುಖ್ಯ ಎಂದರು.

ಸಾಧನೆ ಸಾಧಕನ ಸ್ವತ್ತಾಗ ಬೇಕು: ವಿದ್ಯಾರ್ಥಿಗಳಿಗೆ ಸ್ವ ಯಂ ಪ್ರಶ್ನೆ ಮಾಡುವ ಸಾಮರ್ಥ್ಯದೊಂದಿಗೆ ಕುತೂಹಲ ಇದ್ದರೆ ಮಾತ್ರ ಕಲಿಕೆಯೊಂದಿಗೆ ಜ್ಞಾನವನ್ನು ಸಂಪಾದನೆ ಮಾಡಲು ಸಾಧ್ಯ ನಾನು ಐಎಎಸ್‌ ಗುರಿಯಿಟ್ಟುಕೊಂಡು ಮಾಡಿದ ಮೊದಲ ಪ್ರಯತ್ನದಲ್ಲೇ ಐಪಿಎಸ್‌ ಸಾಧ್ಯವಾಯಿತು. ಹೀಗೆ ಸ್ಪಷ್ಟತೆಯೊಂದಿಗೆ ಎಲ್ಲಾಅಡೆ ತಡೆಗಳನ್ನು ಜಯಿಸುವ ತಪಸ್ಸು ನಿಮ್ಮದಾದರೆ ಸಾಧನೆ ಸಾಧಕನ ಸ್ವತ್ತಾಗಲಿದೆ ಎಂದರು.

ವಿದ್ಯಾರ್ಥಿಗಳೊಂದಿಗೆ ಸಂವಾದಿಸಿದರು.ಕಾರ್ಯಕ್ರಮದಲ್ಲಿ ಕಾಲೇಜು ಶಿಕ್ಷಣ ಇಲಾಖೆ ಹೆಚ್ಚುವರಿ ನಿರ್ದೇಶಕ ಎಸ್‌.ಪಿ.ರಾಜಣ್ಣ, ಪ್ರಾಂಶುಪಾಲ ಎನ್‌.ಶ್ರೀನಿವಾಸಯ್ಯ, ಪ್ರಾಧ್ಯಾಪಕ ಡಾ.ಸದಾಶಿವ ರಾಮಚಂದ್ರಗೌಡ, ಪ್ರೊ.ಅಮರನಾರಾಯಣಸ್ವಾಮಿ, ಸಿ.ರಾಮಚಂದ್ರಯ್ಯ, ತಳಗವಾರ ಪ್ರವೀಣ್‌ ಸೇರಿದಂತೆ ಸಿಬ್ಬಂದಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ