ಆ್ಯಪ್ನಗರ

ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಂಚೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗ್ರಾಮೀಣ ಅಂಚೆ ನೌಕರರು ಮಂಗಳವಾರದಿಂದ ಅಂಚೆ ಸೇವೆ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಇಳಿದಿದ್ದಾರೆ.

Vijaya Karnataka 19 Dec 2018, 5:00 am
ಸೂಲಿಬೆಲೆ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗ್ರಾಮೀಣ ಅಂಚೆ ನೌಕರರು ಮಂಗಳವಾರದಿಂದ ಅಂಚೆ ಸೇವೆ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಇಳಿದಿದ್ದಾರೆ.
Vijaya Karnataka Web postal employees indefinite strike demanding fulfillment of demands
ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಂಚೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ


ಸೂಲಿಬೆಲೆ ಅಂಚೆ ಕಚೇರಿ ಮುಂಭಾಗ ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಸಂಘ, ರಾಷ್ಟ್ರೀಯ ಗ್ರಾಮೀಣ ಅಂಚೆ ಸೇವಕರ ಸಂಘಗಳು ಜಂಟಿಯಾಗಿ ಮುಷ್ಕರಕ್ಕೆ ಮುಂದಾಗಿದ್ದು ಕಮಲೇಶ್‌ ಚಂದ್ರ ವರದಿಯನ್ನು ಸಂಪೂರ್ಣ ಜಾರಿಗೊಳಿಸುವಂತೆ ಒತ್ತಾಯಿಸಿದರು.

ಕಮಲೇಶ್‌ ಚಂದ್ರ ವೇತನ ಆಯೋಗದ ಶಿಫಾರಸನ್ನು 2016ರಿಂದಲೇ ಜಾರಿ ಮಾಡಬೇಕು. ಗ್ರಾಚ್ಯುಟಿ ಹಣವನ್ನು ಹೆಚ್ಚಿಸಬೇಕು. ಶೇ.10 ಟಿಆರ್‌ಸಿಎ ವೇತನವನ್ನು ರಿಕವರಿ ಮಾಡಿ ಸಮಾನ ಕಂತುಗಳಲ್ಲಿ ಕಮಲೇಶ್‌ಚಂದ್ರ ವರದಿಯಂತೆ ಇಎಸ್‌ಐ, ಇಪಿಎಫ್‌ ಸ್ಕೀಮ್‌ ಅನ್ನು ಅನುಷ್ಠಾನಗೊಳಿಸಬೇಕು. ವಾರ್ಷಿಕ 30 ದಿನಗಳ ರಜೆ ಒದಗಿಸಬೇಕು.ಅದರಲ್ಲಿ 180 ದಿನಗಳ ರಜೆಯನ್ನು ನೌಕರರ ಖಾತೆಗೆ ಜಮಾ ಮಾಡಿ ಅವರು ನಿವೃತ್ತಿ ಹೊಂದಿದಾಗ ಅದನ್ನು 6 ತಿಂಗಳ ಸಂಬಳ ಸಹಿತ ರಜೆಯನ್ನು 7ನೇ ವೇತನ ಆಯೋಗದ ವರದಿಯಲ್ಲಿ ತಿಳಿಸಿದಂತೆ ಜಾರಿಗೊಳಿಸಬೇಕು. ಮಕ್ಕಳ ವಿದ್ಯಾಭ್ಯಾಸ ಭತ್ಯೆ 6 ಸಾವಿರ ರೂ.ನಂತೆ ವಾರ್ಷಿಕ ಇಬ್ಬರು ಮಕ್ಕಳಿಗೆ ಒದಗಿಸಬೇಕು. 12 ವರ್ಷ, 24 ವರ್ಷ, 36 ವರ್ಷ ಸೇವೆ ಸಲ್ಲಿಸಿದ ನೌಕರರಿಗೆ ವೇತನದಲ್ಲಿ ವಿಶೇಷ ಭತ್ಯೆ, ವಾರ್ಷಿಕ ಇನ್‌ಕ್ರಿಮೆಂಟ್‌ ನೀಡಬೇಕು ಎಂದು ಒತ್ತಾಯಿಸಿದರು.

ಬ್ರಾಂಚ್‌ ಪೋಸ್ಟ್‌ ಆಫೀಸ್‌ಗಳಲ್ಲಿ ಒಬ್ಬರು ಕೆಲಸ ಮಾಡುವ ಜಾಗದಲ್ಲಿ 2 ಹುದ್ದೆಗಳನ್ನು ನೇಮಕ ಮಾಡಿಕೊಳ್ಳಬೇಕು. ಕೆಲಸದ ಸಮಯ 8 ಗಂಟೆ ನಿಗದಿ ಮಾಡಿ ಎಲ್ಲ ಗ್ರಾಮೀಣ ಅಂಚೆ ನೌಕರರನ್ನು ಕಾಯಂ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ವಿಭಾಗೀಯ ಅಧ್ಯಕ್ಷ ಡಿ.ಕೆ. ಮಂಜುನಾಥ್‌, ಮುನಿರಾಜ್‌ ಎಂ. ಶ್ವೇತ, ಮುನಿತಿಮ್ಮಯ್ಯ, ಸುಬ್ಬರಾಮಯ್ಯ, ಬಿ.ಎಂ. ಮಂಜುನಾಥ್‌, ಬಿ.ಡಿ. ವೆಂಕಟೇಶ್‌, ಶ್ರೀನಿವಾಸಶೆಟ್ಟಿ, ಟಿ.ಎಂ ಗೋಪಾಲ್‌, ವೆಂಕಟೇಶಪ್ಪ ಆರ್‌, ಬಸವರಾಜ್‌, ರಾಮಾಂಜಿನಿ, ಅಶ್ವಥಪ್ಪ, ನಾಗೇಂದ್ರ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ