ಆ್ಯಪ್ನಗರ

ಕಾಯಕಯೋಗಿಯ ಆಯಸ್ಸುವೃದ್ಧಿಗೆ ನೆಟ್ಟಿಗರ ಮೊರೆ

ತುಮಕೂರಿನ ಸಿದ್ದಗಂಗಾ ಮಠದ ಶ್ರೀಶಿವಕುಮಾರಸ್ವಾಮಿಗಳು ಅನಾರೋಗ್ಯಕ್ಕೀಡಾಗಿರುವುದರಿಂದ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಅವರ ಅಭಿಮಾನಿಗಳು, ಭಕ್ತರು ಆರೋಗ್ಯ ಸುಸ್ಥಿರಕ್ಕಾಗಿ ಹಾಗೂ ಆಯುಷ್ಯವೃದ್ಧಿಗಾಗಿ ವಿಶೇಷ ಪ್ರಾರ್ಥನೆಗಳನ್ನು ಮಾಡುತ್ತಿದ್ದಾರೆ.

Vijaya Karnataka 18 Jan 2019, 5:00 am
ಶಿವಕುಮಾರಸ್ವಾಮಿಗಳು ಗುಣಮುಖರಾಗಲೆಂದು ಜಾಲತಾಣದಲ್ಲಿ ಪ್ರಾರ್ಥನೆ | ವೈರಲ್‌ ಆಗುತ್ತಿರುವ ಸ್ವಾಮೀಜಿ ವೀಡಿಯೋ
Vijaya Karnataka Web prayer on the website for siddaganga swamiji health
ಕಾಯಕಯೋಗಿಯ ಆಯಸ್ಸುವೃದ್ಧಿಗೆ ನೆಟ್ಟಿಗರ ಮೊರೆ


* ನಾಗರಾಜು.ಎ ದೊಡ್ಡಬಳ್ಳಾಪುರ

ತುಮಕೂರಿನ ಸಿದ್ದಗಂಗಾ ಮಠದ ಶ್ರೀಶಿವಕುಮಾರಸ್ವಾಮಿಗಳು ಅನಾರೋಗ್ಯಕ್ಕೀಡಾಗಿರುವುದರಿಂದ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಅವರ ಅಭಿಮಾನಿಗಳು, ಭಕ್ತರು ಆರೋಗ್ಯ ಸುಸ್ಥಿರಕ್ಕಾಗಿ ಹಾಗೂ ಆಯುಷ್ಯವೃದ್ಧಿಗಾಗಿ ವಿಶೇಷ ಪ್ರಾರ್ಥನೆಗಳನ್ನು ಮಾಡುತ್ತಿದ್ದಾರೆ.

ಸಿದ್ದಗಂಗಾ ನೆಲದಲ್ಲಿ ಶಿಕ್ಷ ಣ ಪಡೆದ ಅನೇಕರು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಶಿವಕುಮಾರಸ್ವಾಮಿಯವರ ಆರೋಗ್ಯದ ಕುರಿತಾಗಿ ಶೀಘ್ರಗುಣಮುಖರಾಗಲಿ ಎಂದು ಬಯಸುತ್ತಾ ವಿಶೇಷ ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ.

ಅಪಾರ ಶಿಷ್ಯವರ್ :

ತುಮಕೂರಿನ ಸಮೀಪದ ನಂಟು ಹೊಂದಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ, ದೊಡ್ಡಬಳ್ಳಾಪುರ, ದೇವನಹಳ್ಳಿ ಹಾಗೂ ಹೊಸಕೋಟೆ ಭಾಗದಲ್ಲಿ ಅಪಾರ ಸಂಖ್ಯೆಯಲ್ಲಿ ಸಿದ್ದಗಂಗಾ ಮಠದಲ್ಲಿ ಶಿಕ್ಷ ಣ ಪಡೆದ ಶಿಷ್ಯವರ್ಗವಿದೆ. ಮಠದಲ್ಲಿ ಶಿಕ್ಷ ಣ, ವಸತಿ, ಅನ್ನವನ್ನು ಪಡೆದ ಅನೇಕರು ಶಿಕ್ಷ ಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಶ್ರೀಶಿವಕುಮಾರ ಸ್ವಾಮೀಜಿಗಳ ಆರೋಗ್ಯ ಗುಣಮುಖವಾಗಲಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಖಾತೆಗಳಲ್ಲಿ ಪೋಸ್ಟ್‌ಗಳನ್ನು ಹಾಕುವ ಮೂಲಕ ಮನೆದಾಳದ ಹಂಬಲವನ್ನು ತೆರೆದಿಡುತ್ತಿದ್ದಾರೆ.

ವೈರಲ್‌ ಆದ ವಿಡಿಯೋ!:

ಆಧುನಿಕ ಜಗತ್ತಿನಲ್ಲಿ ಸ್ವಾರ್ಥ ಪ್ರವೃತ್ತಿಯಿಂದ ತುಂಬಿರುವ ಜನರ ನಡುವೆ ನಿಸ್ವಾರ್ಥವಾಗಿ ತ್ರಿವಿಧ ದಾಸೋಹಿಯಾಗಿ ಅಸಂಖ್ಯ ವಿದ್ಯಾರ್ಥಿಗಳಿಗೆ ದಾನಧರ್ಮ ಹಾಗೂ ಸ್ವತಃ ಅವರ ಜೀವನದ ಮೂಲಕ ಸಂದೇಶ ಸಾರುತ್ತಿರುವವರು ಸಿದ್ದಗಂಗೆಯ ಶಿವಕುಮಾರಸ್ವಾಮಿಗಳು. ಅಂತಹ ವಿಶೇಷ ವ್ಯಕ್ತಿ ತಮ್ಮ 111ನೇ ವಯಸ್ಸಿನಲ್ಲಿ ಅನಾರೋಗ್ಯ ಎದುರಾದರೂ ತಮಿಳುನಾಡಿನ ರೇಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಹೋದಾಗ ಆರೋಗ್ಯ ಸರಿಯಿಲ್ಲದಿದ್ದರೂ ನಡೆದುಕೊಂಡು ಹೋಗುವ ಮೂಲಕ ನಡೆದಾಡುವ ದೇವರು ಎನ್ನುವ ಮಾತಿಗೆ ಪರ್ಯಾಯ ಅರ್ಥದಂತಿದ್ದಾರೆ. ಜತೆಗೆ, ತಮಿಳು ನೆಲದ ಆಸ್ಪತ್ರೆಯಲ್ಲಿ ಅನಾರೋಗ್ಯದ ನಡುವೆ ನಿತ್ಯದ ಇಷ್ಟಲಿಂಗ ಪೂಜೆಯನ್ನು ನೆರವೇರಿಸಿದ್ದರು. ಪ್ರಸ್ತುತ ಮಠದಲ್ಲಿ ಸಾಕಷ್ಟು ಅನಾರೋಗ್ಯದ ನಡುವೆ ಕಣ್ತೆರೆಯಲಾಗದ ಸ್ಥಿತಿಯಲ್ಲು ಹಣೆಗೆ ವಿಭೂತಿ ಬಳಿದುಕೊಳ್ಳುತ್ತಿರುವ ವಿಡಿಯೋ ಕ್ಲಿಪ್‌ ಎಲ್ಲ ಕಡೆ ವೈರಲ್‌ ಆಗಿದ್ದು, ಯುವಕರಿಗೆ ಇದು ಸ್ಫೂರ್ತಿಯಾಗಿದೆ ಎಂದು ಸಾಮಾಜಿಕ ಜಾಲತಾಣಗಳ ಗ್ರೂಪ್‌ಗಳಲ್ಲಿ ಕಳಿಸಲಾಗುತ್ತಿದೆ. ಸ್ವಾಮೀಜಿಗಳ ಕಾಯಕಯೋಗದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆಗಳು ವ್ಯಕ್ತವಾಗುತ್ತಿದ್ದು, ಜತೆಗೆ ಅವರ ಆರೋಗ್ಯ ಶೀಘ್ರ ಗುಣಮುಖವಾಗಲಿ ಎಂದು ನೆಟ್ಟಗರು ಬಯಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ