ಆ್ಯಪ್ನಗರ

ಗುತ್ತಿಗೆ ಜಮೀನಿನಲ್ಲಿ 200 ಮೂಟೆ ರಾಗಿ ಬೆಳೆದ ದೇವನಹಳ್ಳಿ ಪ್ರಗತಿ ಪರ ರೈತ ಶ್ರೀರಾಮ್

ಪ್ರತಿವರ್ಷ ರಾಗಿಬೆಳೆಯುವುದರಲ್ಲಿ ನಿಸ್ಸೀಮನಾಗಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಬೈಚಾಪುರದ ಪ್ರಗತಿಪರ ರೈತ ಶ್ರೀರಾಮ್‌ ಈ ಭಾರಿ 200 ಮೂಟೆ ರಾಗಿ ಬೆಳೆದು ಉತ್ತಮ ಸಾಧನೆ ಮಾಡಿದ್ದಾರೆ.

Vijaya Karnataka Web 21 Jan 2020, 7:19 pm
ದೇವನಹಳ್ಳಿ: ಪ್ರತಿವರ್ಷ ರಾಗಿಬೆಳೆಯುವುದರಲ್ಲಿ ನಿಸ್ಸೀಮನಾಗಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಬೈಚಾಪುರದ ಪ್ರಗತಿಪರ ರೈತ ಶ್ರೀರಾಮ್‌ ಈ ಭಾರಿ 200 ಮೂಟೆ ರಾಗಿ ಬೆಳೆದು ಉತ್ತಮ ಸಾಧನೆ ಮಾಡಿದ್ದಾರೆ.
Vijaya Karnataka Web 21 DEVANAHALLI PHOTO- 3


ಕಳೆದ ಸಾಲಿನಲ್ಲಿ150 ಮೂಟೆ ರಾಗಿಬೆಳೆದಿದ್ದ ಶ್ರೀರಾಮ್‌ ಈ ಭಾರಿ 200 ಮೂಟೆ ರಾಗಿ ಬೆಳೆದಿದ್ದಾರೆ. ವಿಶೇಷವೆಂದರೆ ಇವರಿಗೆ ಹೆಚ್ಚು ಜಮೀನಿಲ್ಲದಿದ್ದರೂ, 20 ಎಕರೆ ಜಮೀನನ್ನು ಮತ್ತೊಬ್ಬರಿಂದ ಗುತ್ತಿಗೆ ಆದಾರದಲ್ಲಿ ಪಡೆದು ರಾಗಿ ಬೆಳೆದಿದ್ದಾರೆ. ರಾಗಿ ಬೆಳೆಗಾರರು ಮಳೆಯನ್ನೇ ನಂಬಿ ಬೆಳೆ ಬೆಳೆಯಬೇಕಾದ ಪರಿಸ್ಥಿತಿ ಇದೆ. ಆದರೆ, ಇವರು ಮಳೆ ಇಲ್ಲದ ವೇಳೆ ಅಕ್ಕಪಕ್ಕದ ಜಮೀನಿನ ಕೊಳವೆ ಬಾವಿಯಿಂದ ಟ್ಯಾಂಕರ್‌ ಮೂಲಕ ನೀರು ಹಾಯಿಸಿ ಉತ್ತಮ ರಾಗಿ ಪಸಲು ಪಡೆದಿದ್ದಾರೆ.

200 ಮೂಟೆ ರಾಗಿ ಬೆಳೆಯಲು ಸುಮಾರು 2ಲಕ್ಷ ರೂ. ವೆಚ್ಚ ತಗುಲಿದ್ದು, ಸ್ವಲ್ಪ ಮೇವನ್ನು ಬಡಜನರ ರಾಸುಗಳಿಗೆ ಉಚಿತವಾಗಿ ದಾನ ಮಾಡಿ ಉಳಿದ ಮೇವನ್ನು ಮಾರಾಟ ಮಾಡುತ್ತೇನೆ ಎನ್ನುತ್ತಾರೆ ರೈತ ಶ್ರೀರಾಮ್‌. ರೈತ ಶ್ರೀರಾಮ್‌ ಅವರಿಗೆ ಕಳೆದ ವರ್ಷ ಕೃಷಿ ಇಲಾಖೆಯಿಂದ ಪ್ರಗತಿಪರ ರೈತ ಎಂಬ ಪ್ರಮಾಣ ಪತ್ರ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ